Don't Miss!
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾಹ್ನವಿ ಕಪೂರ್ ತೊಟ್ಟಿದ್ದ ಸೀರೆ ಹಿಂದೆ 'ಅಮ್ಮ'ನ ಕಥೆಯಿದೆ
ಇತ್ತೀಚಿಗಷ್ಟೆ 65ನೇ ಸಾಲಿನ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನೆರವೇರಿತ್ತು. ದಿವಂಗತ ನಟಿ ಶ್ರೀದೇವಿಗೆ 'ಮಾಮ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತು. ಶ್ರೀದೇವಿ ಪರವಾಗಿ ಮಗಳು ಜಾಹ್ನವಿ ಕಪೂರ್, ಪತಿ ಬೋನಿ ಕಪೂರ್ ಪ್ರಶಸ್ತಿ ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಹಲವು ವಿಷ್ಯಗಳಿಗೆ ಗಮನ ಸೆಳೆದಿದ್ದಾರೆ. ಅದರಲ್ಲೂ ಜಾಹ್ನವಿ ಕಪೂರ್ ಅಮ್ಮನ ಸೀರೆಯುಟ್ಟು ಪ್ರಶಸ್ತಿ ಪಡೆದುಕೊಂಡಿದ್ದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಹೌದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾಹ್ನವಿ ಕಪೂರ್ ತೊಟ್ಟಿದ್ದ ಸೀರೆ ಶ್ರೀದೇವಿ ಅವರದ್ದು. ಅಮ್ಮನಿಗೆ ಸಿಕ್ಕಿದ ಪ್ರಶಸ್ತಿಯನ್ನ, ಅಮ್ಮನ ಪರವಾಗಿ ಪಡೆದ ಮಗಳು ಅಮ್ಮನ ಸೀರೆಯನ್ನ ತೊಟ್ಟು ಪಡೆದುಕೊಂಡಿದ್ದು, ಇದು ಸ್ವತಃ ಶ್ರೀದೇವಿ ಅವರೇ ಪ್ರಶಸ್ತಿ ಪಡೆದುಕೊಂಡಂತೆ ಆಗಿದೆ ಎನ್ನುತ್ತಿದ್ದಾರೆ.
ಅಂದ್ಹಾಗೆ, 2012 ರಲ್ಲಿ ತೆಲುಗು ನಟ ಚಿರಂಜೀವಿ ಅವರ ಮಗ ರಾಮ್ ಚರಣ್ ತೇಜ ಅವರ ಮದುವೆ ಸಮಾರಂಭದಲ್ಲಿ ಶ್ರೀದೇವಿ ಈ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 6 ವರ್ಷಗಳ ಬಳಿಕ ಈಗ ಅದೇ ಸೀರೆಯಲ್ಲಿ ಮಗಳು ಕಾಣಿಸಿಕೊಂಡು ಅಚ್ಚರಿ ನೀಡಿದ್ದಾರೆ.
ಕೊನೆಯುಸಿರೆಳೆದ ಶ್ರೀದೇವಿ: ಮಮ್ಮಲ ಮರುಗಿದ ದಕ್ಷಿಣ ಭಾರತ ಚಿತ್ರರಂಗ
ಇನ್ನು ಮತ್ತೊಂದೆಡೆ ಪತಿ ಬೋನಿ ಕಪೂರ್ ಅವರ ಬಗ್ಗೆ ಶ್ರೀದೇವಿ ಅತಿ ಹೆಚ್ಚು ಕಾಳಜಿ ತೋರುತಿದ್ದರು. ಈಗ ಪತ್ನಿಯನ್ನ ಕಳೆದುಕೊಂಡ ಬೋನಿ ಕಪೂರ್ ಗೆ ಜಾಹ್ನವಿ ಕಪೂರ್ ಹೆಚ್ಚ ಕಾಳಜಿ ವಹಿಸಿಕೊಂಡಿದ್ದಾರೆ. ಶ್ರೀದೇವಿಯಂತೆ ಮಗಳು ಕೂಡ ಅಪ್ಪನಿಗೆ ಪ್ರೀತಿ ತೋರುತ್ತಿದ್ದಾರೆ.
ಸಂಬಂಧಿಕರೊಬ್ಬರ ಮದುವೆಗೆ ಎಂದು ಹೋಗಿದ್ದ ನಟಿ ಶ್ರೀದೇವಿ ಫೆಬ್ರವರಿ 24 ರಂದು ದುಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಹೋಟೆಲ್ ರೂಂನಲ್ಲಿದ್ದ ಬಾತ್ ಟಾಬ್ ನಲ್ಲಿ ಮುಳಗಿ ಸಾವನ್ನಪ್ಪಿದ್ದರು.