Don't Miss!
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧಾರ್ಮಿಕ ಭಾವನೆಗೆ ಧಕ್ಕೆ: 'ಸತ್ಯಮೇವ ಜಯತೆ' ಚಿತ್ರತಂಡದ ವಿರುದ್ಧ ದೂರು ದಾಖಲು.!
ಜಾನ್ ಅಬ್ರಹಾಂ ಹಾಗೂ ಮನೋಜ್ ಬಾಜ್ಪೈ ಅಭಿನಯದ ಮಿಲಪ್ ಝವೇರಿ ನಿರ್ದೇಶನದ 'ಸತ್ಯಮೇವ ಜಯತೆ' ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 'ಸತ್ಯಮೇವ ಜಯತೆ' ಸಿನಿಮಾ ಬಿಡುಗಡೆ ಆಗಬೇಕು. ಆದ್ರೀಗ, ಸಿನಿಮಾದ ರಿಲೀಸ್ ಗೆ ಕಂಟಕ ಎದುರಾಗಿದೆ.
'ಸತ್ಯಮೇವ ಜಯತೆ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ''ಸಿನಿಮಾದ ಕೆಲ ಸನ್ನಿವೇಶಗಳು ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ'' ಎಂದು ಹೈದರಾಬಾದ್ ಮೂಲದ ಸೈಯದ್ ಅಲಿ ಜಾಫರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಐ.ಪಿ.ಸಿ ಸೆಕ್ಷನ್ 295, 295-A ಹಾಗೂ 153-A ಪ್ರಕಾರ Emmy Entertainments ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರಗಳು: ಹೀಗಿದೆ ನೋಡಿ ನಟ ಜಾನ್ ಅಬ್ರಹಾಂ ರವರ ವಿಲಾಸಿ ನಿವಾಸ.!
'ಸತ್ಯಮೇವ ಜಯತೆ' ಚಿತ್ರದಲ್ಲಿ ಇರುವ ಕೆಲ ಸನ್ನಿವೇಶಗಳನ್ನು ಅಳಿಸಿ ಬಿಡುಗಡೆ ಮಾಡಬೇಕು ಎಂದು ಶಿಯಾ ಮುಸ್ಲಿಮರು ಒತ್ತಾಯ ಮಾಡಿದ್ದಾರೆ. ಸದ್ಯಕ್ಕೆ ಈ ವಿವಾದದ ಬಗ್ಗೆ ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ.
'ಸತ್ಯಮೇವ ಜಯತೆ' ಬಿಡುಗಡೆ ಆಗಲು ಇನ್ನೂ ಹದಿನೈದು ದಿನ ಟೈಮ್ ಇದೆ. ಅಷ್ಟರೊಳಗೆ ವಿವಾದಿತ ಸನ್ನಿವೇಶವನ್ನ ಚಿತ್ರತಂಡ ತೆಗೆದು ಹಾಕುತ್ತಾ.? ನೋಡಬೇಕು.
ಅಂದ್ಹಾಗೆ, ಆಗಸ್ಟ್ 15 ರಂದು 'ಸತ್ಯಮೇವ ಜಯತೆ' ಸಿನಿಮಾದ ಜೊತೆಗೆ ಕಂಗನಾ ಅಭಿನಯದ 'ಮಣಿಕಾರ್ಣಿಕಾ' ಹಾಗೂ ಅಕ್ಷಯ್ ಕುಮಾರ್ ನಟನೆಯ 'ಗೋಲ್ಡ್' ಚಿತ್ರದ ತೆರೆಗೆ ಬರಲಿದೆ.