Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿಭಟನಾಕಾರರನ್ನು ಗೇಲಿ ಮಾಡಿದ ಕಂಗನಾಗೆ ಚಳಿ ಬಿಡಿಸಿದ ನಟ ದಿಲ್ಜೀತ್
ಕಂಗನಾ ರಣೌತ್ ಟ್ವೀಟ್ಗಳು ಸೌಜನ್ಯದ ಗಡಿ ಮೀರಿವೆ. ಕಂಗನಾ, ತೋಚಿದಂತೆ ಟ್ವೀಟ್ಗಳನ್ನು ಮಾಡಲು ಪ್ರಾರಂಭಿಸಿ ಕೆಲ ತಿಂಗಳುಗಳೇ ಆಗಿವೆ. ಯಾವುದೇ ಟ್ರೋಲ್ ಪೇಜ್ಗಳಿಗೆ ಕಡಿಮೆ ಇಲ್ಲದಂತೆ ಸುಳ್ಳು ಸುದ್ದಿ ಹಂಚಿಕೊಳ್ಳುವುದು, ಉದ್ದೇಶಪೂರ್ವಕ, ಆಧಾರರಹಿತ ಚಾರಿತ್ರ್ಯ ಹರಣದಲ್ಲಿ ತೊಡಗಿದ್ದಾರೆ ಕಂಗನಾ ರಣೌತ್.
ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಕಂಗನಾ ನೆಗೆಟಿವ್ ಟ್ವೀಟ್ಗಳನ್ನು ಮಾಡುತ್ತಿದ್ದಾರೆ. ನಿನ್ನೆ ಪೋಸ್ಟ್ ಮಾಡಿದ್ದ ಟ್ವೀಟ್ನಲ್ಲಿ ಹಿರಿಯ ಪ್ರತಿಭಟನಾಕಾರ್ತಿ ಮಹಿಂದರ್ ಕೌರ್ ಕುರಿತಂತೆ 'ಈಕೆ 100 ರೂಪಾಯಿಗೆ ಎಲ್ಲರಿಗೂ ಲಭ್ಯವಾಗುತ್ತಾಳೆ' ಎಂಬ ಕೀಳು ಹೇಳಿಕೆ ನೀಡಿದ್ದರು.
'ಆಕೆ ನೂರು ರೂಪಾಯಿಗೆ ಸಿಗುತ್ತಾಳೆ': ಪ್ರತಿಭಟನಾಕಾರ್ತಿ ಬಗ್ಗೆ ಕಂಗನಾ ಅಹಂಕಾರದ ಟ್ವೀಟ್
ಇದು ಬಾಲಿವುಡ್ನ ನಟ, ಪಂಜಾಬಿ ಗಾಯಕರೂ ಆಗಿರುವ ದಿಲ್ಜಿತ್ ದುಸ್ಸಾಂಜ್ ಗೆ ಸಿಟ್ಟು ತರಿಸಿದೆ. ಕಂಗನಾ ಟ್ವೀಟ್ನ ನಂತರ ಮಹಿಂದರ್ ಕೌರ್ ಅನ್ನು ಬಿಬಿಸಿ ಸಂದರ್ಶಿಸಿದ್ದು, ತಾನು ರೈತ ಮಹಿಳೆ ಆಗಿದ್ದು, ಎಲ್ಲಾ ರೈತರೊಂದಿಗೆ ನಾನು ಪ್ರತಿಭಟನೆಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ದುಸ್ಸಾಂಗ್, 'ಇಲ್ಲಿದೆ ನೋಡು ಸಾಕ್ಷಿ, ಇಷ್ಟೋಂದು ಕುರುಡಿ ಆಗಬಾರದು' ಎಂದು ಕಂಗನಾಗೆ ಟ್ವೀಟ್ ಮಾಡಿದ್ದರು.
ಕರಣ್ ಜೋಹರ್ ನ ಚಮಚಾ ನೀನು ಎಂದ ಕಂಗನಾ
ಅಲ್ಲಿಂದ ಕಂಗನಾರ ಟ್ವೀಟ್ ಸರಣಿ ಪ್ರಾರಂಭವಾಗಿದ್ದು, ದಿಲ್ಜಿತ್ ಅನ್ನು ಕರಣ್ ಜೋಹರ್ನ ಸಾಕುಪ್ರಾಣಿ ಎಂದು ಕರೆದು, ನಾನು ಶಾಹೀನ್ ಬಾಗ್ನ ಪ್ರತಿಭನಾಕಾರ್ತಿ ಬಾಲ್ಕಿ ಬಾನೊ ಬಗ್ಗೆ ಹೇಳಿದ್ದು, ಮಹಿಂದರ್ ಕೌರ್ ನನಗೆ ಯಾರೆಂದು ಗೊತ್ತಿಲ್ಲ, ಈ ನಾಟಕವನ್ನು ಈಗಲೇ ನಿಲ್ಲಿಸಿ ಎಂದಿದ್ದಾರೆ ಕಂಗನಾ.
ನಟನನ್ನು ಚಮಚಾ, ಬೂಟು ನೆಕ್ಕುವಾತ ಎಂದ ಕಂಗನಾ
ಅಷ್ಟೇ ಅಲ್ಲದೆ, ದಿಲ್ಜಿತ್ ದುಸ್ಸಾಂಜ್ ಅನ್ನು ಚಮಚಾ, ಪ್ರಭಾವಿಗಳ ಬೂಟು ನೆಕ್ಕಿ ಸಿನಿಮಾ ಗಿಟ್ಟಿಸಿಕೊಂಡವನು ಇನ್ನೂ ಬೇರೆ-ಬೇರೆ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಪ್ರತಿಯಾಗಿ ದಿಲ್ಜಿತ್ ದುಸ್ಸಾಂಜ್ ಸಹ ಸರಿಯಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಮೇಲೆ ಹರಿಹಾಯ್ದ ಕಂಗನಾ ಸಹೋದರಿ
'ನಿನಗೆ ಎಷ್ಟು ಮಂದಿ ಮಾಲೀಕರು?'
ನನಗಿಂತಲೂ ನೀನು (ಕಂಗನಾ) ಹೆಚ್ಚು ಸಿನಿಮಾ ಮಾಡಿದ್ದೀಯಾ? ಆ ಎಲ್ಲಾ ಸಿನಿಮಾಗಳನ್ನು ನೀನು ಬೂಟು ನೆಕ್ಕಿಯೇ ಸಂಪಾದನೆ ಮಾಡಿದೆಯಾ? ಒಂದು ಸಿನಿಮಾ ಮಾಡಿದ್ದಕ್ಕೆ ಕರಣ್ನ ಸೇವಕ ನಾನಾಗಿದ್ದರೆ, ನಿನಗೆ ಹಾಗಿದ್ದರು ಸಾಕಷ್ಟು ಮಾಲೀಕರಿದ್ದಾರೆ ಎಂದು ಉತ್ತರಿಸಿದ್ದಾ ದಿಲ್ಜಿತ್ ದುಸ್ಸಾಂಜ್.
ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ ದಿಲ್ಜಿತ್
ದಿಲ್ಜಿತ್ ದುಸ್ಸಾಂಜ್ ಪಂಜಾಬಿನವರೇ ಆಗಿದ್ದು, ಬಾಲಿವುಡ್ನ ಉದಯೋನ್ಮುಖ ನಟರಾಗಿದ್ದಾರೆ. ಕರೀನಾ ಕಪೂರ್ ಜೊತೆ ಉಡ್ತಾ ಪಂಜಾಬ್, ಅನುಷ್ಕಾ ಶರ್ಮಾ ಜೊತೆ ಪಿಲೌರಿ, ಸೂರ್ಮಾ, ಅರ್ಜುನ್ ಪಟಿಯಾಲಾ, ಅಕ್ಷಯ್ ಕುಮಾರ್ ಜೊತೆಗೆ ಗುಡ್ ನ್ಯೂಸ್, ಸೂರಜ್ ಪೆ ಮಂಗಲ್ ಭಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಪಂಜಾಬಿ ಸಿನಿಮಾದಲ್ಲಿ ನಟಿಸಿರುವ ಅವರು, ಪಂಜಾಬ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.