Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಸ್ತಕ ರೂಪ ಪಡೆದ ನಟ ಸೋನು ಸೂದ್ ಜೀವನ ಅನುಭವ
ಕೊರೊನಾ ಲಾಕ್ಡೌನ್ ಸಮಯದಲ್ಲಿ ಮಾನವೀಯತೆ ಕಾರ್ಯಗಳನ್ನು ಮಾಡಿ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡ ಬಾಲಿವುಡ್ ನಟ ಸೋನು ಸೂದ್ ಅವರ ಬಗ್ಗೆ ಪುಸ್ತಕವೊಂದು ತಯಾರಾಗಿದೆ.
ಪತ್ರಕರ್ತ ಮೀನಾ ಕೆ ಅಯ್ಯರ್ ಎಂಬುವರು ಈ ಪುಸ್ತಕ ಬರೆದಿದ್ದು, 'Penguin: I Am No Messiah' ಎಂದು ಹೆಸರಿಡಲಾಗಿದೆ. ಈ ಪುಸ್ತಕದಲ್ಲಿ ನಟ ಸೋನು ಸೂದ್ ಅವರ ಜೀವನ ಅನುಭವ ಒಳಗೊಂಡಿದೆಯಂತೆ.
ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ; ಸೋನು ಸೂದ್ ಗೆ ಮೆಗಾಸ್ಟಾರ್ ಹೀಗೆ ಹೇಳಿದ್ದೇಕೆ?
ಈ ಬಗ್ಗೆ ನಟ-ನಿರ್ಮಾಪಕ ತುಷಾರ್ ಕಪೂರ್ ಟ್ವಿಟ್ಟರ್ ಮೂಲಕ ಸೋನು ಸೂದ್ಗೆ ಶುಭಕೋರಿದ್ದು, ''ದಬಾಂಗ್ ನಟ ಜೀವನ ಕಥೆಯನ್ನು ಓದಲು ಜನಸಾಮಾನ್ಯರು ಈಗಲೇ ಪುಸ್ತಕವನ್ನು ಬುಕ್ ಮಾಡಿಕೊಳ್ಳಿ'' ಎಂದು ವಿನಂತಿಸಿಕೊಂಡಿದ್ದಾರೆ.
ಬಾಲಿವುಡ್ನ ಮತ್ತೊಬ್ಬ ಸ್ಟಾರ್ ನಟ ರಾಜ್ ಕುಮಾರ್ ರಾವ್ ಸಹ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪುಸ್ತಕದ ಫೋಟೋ ಹಂಚಿಕೊಂಡಿದ್ದು, ಸೋನು ಸೂದ್ಗೆ ಶುಭಕೋರಿದ್ದಾರೆ.
ಅಂದ್ಹಾಗೆ, ಲಾಕ್ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದರು. ದಿಢೀರ್ ಅಂತ ಜಾರಿ ಮಾಡಿದ್ದ ಲಾಕ್ಡೌನ್ನಿಂದ ಊರುಗಳಿಗೆ ಹೋಗಲಾಗದೇ ಸಿಲುಕಿಕೊಂಡಿದ್ದ ಜನರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಊಟ, ನೀರು ಕೊಟ್ಟಿದ್ದರು. ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದರು. ಹಿರಿಯರಿಗೆ, ವೃದ್ಧರಿಗೆ ನೆರವು ನೀಡಿದರು. ವಿದೇಶದಲ್ಲಿದ್ದವರಿಗೂ ಸಹಾಯ ಮಾಡಿದರು. ಶಸ್ತ್ರಚಿಕಿತ್ಸೆಗಳಿಗೆ ಆರ್ಥಿಕ ನೆರವು ಕೊಡಿಸಿದರು.
'ರಿಯಲ್ ಹೀರೋ' ಸೋನು ಸೂದ್ ಗೆ ದೇವಾಲಯ ಕಟ್ಟಿದ ತೆಲಂಗಾಣ ಜನತೆ
Recommended Video
ಹೀಗೆ, ಕಳೆದ ಆರೇಳು ತಿಂಗಳಿನಿಂದ ಬಾಲಿವುಡ್ ನಟ ಸೋನು ಸೂದ್, ವೈಯಕ್ತಿಕವಾಗಿ ಜನರ ಜೊತೆ ನಿಂತು ಅನೇಕ ರೀತಿಯ ಸಹಾಯ ಮಾಡಿದ್ದಾರೆ. ಇದರ ಪರಿಣಾಮ ಸೋನು ಸೂದ್ ಅವರನ್ನು ದೇವರೆಂದು ಪ್ರಾರ್ಥಿಸಿದ ಘಟನೆಗಳು, ದೇವಸ್ಥಾನ ಕಟ್ಟಿದ ಉದಾಹರಣೆಗಳು, ಹೀರೋ ಎಂದು ಪೂಜಿಸಿದ ಸಂದರ್ಭಗಳು ವರದಿಯಾಗಿದೆ.