Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಕುರಿತಾಧ ಚರ್ಚೆಯ ವಿಚಾರವಾಗಿ ಇತ್ತೀಚೆಗೆ ನಿಧನರಾದ ನಟ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.
Recommended Video
ಸುಶಾಂತ್ ಸಾವಿನ ಕಾರಣದಿಂದ ನಡೆಯುತ್ತಿರುವ ದೂಷಾರೋಪಣೆ ನಿರರ್ಥಕ ಪ್ರಯತ್ನ ಎಂದಿರುವ ಅವರು, ಅದು ನಡೆಯುತ್ತಿರುವ ರೀತಿ ಸರಿಯಾಗಬೇಕಿದೆ ಎಂದಿದ್ದಾರೆ.
ಮ್ಯೂಸಿಕ್ ಮಾಫಿಯಾ ವಿರುದ್ಧ ದಂಗೆ?: ಸೋನು ನಿಗಂ ಬೆಂಬಲಕ್ಕೆ ಅದ್ನಾನ್ ಸಮಿ, ಅಲಿಶಾ
ತಿಂಗಳ ಅಂತರದಲ್ಲಿ ನಡೆದ ತಂದೆ ಇರ್ಫಾನ್ ಖಾನ್ ಮತ್ತು ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತನಾಡಿರುವ ಅವರು, 'ಅದರಿಂದ ಇನ್ನೂ ಹೊರಬರಲು ಆಗಿಲ್ಲ. ನಾವು ಇಬ್ಬರು ಪ್ರಾಮಾಣಿಕ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಸ್ಫೂರ್ತಿದಾಯಕ ಬದುಕಿಗೆ ಪ್ರಾಮಾಣಿಕತೆಯೇ ಕೀಲಿಕೈ. ಸುಶಾಂತ್ ಅವರು ನಿರ್ಗಮಿಸಿದ ಬಗೆ ನಂಬಲಾಗದ ಆಘಾತ' ಎಂದು ಹೇಳಿದ್ದಾರೆ. ಮುಂದೆ ಓದಿ...
ಆಪಾದನೆ ಹೊರಿಸುವುದು ಸಾಮಾನ್ಯ
'ನಾವು ಯಾವುದನ್ನಾದರೂ ಅಥವಾ ಯಾರ ಮೇಲಾದರೂ ಹೊರಿಸುವ ಪ್ರವೃತ್ತಿ ನಡೆಸುವುದು ಸಾಮಾನ್ಯ. ಅದು ಅತ್ಯಂತ ನಿರರ್ಥಕ ಕೆಲಸ. ಏಕೆಂದರೆ ದೂಷಣೆಯ ಕಾರ್ಯದ ಮೂಲಕ ಶಾಂತಿ ಅರಸುವುದು ಪ್ರಾಮಾಣಿಕತೆಯಲ್ಲ. ಅದು ಸುಳ್ಳಿನ ಪ್ರತಿಫಲನವಾಗುತ್ತದೆಯಷ್ಟೇ.
ಈ ರೀತಿ ಅನಿಶ್ಚಿತತೆ ಸಹಜ
ಈಗ ಆಗುತ್ತಿರುವ ದುರದೃಷ್ಟಕರ ಘಟನೆಗಳಿಗೆ ಯಾರನ್ನೋ ಅಥವಾ ಯಾವುದನ್ನೋ ದೂರದಂತೆ ನಿಮಗೆ ಮನವಿ ಮಾಡುತ್ತೇನೆ. ಯಾವುದೇ ವಿವರಣೆ ಅಥವಾ ತಿಳಿವಳಿಕೆ ಒದಗಿಸುವ ಮೊದಲೇ ಲೆಗ್ ಸ್ಪಿನ್ ಎಸೆತಗಳು ಆಫ್ ಸ್ಪಿನ್ನ ಬೌನ್ಸ್ನಂತೆ ಬರುವುದನ್ನು ನೀವು ಒಪ್ಪಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.
ಪ್ರತಿಭಾವಂತ ನಟರಿಗೆ ಅವಕಾಶ ಸಿಗದೆ ಇರುವುದು ಸಾಮಾನ್ಯ: ಒಪ್ಪಿಕೊಂಡ ಸೈಫ್ ಅಲಿ ಖಾನ್
ನಿಮ್ಮ ತನಿಖೆಯಿಂದ ದುಃಖವೇ ಹೆಚ್ಚು
ಕಾರಣಗಳನ್ನು ತನಿಖೆ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ಏಕೆಂದರೆ ಈ ಘಟನೆಯಿಂದ ನೋವು ಅನುಭವಿಸುತ್ತಿರುವವರ ದುಃಖ ಮತ್ತಷ್ಟು ಹೆಚ್ಚುತ್ತದೆ. ಈ ಪ್ರಾಮಾಣಿಕ ವ್ಯಕ್ತಿಗಳ ಬೆಳವಣಿಗೆಯನ್ನು ಸಂಭ್ರಮಿಸಿ. ನಮ್ಮ ಬದುಕಿನ ಯಾವುದಾದರೂ ಮಾರ್ಗದಲ್ಲಿ ಅವರ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳೋಣ. ಈ ಮೂಲಕ ಅವರ ನೆನಪುಗಳ ದೀವಿಗೆಯನ್ನು ನಮ್ಮ ಸೂಕ್ಷ್ಮ ಮನಸಿನೊಳಗೆ ಬೆಳಗಿಸೋಣ.
ಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂ
ಸುಶಾಂತ್ ಕಾರಣವಾಗಬಾರದು
ಅಂದರೆ, ನಾನು ಹೇಳುತ್ತಿರುವುದು ನೀವು ಸ್ವಜನಪಕ್ಷಪಾತದ ವಿರುದ್ಧ ಸಿಡಿದೇಳಬೇಕು ಎಂದುಕೊಂಡಿದ್ದರೆ ಅದಕ್ಕೆ ಸುಶಾಂತ್ ಸಿಂಗ್ ಅವರ ಸಾವನ್ನು ಬಳಸಿಕೊಳ್ಳದೆಯೇ ಸರಿಯಾದ ವಿಚಾರದ ಪರ ಎದ್ದು ನಿಲ್ಲಿ. ಆದರೆ ಈಗ ನೀವು ಏನು ಮಾಡುತ್ತಿದ್ದೀರೋ ಅದಕ್ಕೆ ಸುಶಾಂತ್ ಅವರನ್ನು ಕಾರಣವನ್ನಾಗಿಸಿಕೊಳ್ಳಬೇಡಿ. ಯಾವುದೇ ವಿಚಾರದಲ್ಲಿ ಏನೇ ಆದರೂ ಸರಿಯಾದ ವಿಚಾರದ ಪರ ಎದ್ದು ನಿಲ್ಲಿ ಎಂದು ಬಾಬಿಲ್ ಸಲಹೆ ನೀಡಿದ್ದಾರೆ.