Don't Miss!
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಟ ಸಾಮ್ರಾಟ್' ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ನಟ ಸಾಮ್ರಾಟ್ ಶ್ರೀರಾಮ್ ಲಾಗೂ ನಿನ್ನೆ (ಡಿಸೆಂಬರ್ 17) ರಾತ್ರಿ ನಿಧನ ಹೊಂದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಹುಟ್ಟಿದ ಶ್ರೀರಾಮ್ ಲಾಗೂ ನಾಟಕಗಳ ಮೂಲಕ ತಮ್ಮ ಕಲಾ ಬದುಕು ಪ್ರಾರಂಭ ಮಾಡಿದರು. ನಂತರ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದರು. ಎಂಬಿಬಿಎಸ್ ಹಾಗೂ ಎಂಎಸ್ ಮಾಡಿದರೂ ನಾಟಕದಿಂದ ದೂರ ಹೋಗಲಿಲ್ಲ.
ನಾಚಿಕೆಗೇಡು: ದೇಶ ಹೊತ್ತಿ ಉರಿಯುತ್ತಿದ್ದರೂ ಪಾರ್ಟಿ ಮಾಡಿದ ಹೃತಿಕ್-ದೀಪಿಕಾ.!
ರಂಗಭೂಮಿಯ ಬಳಿಕ ಸಿನಿಮಾ ರಂಗಕ್ಕೆ ಶ್ರೀರಾಮ್ ಲಾಗೂ ಪ್ರವೇಶ ಪಡೆದರು. 1980 ರಲ್ಲಿ ಮರಾಠಿ ಸಿನಿಮಾ ಮಾಡಿದರು. ನಂತರ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. 2016 ರಲ್ಲಿ ಬಂದ 'ಶಾಸನ್' ಅವರ ಕೊನೆಯ ಸಿನಿಮಾವಾಗಿತ್ತು.
'ಶ್ರೀಮಾನ್ ಶ್ರೀಮತಿ', 'ದಾಸ್ ಪ್ಯಾರಡೈಸ್' 'ಪಿಂಜಾರ', 'ಗಾಂಧಿ' ಹೀಗೆ ಸಾಕಷ್ಟು ಸಿನಿಮಾಗಳನ್ನು ಶ್ರೀರಾಮ್ ಲಾಗೂ ನೀಡಿದ್ದಾರೆ.
ಬಾಲಿವುಡ್ ತಾರೆಯರಿಗೆ 'ಶೇಮ್ ಶೇಮ್' ಎನ್ನುತ್ತಿರುವ ಟ್ವೀಟಿಗರು.!
ಶ್ರೀರಾಮ್ ಲಾಗೂರಿಗೆ 92 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಬಾಲಿವುಡ್ ನಲ್ಲಿ ದುಃಖ ಮೂಡಿಸಿದೆ. ನಟ ಪರೇಶ್ ರಾವಲ್, ರಿಷಿ ಕಪೂರ್ ಸೇರಿದಂತೆ ಅನೇಕರು ಶ್ರೀರಾಮ್ ಲಾಗೂ ಸಾವಿಗೆ ಸಂತಾಪ ಸೂಚಿಸಿದ್ದಾರೆ.
Dr. Shreeram Lagoo personified versatility and brilliance. Through the years, he enthralled audiences with outstanding performances. His work will be remembered for years to come. Anguished by his demise. Condolences to his admirers. Om Shanti.
— Narendra Modi (@narendramodi) December 18, 2019
ಪ್ರಧಾನಿ ನರೇಂದ್ರ ಮೋದಿ ಇಂದು (ಡಿಸೆಂಬರ್ 18) ಟ್ವೀಟ್ ಮಾಡಿದ್ದು, ''ಶ್ರೀರಾಮ್ ಲಾಗೂ ವ್ಯಕ್ತಿಗತ ವರ್ಸಟೈಲಿಟಿ ಹಾಗೂ ಬ್ರಿಲಿಯನ್ಸ್ ಆಗಿದ್ದರು. ವರ್ಷಗಳಿಂದ ಅವರ ನಟನೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಅವರ ಕೆಲಸ ವರ್ಷಗಳ ಕಾಲ ನೆನಪಿನಲ್ಲಿ ಇರುತ್ತದೆ. ಓಂ ಶಾಂತಿ.'' ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.