twitter
    For Quick Alerts
    ALLOW NOTIFICATIONS  
    For Daily Alerts

    ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ

    By Avani Malnad
    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಕುರಿತಾಧ ಚರ್ಚೆಯ ವಿಚಾರವಾಗಿ ಇತ್ತೀಚೆಗೆ ನಿಧನರಾದ ನಟ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.

    Recommended Video

    ಸುದೀಪ್ ಮನೆಯಲ್ಲಿ ಹೆಚ್ಚಾಯಿತು ಕೊರೊನ ಆತಂಕ | Coronavirus positive near actor Sudeep house.

    ಸುಶಾಂತ್ ಸಾವಿನ ಕಾರಣದಿಂದ ನಡೆಯುತ್ತಿರುವ ದೂಷಾರೋಪಣೆ ನಿರರ್ಥಕ ಪ್ರಯತ್ನ ಎಂದಿರುವ ಅವರು, ಅದು ನಡೆಯುತ್ತಿರುವ ರೀತಿ ಸರಿಯಾಗಬೇಕಿದೆ ಎಂದಿದ್ದಾರೆ.

    ಮ್ಯೂಸಿಕ್ ಮಾಫಿಯಾ ವಿರುದ್ಧ ದಂಗೆ?: ಸೋನು ನಿಗಂ ಬೆಂಬಲಕ್ಕೆ ಅದ್ನಾನ್ ಸಮಿ, ಅಲಿಶಾಮ್ಯೂಸಿಕ್ ಮಾಫಿಯಾ ವಿರುದ್ಧ ದಂಗೆ?: ಸೋನು ನಿಗಂ ಬೆಂಬಲಕ್ಕೆ ಅದ್ನಾನ್ ಸಮಿ, ಅಲಿಶಾ

    ತಿಂಗಳ ಅಂತರದಲ್ಲಿ ನಡೆದ ತಂದೆ ಇರ್ಫಾನ್ ಖಾನ್ ಮತ್ತು ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತನಾಡಿರುವ ಅವರು, 'ಅದರಿಂದ ಇನ್ನೂ ಹೊರಬರಲು ಆಗಿಲ್ಲ. ನಾವು ಇಬ್ಬರು ಪ್ರಾಮಾಣಿಕ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಸ್ಫೂರ್ತಿದಾಯಕ ಬದುಕಿಗೆ ಪ್ರಾಮಾಣಿಕತೆಯೇ ಕೀಲಿಕೈ. ಸುಶಾಂತ್ ಅವರು ನಿರ್ಗಮಿಸಿದ ಬಗೆ ನಂಬಲಾಗದ ಆಘಾತ' ಎಂದು ಹೇಳಿದ್ದಾರೆ. ಮುಂದೆ ಓದಿ...

    ಆಪಾದನೆ ಹೊರಿಸುವುದು ಸಾಮಾನ್ಯ

    ಆಪಾದನೆ ಹೊರಿಸುವುದು ಸಾಮಾನ್ಯ

    'ನಾವು ಯಾವುದನ್ನಾದರೂ ಅಥವಾ ಯಾರ ಮೇಲಾದರೂ ಹೊರಿಸುವ ಪ್ರವೃತ್ತಿ ನಡೆಸುವುದು ಸಾಮಾನ್ಯ. ಅದು ಅತ್ಯಂತ ನಿರರ್ಥಕ ಕೆಲಸ. ಏಕೆಂದರೆ ದೂಷಣೆಯ ಕಾರ್ಯದ ಮೂಲಕ ಶಾಂತಿ ಅರಸುವುದು ಪ್ರಾಮಾಣಿಕತೆಯಲ್ಲ. ಅದು ಸುಳ್ಳಿನ ಪ್ರತಿಫಲನವಾಗುತ್ತದೆಯಷ್ಟೇ.

    ಈ ರೀತಿ ಅನಿಶ್ಚಿತತೆ ಸಹಜ

    ಈ ರೀತಿ ಅನಿಶ್ಚಿತತೆ ಸಹಜ

    ಈಗ ಆಗುತ್ತಿರುವ ದುರದೃಷ್ಟಕರ ಘಟನೆಗಳಿಗೆ ಯಾರನ್ನೋ ಅಥವಾ ಯಾವುದನ್ನೋ ದೂರದಂತೆ ನಿಮಗೆ ಮನವಿ ಮಾಡುತ್ತೇನೆ. ಯಾವುದೇ ವಿವರಣೆ ಅಥವಾ ತಿಳಿವಳಿಕೆ ಒದಗಿಸುವ ಮೊದಲೇ ಲೆಗ್ ಸ್ಪಿನ್ ಎಸೆತಗಳು ಆಫ್ ಸ್ಪಿನ್‌ನ ಬೌನ್ಸ್‌ನಂತೆ ಬರುವುದನ್ನು ನೀವು ಒಪ್ಪಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.

    ಪ್ರತಿಭಾವಂತ ನಟರಿಗೆ ಅವಕಾಶ ಸಿಗದೆ ಇರುವುದು ಸಾಮಾನ್ಯ: ಒಪ್ಪಿಕೊಂಡ ಸೈಫ್ ಅಲಿ ಖಾನ್ಪ್ರತಿಭಾವಂತ ನಟರಿಗೆ ಅವಕಾಶ ಸಿಗದೆ ಇರುವುದು ಸಾಮಾನ್ಯ: ಒಪ್ಪಿಕೊಂಡ ಸೈಫ್ ಅಲಿ ಖಾನ್

    ನಿಮ್ಮ ತನಿಖೆಯಿಂದ ದುಃಖವೇ ಹೆಚ್ಚು

    ನಿಮ್ಮ ತನಿಖೆಯಿಂದ ದುಃಖವೇ ಹೆಚ್ಚು

    ಕಾರಣಗಳನ್ನು ತನಿಖೆ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ಏಕೆಂದರೆ ಈ ಘಟನೆಯಿಂದ ನೋವು ಅನುಭವಿಸುತ್ತಿರುವವರ ದುಃಖ ಮತ್ತಷ್ಟು ಹೆಚ್ಚುತ್ತದೆ. ಈ ಪ್ರಾಮಾಣಿಕ ವ್ಯಕ್ತಿಗಳ ಬೆಳವಣಿಗೆಯನ್ನು ಸಂಭ್ರಮಿಸಿ. ನಮ್ಮ ಬದುಕಿನ ಯಾವುದಾದರೂ ಮಾರ್ಗದಲ್ಲಿ ಅವರ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳೋಣ. ಈ ಮೂಲಕ ಅವರ ನೆನಪುಗಳ ದೀವಿಗೆಯನ್ನು ನಮ್ಮ ಸೂಕ್ಷ್ಮ ಮನಸಿನೊಳಗೆ ಬೆಳಗಿಸೋಣ.

    ಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂ

    ಸುಶಾಂತ್ ಕಾರಣವಾಗಬಾರದು

    ಸುಶಾಂತ್ ಕಾರಣವಾಗಬಾರದು

    ಅಂದರೆ, ನಾನು ಹೇಳುತ್ತಿರುವುದು ನೀವು ಸ್ವಜನಪಕ್ಷಪಾತದ ವಿರುದ್ಧ ಸಿಡಿದೇಳಬೇಕು ಎಂದುಕೊಂಡಿದ್ದರೆ ಅದಕ್ಕೆ ಸುಶಾಂತ್ ಸಿಂಗ್ ಅವರ ಸಾವನ್ನು ಬಳಸಿಕೊಳ್ಳದೆಯೇ ಸರಿಯಾದ ವಿಚಾರದ ಪರ ಎದ್ದು ನಿಲ್ಲಿ. ಆದರೆ ಈಗ ನೀವು ಏನು ಮಾಡುತ್ತಿದ್ದೀರೋ ಅದಕ್ಕೆ ಸುಶಾಂತ್ ಅವರನ್ನು ಕಾರಣವನ್ನಾಗಿಸಿಕೊಳ್ಳಬೇಡಿ. ಯಾವುದೇ ವಿಚಾರದಲ್ಲಿ ಏನೇ ಆದರೂ ಸರಿಯಾದ ವಿಚಾರದ ಪರ ಎದ್ದು ನಿಲ್ಲಿ ಎಂದು ಬಾಬಿಲ್ ಸಲಹೆ ನೀಡಿದ್ದಾರೆ.

    English summary
    Late Irrfan Khan's son Babil Khan has urged fans that, if they want to fight against nepotism, do use Sushant Singh Rajput as a reason.
    Wednesday, June 24, 2020, 11:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X