Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾನು ಗೋಮಾಂಸ ತಿನ್ನುವ ಹಿಂದೂ: ರಿಷಿ ಕಪೂರ್
ಚಾಕೋಲೇಟ್ ಹೀರೋ ರಣಬೀರ್ ಕಪೂರ್ ತಂದೆ, ಬಾಲಿವುಡ್ ಹಿರಿಯ ನಟ, ಒಂದು ಕಾಲದ ಲವರ್ ಬಾಯ್ ರಿಷಿ ಕಪೂರ್ ಅವರು ಗೋಮಾಂಸ ನಿಷೇಧದ ಬಗ್ಗೆ ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅವರು ಹಾಕಿರುವ ಸ್ಟೇಟ್ ಮೆಂಟ್ ಬಾಲಿವುಡ್ ನಲ್ಲಿ ತೀವ್ರ ಚರ್ಚೆಗೆ ನಾಂದಿಹಾಡಿದೆ.
"ನಾನು ಬಹಳ ಕೋಪದಲ್ಲಿದ್ದೇನೆ. ಆಹಾರವನ್ನು ಧರ್ಮದೊಂದಿಗೆ ಏಕೆ ಥಳುಕುಹಾಕುತ್ತೀರಿ. ನಾನು ಗೋಮಾಂಸ ತಿನ್ನುವ ಹಿಂದೂ. ಅಂದರೆ ಅದನ್ನು ತಿನ್ನದವರಿಗಿಂತ ದೇವರಿಗೆ ಕಡಿಮೆ ಭಯಪಡುವ ವ್ಯಕ್ತಿ ಎಂದರ್ಥವೇ? ಸ್ವಲ್ಪ ಯೋಚಿಸಿ" ಎಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಗೋಮಾಂಸ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ರಿಷಿ ಕಪೂರ್ ಅವರ ಟ್ವೀಟ್ ಸಹ ಹೊಸ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರ ಹಾದಿಯಲ್ಲೇ ಹರ್ಯಾಣ ಸರ್ಕಾರ ಸಹ ಹೆಜ್ಜೆ ಹಾಕಲು ಮುಂದಡಿಯಿಟ್ಟಿರುವುದು ಗೊತ್ತೇ ಇದೆ.
ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಾದ ಜಾರ್ಖಂಡ್, ರಾಜಸ್ತಾನ್ ಗಳಲ್ಲೂ ಗೋಮಾಂಸ ನಿಷೇಧದ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಷಿ ಕಪೂರ್ ಅವರ ಮಾತುಗಳು ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿವೆ.
"ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಾನು ಪ್ರಾಣಿಹಿಂಸೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ರಾಜಕೀಯ ಧುರೀಣರು ಆಡುತ್ತಿರುವ ಡಬಲ್ ಗೇಮ್ ಬಗ್ಗೆ ಅಸಹ್ಯಪಡುತ್ತಿದ್ದೇನೆ" ಅಷ್ಟೇ ಎಂದಿದ್ದಾರೆ. ಒಟ್ಟಾರೆ ರಿಷಿ ಕಪೂರ್ ಅವರ ಹೇಳಿಗೆ ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತದೋ ಏನೋ ಕಾದುನೋಡಬೇಕು.
I
am
angry.
Why
do
you
equate
food
with
religion??
I
am
a
beef
eating
Hindu.
Does
that
mean
I
am
less
God
fearing
then
a
non
eater?
Think!!
—
rishi
kapoor
(@chintskap)
March
15,
2015