Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಿ ಕಾಶ್ಮೀರ್ ಫೈಲ್ಸ್' ಅತ್ಯಂತ ಕಳಪೆ ಸಿನಿಮಾ: ಇರಾನಿ ನಿರ್ದೇಶಕ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆ ಆದಾಗಿನಿಂದಲೂ ವಿವಾದಗಳಿಂದ ಸುದ್ದಿಯಾಗಿದೆ. ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆ ಹೊಂದಿರುವ ಸಿನಿಮಾ ಎನ್ನಲಾಗಿರುವ ಈ ಸಿನಿಮಾ ಪ್ರೊಪಾಗಾಂಡಾ ಸಿನಿಮಾ ಹಿಂಸೆಗೆ ಪ್ರಚೋದನೆ ನೀಡುವ ಸಿನಿಮಾ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದೀಗ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಿನಿಮಾಗಳನ್ನು ಪ್ರಶಸ್ತಿಗೆ ಆರಿಸುವ ಜೂರಿ ತಂಡದ ಸದಸ್ಯರೊಬ್ಬರು ಈ ಸಿನಿಮಾವನ್ನು ಅತ್ಯಂತ ಅಸಹ್ಯದ ಸಿನಿಮಾ ಎಂದಿದ್ದಾರೆ.
ಮುಖ್ಯ ಜ್ಯೂರಿಗಳಲ್ಲಿ ಒಬ್ಬರಾಗಿರುವ ಇಸ್ರೇಲಿನ ನಿರ್ದೇಶಕ ನದಾವ್ ಲಪಿದ್, ''ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ಪ್ರೊಪೊಗ್ಯಾಂಡಾ ಹಾಗೂ ವಲ್ಗರ್ (ಅಹಸ್ಯವಾದ) ಸಿನಿಮಾ. ಇಂಥಹಾ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಈ ರೀತಿಯ ಸಿನಿಮಾ ನೋಡಿ ನಾವು ಆಶ್ಚರ್ಯಪಟ್ಟೆವು. ಸಿನಿಮೋತ್ಸವು ವಿಮರ್ಶಾತ್ಮಕ ಟೀಕೆಗಳನ್ನೂ ಸ್ವಾಗತಿಸಬೇಕು ಹಾಗೂ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಸ್ವತಂತ್ರ್ಯವಾಗಿ ಹಂಚಿಕೊಳ್ಳುವ ವಾತಾವರಣ ಇರಬೇಕು ಅದು ಕಲೆ ಹಾಗೂ ಜೀವನಕ್ಕೆ ಅತ್ಯಂತ ಅವಶ್ಯಕ'' ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಾಗೂ ಆರ್ಎಸ್ಎಸ್ ಒಟ್ಟಾಗಿ ಈ ಸಿನಿಮಾದ ಪ್ರಚಾರ ಮಾಡಿದ್ದವು. 'ದಿ ಕಾಶ್ಮೀರ್ ಫೈಲ್ಸ್' ದೊಡ್ಡ ಮೊತ್ತದ ಕಲೆಕ್ಷನ್ ಅನ್ನು ಮಾಡಿತು. ಆದರೆ ಸಿನಿಮಾವು ಹಿಂಸೆಗೆ ಪ್ರಚೋದನೆ ನೀಡುವ, ಧರ್ಮಗಳ ನಡುವೆ ದ್ವೇಷ ಬಿತ್ತುವ ಅಂಶವನ್ನು ಹೊಂದಿದೆ ಎಂದು ತೀವ್ರವಾಗಿ ಟೀಕೆಗೂ ಒಳಗಾಯಿತು.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಅರಬ್ ದೇಶಗಳಲ್ಲಿ ಮಾತ್ರವೇ ಅಲ್ಲದೆ ನ್ಯೂಜಿಲೆಂಡ್ ಹಾಗೂ ಇನ್ನಿತರೆ ದೇಶಗಳಲ್ಲಿ ನಿಷೇಧ ಮಾಡಲಾಗಿದೆ.
ಇದೀಗ, ಇಸ್ರೇಲಿ ನಿರ್ದೇಶಕ ಗೋವಾ ಸಿನಿಮೋತ್ಸವದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಪ್ರೊಪಗ್ಯಾಂಡಾ ಹಾಗೂ ಅಸಹ್ಯಕರ ಸಿನಿಮಾ ಎಂದಿರುವುದಕ್ಕೆ ಆ ಸಿನಿಮಾದ ನಟ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದು, ''ಸುಳ್ಳು ಅದೆಷ್ಟೇ ಎತ್ತರದಲ್ಲಿರಲಿ ಸತ್ಯದ ಜೊತೆ ಹೋಲಿಕೆಯಲ್ಲಿ ಚಿಕ್ಕದಾಗಿಯೇ ಇರುತ್ತದೆ'' ಎಂದಿದ್ದಾರೆ. ಜೊತೆಗೆ ಹಾಲಿವುಡ್ನ ಜನಪ್ರಿಯ ಸಿನಿಮಾ 'ಶಿಂಡೆರ್ಸ್ ಲಿಸ್ಟ್'ನ ಚಿತ್ರಗಳ ಜೊತೆಗೆ ತಮ್ಮ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಕರ್ಮಿ ಅಶೋಕ್ ಪಂಡಿತ್ ಸಹ ನದಾವ್ ಲಪಿದ್ ಅವರ ಮಾತುಗಳನ್ನು ಖಂಡಿಸಿದ್ದು, ''ಜ್ಯೂರಿ ಸದಸ್ಯ ನದಾವ್ ಲಪಿದ್ ಬಳಸಿರುವ ಭಾಷೆಯನ್ನು ನಾನು ಖಂಡಿಸುತ್ತೇನೆ. ಮೂರು ಲಕ್ಷ ಕಾಶ್ಮೀರಿ ಹಿಂದುಗಳನ್ನು ಹತ್ಯೆ ಮಾಡಿರುವುದು ಅಸಹ್ಯ ಅಲ್ಲ. ನಾನೊಬ್ಬ ಸಿನಿಮಾ ಕರ್ಮಿಯಾಗಿ ಹಾಗೂ ಕಾಶ್ಮೀರಿ ಪಂಡಿತನಾಗಿ ಇದನ್ನು ಉಗ್ರವಾಗಿ ಖಂಡಿಸುತ್ತೇನೆ'' ಎಂದಿದ್ದಾರೆ.