Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಾಲಿಟಿ ಶೋ ಸ್ಪರ್ಧಿಗೆ 1.7 ಲಕ್ಷ ವಂಚಿಸಿದ ಖತರ್ನಾಕ್ ಖದೀಮ
ಹಿಂದಿಯ ಖ್ಯಾತಿ ರಿಯಾಲಿಟಿ ಶೋ 'ಇಂಡಿಯನ್ ಐಡಲ್' ಸ್ಪರ್ಧಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ 22 ವರ್ಷದ ವ್ಯಕ್ತಿಯೊಬ್ಬನನ್ನ ಸಿಯಾನ್ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಡೆಬೆಟ್ ಕಾರ್ಡ್ ಪರಿಶೀಲನೆ ಎಂಬ ನೆಪವೊಡ್ಡಿ ಆನ್ ಲೈನ್ ಮೂಲಕ 1.7 ಲಕ್ಷ ಹಣವನ್ನ ಲಪಟಾಯಿಸಿರುವ ಘಟನೆ ಸಿಯಾನ್ ನಲ್ಲಿ ನಡೆದಿದೆ.
ಬಂಧಿತ ಆರೋಪಿ ರಾಜ್ ಕುಮಾರ್ ಜಯನಾರಾಯಣ್ ಮಂದಲ್ ಎಂಬ ವ್ಯಕ್ತಿಯನ್ನ ಮುಂಬೈನ ಸೈಬರ್ ಪೊಲೀಸರ ಸಹಾಯದಿಂದ ಝಾರ್ಖಂಡ್ ನಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ.
ಇಂಡಿಯನ್ ಐಡಲ್ ಸ್ಪರ್ಧಿಯಾಗಿದ್ದ ಅವಂತಿ ಪಟೇಲ್ ಎಂಬುವರಿಗೆ ಫೋನ್ ಮಾಡಿದ್ದ ಮಂದಲ್, ಸಾರ್ವಜನಿಕ ವಲಯದ ಬ್ಯಾಂಕ್ ನಲ್ಲಿ ನಿಮ್ಮ ಸಹೋದರಿ ಕಾರ್ಯನಿರ್ವಾಹಕರಾಗಿ ನೇಮಕಗೊಂಡಿದ್ದಾರೆ ಎಂದು ಹೇಳಿದ್ದ. ಹೀಗೆ ಮಾತನಾಡುವಾಗ ಅವರ ಬ್ಯಾಂಕ್ ವಿವರವನ್ನ ಮತ್ತು ಪಾಸ್ ವರ್ಡ್ ಪಡೆದು, ಅವಂತಿ ಪಟೇಲ್ ಮತ್ತು ಸಹೋದರಿ ಖಾತೆಯಿಂದ 1.7 ಲಕ್ಷ ಹಣವನ್ನ ಬೇರೊಂದು ಖಾತೆಗೆ ವರ್ಗಾಯಿಸಿ ಹಣ ಲೂಟಿ ಮಾಡಿದ್ದಾನೆ.
ಖಾತೆಯಲ್ಲಿ ಹಣ ಕಾಣೆಯಾಗಿರುವ ಬಗ್ಗೆ ಅವಂತಿ ಪಟೇಲ್ ಗೆ ಅರಿವಾಗಿ, ನಂತರ ಸಿಯಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯ ದೂರವಾಣಿ ನಂಬರ್ ಟ್ರೇಸ್ ಮಾಡಿ, ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.