Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏರ್ ಇಂಡಿಯಾ ಸೇವೆ ವಿರುದ್ಧ ಕಿಡಿಕಾರಿದ 'ಬಿಗ್ ಬಾಸ್' ಸ್ಪರ್ಧಿ ಹಿಮಾಂಶಿ
ಹಿಂದಿಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ 13ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ನಟಿ ಹಿಮಾಂಶಿ ಖುರಾನಾ ಏರ್ ಇಂಡಿಯಾ ಸೇವೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಏರ್ ಇಂಡಿಯಾ ಸೇವೆಯ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ.
ಏರ್ ಇಂಡಿಯಾ, ಪ್ರಯಾಣಿಕರ ಬಗ್ಗೆ ಕಾಳಜಿ ತೋರುವುದಿಲ್ಲ. ಕೊನೆಯ ಕ್ಷಣದಲ್ಲಿ ಫ್ಲೈಟ್ ರದ್ದು ಮಾಡಿ, ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಕನಿಷ್ಟ ಸೌಲಭ್ಯವನ್ನೂ ಏರ್ ಇಂಡಿಯಾ ಸಂಸ್ಥೆ ಕಲ್ಪಿಸಿಲ್ಲ ಎಂದಿದ್ದಾರೆ.
ಬಿಗ್ಬಾಸ್ ನಿರೂಪಕ ಕಮಲ್ ಹಾಸನ್ ಮೇಲೆ ಪಕ್ಷಪಾತದ ಆರೋಪ
ಕೊನೆ ಕ್ಷಣದಲ್ಲಿ ವಿಮಾನ ದಿಢೀರ್ ಅಂತ ರದ್ದು ಮಾಡಿರುವುದರಿಂದ ಜನರು ಅಳುತ್ತಿದ್ದರು, ಕೂಗುತ್ತಿದ್ದರು, ಎಲ್ಲರೂ ಖರ್ಚಿಯ ಮೇಲೆ ಕುಳಿತಿದ್ದರು ಏರ್ ಇಂಡಿಯಾ ಸಂಸ್ಥೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಎಂದಿಗೂ ಏರ್ ಇಂಡಿಯಾ ಪ್ಲೈಟ್ ಅನ್ನು ಬುಕ್ ಮಾಡಬೇಡಿ, ಸಾಮಾನ್ಯ ಜನರು ಇಲ್ಲಿ ಅಳುತ್ತಿದ್ದಾರೆ ಮತ್ತು ಮಕ್ಕಳು ಕೂಗುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಬೇರೆ ವಿಮಾನಗಳ ಆಯ್ಕೆ ಸಹ ಇರುವುದಿಲ್ಲ. ಜನರನ್ನು ಹೆಚ್ಚು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಮ್ಯಾನರ್ಸ್ ಇಲ್ಲದ ಸಿಬ್ಬಂದಿ ಎಂದು ಬೇಸರ ಹೊರಹಾಕಿದ್ದಾರೆ.
ಹಿಮಾಂಶಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ, ಹಿಮಾಂಶಿ ಅವರೆ ವಿಮಾನ ಸಂಖ್ಯೆಯನ್ನು ನವೀಕರಿಸಲು ಸಮಸ್ಯೆ ಎದುರಾಗಿದೆ. ಅಗತ್ಯ ಸಹಾಯಕ್ಕಾಗಿ ಸಂಬಂಧ ಪಟ್ಟ ತಂಡ ಕೆಲಸ ಮಾಡುತ್ತಿದೆ'ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಮತ್ತೊಂದು ಟ್ವೀಟ್ ಮಾಡಿ ಹಿಮಾಂಶಿ ಖುರಾನಾ, ದಯವಿಟ್ಟು ಈ ಅನುಭವಕ್ಕಾಗಿ ನಮ್ಮ ಕ್ಷಮೆಯನ್ನು ಸ್ವೀಕರಿಸಿ. ನಮ್ಮ ದೆಹಲಿ ತಂಡದೊಂದಿಗೆ ಪರಿಶೀಲಿಸಿದಂತೆ, ಮುಂದಿನ ವಿಮಾನದಲ್ಲಿ ಚೆಕ್ ಇನ್ ಮಾಡಲಾಗುತ್ತದೆ. ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ನಮ್ಮ ದೆಹಲಿ ವಿಮಾನ ನಿಲ್ದಾಣ ತಂಡ ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Recommended Video
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಮಾಂಶಿ, ನೀವು ಜನರಿಗೆ ಖರ್ಚನ್ನು ಪಾವತಿಸಬೇಕು, ಕ್ಯಾಬ್, ಹೋಟೆಲ್ ಎಲ್ಲಾ ಖರ್ಚನ್ನು ಪಾವತಿಸಬೇಕು ಎಂದು ಹೇಳಿದ್ದಾರೆ.