Don't Miss!
- News ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸಂಜು' ಮಾಡಿದ್ದಕ್ಕೆ ಸಂಜಯ್ ದತ್ ಗೆ ಎಷ್ಟು ಕೋಟಿ ಸಿಕ್ಕಿದೆ?
ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಸಂಜು' ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಎರಡು ವಾರದಲ್ಲೇ ಸುಮಾರು 250 ಕೋಟಿ ಗಳಿಸಿ ಮುಂದೆ ಸಾಗಿದ್ದು, 2018ನೇ ಸಾಲಿನ ಸೂಪರ್ ಹಿಟ್ ಸಿನಿಮಾ ಆಗಿದೆ.
ರಣ್ಬೀರ್ ಕಪೂರ್ ಅವರ ಅದ್ಭುತ ನಟನೆಯಿಂದ 'ಸಂಜು' ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು, ನೆಗಿಟೀವ್ ವಿರ್ಮಶೆ ಬಂದರೂ ಅದನ್ನ ಸೆಡ್ಡು ಹೊಡೆದು ಮುನ್ನುಗ್ಗುತ್ತಿದೆ.
ಇಂತಹ ಹಿಟ್ ಚಿತ್ರಕ್ಕೆ ಸಂಜಯ್ ದತ್ ಅವರ ಬಯೋಪಿಕ್ ಎನ್ನುವುದು ವಿಶೇಷ. ತಮ್ಮ ಬಗ್ಗೆ ಬಯೋಪಿಕ್ ಸಿನಿಮಾ ಮಾಡಲು ಸಂಜಯ್ ದತ್ ಎಷ್ಟು ಹಣ ಪಡೆದಿರಬಹುದು ಎಂಬ ಕುತೂಹಲ ಈಗ ಚರ್ಚೆಯಾಗುತ್ತಿದೆ. 'ಸಂಜು' ಸಿನಿಮಾ ಮಾಡಲು ನಿರ್ಮಾಪಕರಿಂದ ಬಹುದೊಡ್ಡ ಸಂಭಾವನೆ ಪಡೆದಿದ್ದಾರಂತೆ ದತ್. ಹಾಗಿದ್ರೆ ಆ ಮೊತ್ತವೆಷ್ಟು.? ಮುಂದೆ ಓದಿ...
ಬಯೋಪಿಕ್ ಗೆ ಸಿಕ್ಕ ಸಂಭಾವನೆ.?
'ಸಂಜು' ಸಿನಿಮಾ ಮಾಡಲು ನಿರ್ಮಾಪಕರಿಂದ ಸಂಜಯ್ ದತ್ ಪಡೆದಿರುವ ಮೊತ್ತ ಬರೋಬ್ಬರಿ 10 ಕೋಟಿಯಂತೆ. ರಾಜ್ ಕುಮಾರ್ ಹಿರಾನಿ ಮತ್ತು ವಿಧು ವಿನೋದ್ ಚೋಪ್ರಾ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಇವರಿಬ್ಬರಿಗೆ ಮಾತ್ರ ತಮ್ಮ ಜೀವನಕಥೆಯೊಳಗೆ ಪ್ರವೇಶ ಮಾಡಲು ಅನುಮತಿ ನೀಡಿದ್ದರಂತೆ.
ಲಾಭದಲ್ಲಿ ಭಾಗ
ಸಂಜಯ್ ದತ್ ಅವರ ಕಥೆಗೆ ಕೇವಲ ಸಂಭಾವನೆ ಮಾತ್ರವಲ್ಲ, ಚಿತ್ರದಿಂದ ಬರುವ ಲಾಭದಲ್ಲಿ ಶೇಕಡಾವಾರು ಲೆಕ್ಕದಲ್ಲಿ ಹಣ ನೀಡಬೇಕೆಂದು ಕೂಡ ಒಪ್ಪಂದವಾಗಿದೆಯಂತೆ. ಅಂದ್ರೆ, 10 ಕೋಟಿ ಬಿಟ್ಟು ಬರುವ ಲಾಭದಲ್ಲಿ ಭಾಗ.
'ಸಂಜು': ನಿರ್ದೇಶಕರು ಮುಟ್ಟದ ಸಂಜಯ್ ದತ್ ಬದುಕಿನ 10 ಅಧ್ಯಾಯಗಳು
'ಸಂಜು' ಗಳಿಕೆ ಎಷ್ಟಾಗಿದೆ
ರಣ್ಬೀರ್ ಕಪೂರ್ ಅಭಿನಯದ 'ಸಂಜು' ಮೊದಲೆರಡು ದಿನದಲ್ಲಿ 50 ಕೋಟಿ, ಮೂರು ದಿನದಲ್ಲೇ 100 ಕೋಟಿ, ಐದು ದಿನದಲ್ಲಿ 150 ಕೋಟಿ, ಮೊದಲ ವಾರದಲ್ಲಿ 200 ಕೋಟಿ, ಈಗ 250 ಕೋಟಿ ದಾಟಿ ಮುನ್ನುಗ್ಗುತ್ತಿದೆ.
ಮಿಶ್ರಪ್ರತಿಕ್ರಿಯೆ
ಅಂದ್ಹಾಗೆ, 'ಸಂಜು' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಟನೆಯಲ್ಲಿ ಎಲ್ಲವನ್ನ ಮರೆಸುವ ರಣ್ಬೀರ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಆದ್ರೆ, ಸಂಜಯ್ ದತ್ ನಿಜ ಜೀವನದ ಅನೇಕ ವಿಷ್ಯಗಳನ್ನ ಇಲ್ಲಿ ತೋರಿಸಿಲ್ಲ. ಮತ್ತು ದತ್ ಒಳ್ಳೆಯವನು ಮತ್ತು ಅವರ ಅಮಾಯಕತ್ವದ ಕನ್ನಡಿಯಂತೆ ಚಿತ್ರವನ್ನ ಬಿಂಬಿಸಲಾಗಿದೆ ಎಂದು ವಿರ್ಮಶಕರು ಅಭಿಪ್ರಾಯಪಟ್ಟಿದ್ದಾರೆ.