Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ನಡುವೆ ಕಾಜಲ್ ಮದುವೆ: ಖುಷಿ ವಿಷಯ ಹಂಚಿಕೊಂಡ ನಟಿ
ನಟಿ ಕಾಜಲ್ ಅಗರ್ವಾಲ್ ಮದುವೆ ಬಗ್ಗೆ ಇದ್ದ ಎಲ್ಲಾ ಊಹಾಪೋಗಳಿಗೆ ತೆರೆ ಬಿದ್ದಿದೆ. ಕಾಜಲ್ ಅಗರ್ವಾಲ್ ಅವರು ಮುಂಬೈನ ಉದ್ಯಮಿ ಗೌತಮ್ ಅನ್ನು ವಿವಾಹವಾಗುತ್ತಿರುವುದಾಗಿ ಹೇಳಿದ್ದಾರೆ.
ಮುಂಬೈನಲ್ಲಿ ಅಕ್ಟೋಬರ್ 30 ರಂದು ಕಾಜಲ್ ಅಗರ್ವಾಲ್ ಹಾಗೂ ಗೌತಮ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಕೊರೊನಾ ಕಾರಣದಿಂದ ಕೆಲವೇ ಸಂಬಂಧಿಗಳ ನಡುವೆ ವಿವಾಹ ನಡೆಯಲಿದೆ ಎಂದು ಕಾಜಲ್ ಅಗರ್ವಾಲ್ ಹೇಳಿದ್ದಾರೆ.
ನಟಿ ಕಾಜಲ್ ಅಗರ್ವಾಲ್ ಮದುವೆಯಾಗುತ್ತಿರುವ ಹುಡುಗ ಇವರೇ ನೋಡಿ
'ಈ ಸಾಂಕ್ರಾಮಿಕ ರೋಗ ನಮ್ಮ ಸಂತೋಶಗಳ ಮೇಲೆ ಕಪ್ಪು ಛಾಯೆ ಹೊದಿಸಿದೆ, ಆದರೆ ನಾವಿಬ್ಬರು ಈ ಹೊಸ ಜೀವನ ಪಯಣ ಆರಂಭಿಸುತ್ತಿರುವುದು ಸಾಕಷ್ಟು ಥ್ರಿಲ್ ನೀಡುತ್ತಿದೆ' ಎಂದಿದ್ದಾರೆ ನಟಿ ಕಾಜಲ್.
ಅಭಿಮಾನಿಗಳ ಆಶೀರ್ವಾದ ಕೇಳಿದ ಕಾಜಲ್
ಇಷ್ಟು ದಿನ ನೀವುಗಳು ನನ್ನನ್ನು ಪ್ರೀತಿಸಿದ್ದೀರಿ, ಅಭಿಮಾನಿಸಿದ್ದೀರಿ. ನನ್ನ ಈ ಹೊಸ ಪಯಣಕ್ಕೆ ನಿಮ್ಮಗಳ ಹಾರೈಕೆ, ಆಶೀರ್ವಾದವನ್ನು ನಾನು ಮತ್ತು ಗೌತಮ್ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ ಕಾಜಲ್ ಅಗರ್ವಾಲ್.
ನಟನೆ ಮುಂದುವರೆಸುತ್ತೇನೆ ಎಂದ ಕಾಜಲ್
ನಾನು ಇಷ್ಟು ವರ್ಷಗಳಿಂದ ಅತಿಯಾಗಿ ಪ್ರೀತಿಸಿದ್ದ, ನಿಮ್ಮನ್ನು ಮನರಂಜಿಸುವ ಕಾರ್ಯವನ್ನು ಮುಂದುವರೆಸಲಿದ್ದೇನೆ. ಹೊಸ ಉದ್ದೇಶ, ಹೊಸ ಅರ್ಥದೊಂದಿಗೆ ನಾನು ನನ್ನ ಪ್ರೇಕ್ಷಕರನ್ನು ಮನರಂಜಿಸುವ ಕಾರ್ಯ ಮಾಡಲಿದ್ದೇನೆ ಎಂದಿದ್ದಾರೆ ಕಾಜಲ್. ಆ ಮೂಲಕ ತಾವು ನಟನೆ ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸದ್ದೇ ಇಲ್ಲದೆ ಎಂಗೇಜ್ ಆದರು ಕಾಜಲ್ ಅಗರ್ವಾಲ್
ಒಳಾಂಗಣ ವಿನ್ಯಾಸ ಸಂಸ್ಥೆ ಹೊಂದಿರುವ ಗೌತಮ್
ಕಾಜಲ್ ವಿವಾಹವಾಗುತ್ತಿರುವ ಗೌತಮ್ ಕಿಚ್ಲು ಮುಂಬೈನವರಾಗಿದ್ದು, 'ಡೈಸೆರ್ನ್ ಲಿವಿಂಗ್' ಹೆಸರಿನ ಒಳಾಂಗಣ ವಿನ್ಯಾಸದ ಉದ್ಯಮವನ್ನು ಹೊಂದಿದ್ದಾರೆ. ದೇಶದ ಅತ್ಯುತ್ತಮ ಒಳಾಂಗಣ ವಿನ್ಯಾಸ ಸಂಸ್ಥೆಗಳಲ್ಲಿ ಗೌತಮ್ ಸಂಸ್ಥೆಯೂ ಒಂದು.
ಎರಡು ದಿನ ಮದುವೆ ಎನ್ನಲಾಗಿತ್ತು
ಮುಂಬೈ ನಲ್ಲಿ ಎರಡು ದಿನ ಮದುವೆ ನಡೆಯಲಿದೆ ಎನ್ನಲಾಗಿತ್ತು. ಆದರೆ ಕಾಜಲ್ ಅವರು ಹೇಳಿರುವಂತೆ ಒಂದು ದಿನವಷ್ಟೆ ಸರಳವಾಗಿಯೇ ವಿವಾಹ ನಡೆಯಲಿದೆ. ಕೇವಲ ಕುಟುಂಬದವರನ್ನು ಮಾತ್ರವೇ ಮದುವೆ ಆಹ್ವಾನಿಸುವ ಸಾಧ್ಯತೆ ಇದೆ.