Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತು ತನಿಖೆ ನಡೆಸಲು ಬಿಹಾರದಿಂದ ಮುಂಬೈಗೆ ಬಂದಿಳಿದ ಐಪಿಎಸ್ ಅಧಿಕಾರಿಯನ್ನು ಮುಂಬೈನ ಪಾಲಿಕೆ ಅಧಿಕಾರಿಗಳು ಬಲವಂತವಾಗಿ ಸೀಲ್ ಹಾಕಿ ಕ್ವಾರೆಂಟೈನ್ ಮಾಡಿದ್ದಾರೆ. ಐಪಿಎಸ್ ಶ್ರೇಣಿಯ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಿಲ್ಲ. ಆದರೆ ಮುಂಬೈ ಅಧಿಕಾರಿಗಳ ಈ ಕೃತ್ಯ ತನಿಖೆಗೆ ಅಡ್ಡಿಪಡಿಸುವ ಅವರ ಪ್ರಯತ್ನಕ್ಕೆ ಸಾಕ್ಷಿ ಎಂದು ಆರೋಪಿಸಲಾಗಿದೆ.
ಈ ಘಟನೆಯನ್ನು ನಟಿ ಕಂಗನಾ ರಣಾವತ್ ಖಂಡಿಸಿದ್ದಾರೆ. ಈ ಅಧಿಕಾರಿಯನ್ನು ಐಪಿಎಸ್ ಮೆಸ್ಗೆ ಹೋಗಲು ಅವಕಾಶ ನೀಡಿಲ್ಲ. ಬಲವಂತವಾಗಿ ಕ್ವಾರೆಂಟೈನ್ ಮಾಡಲಾಗಿದೆ. ಏಕೆಂದರೆ ಮುಂಬೈನಲ್ಲಿ ಈಗ ಒಬ್ಬ ಪಪ್ಪು ಇದ್ದಾರೆ (ಆದಿತ್ಯ ಠಾಕ್ರೆ). ನೆಪೋಟಿಸಂನ ಮಾಫಿಯಾ ಮಾತ್ರವೇ ಜನರೊಂದಿಗೆ ಹೀಗೆ ವರ್ತಿಸಲು ಸಾಧ್ಯ. ಮಹಾರಾಷ್ಟ್ರ ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು ಎಂದು ಕಂಗನಾ ಹೇಳಿದ್ದಾರೆ. ಮುಂದೆ ಓದಿ.
ಮುಂಬೈ ಪೊಲೀಸ್ Vs ಬಿಹಾರ ಪೊಲೀಸ್: ಸುಶಾಂತ್ ಸಾವಿನ ಹಿಂದೆ ಏನೆಲ್ಲಾ ಅಗುತ್ತಿದೆ?
ಇದು ಗೂಂಡಾ ರಾಜ್
ಇದು ಏನು? ಗೂಂಡಾ ರಾಜ್? ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದನ್ನು ಹೇಳಲು ಬಯಸಿದ್ದೇನೆ, ಸುಶಾಂತ್ ಸಿಂಗ್ ರಜಪೂತ್ ಅವರನ್ನು ಹತ್ಯೆ ಮಾಡಿದ ತಪ್ಪಿತಸ್ಥರನ್ನು ಬಂಧಿಸದೆ ಹೋದರೆ ಮುಂಬೈನಲ್ಲಿ ಯಾವ ಹೊರಗಿನವರೂ ಸುರಕ್ಷಿತರಾಗಿರಲು ಸಾಧ್ಯವೇ ಇಲ್ಲ. ಅಪರಾಧಿಗಳು ದಿನೇ ದಿನೇ ಶಕ್ತಿಶಾಲಿಗಳಾಗುತ್ತಿದ್ದಾರೆ. ದಯವಿಟ್ಟು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಎಂದು ಕಂಗನಾ ಮನವಿ ಮಾಡಿದ್ದಾರೆ.
ನಾಲ್ವರು ಸಹೋದರಿಯರ ಏಕೈಕ ತಮ್ಮ
ರಕ್ಷಾಬಂಧನದ ಈ ಸಂದರ್ಭದಲ್ಲಿ ಸುಶಾಂತ್ ಸಹೋದರಿಯರು ಮತ್ತು ಕುಟುಂಬದ ನೋವಿನ ತೀವ್ರತೆಯನ್ನು ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾಲ್ವರು ಸಹೋದರಿಯರ ಏಕೈಕ ತಮ್ಮ ಹಲವು ವರ್ಷಗಳ ಪೂಜೆ, ಪ್ರಾರ್ಥನೆಗಳ ಬಳಿಕ ಜನಿಸಿದ್ದ ಎಂದು ಕಂಗನಾ ಕುಟುಂಬದ ಬಗ್ಗೆ ಅನುಕಂಪದ ಮಾತನ್ನಾಡಿದ್ದಾರೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನ ನಿಜಕ್ಕೂ ನಡೆದಿದ್ದೇನು?: ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಅಡುಗೆಯವರು
ಸುಶಾಂತ್ ಮಾಡಿದ ತಪ್ಪು
ಸುಶಾಂತ್ ಅವರು ಮಾಡಿದ ಒಂದೇ ಒಂದು ತಪ್ಪೆಂದರೆ ಅವರು 'ಬುಲ್ಲಿವುಡ್'ನ ಪಪ್ಪುಗಳಿಂತ ತುಂಬಾ ಬುದ್ಧಿವಂತನಾಗಿದ್ದು. ಹೀಗಾಗಿ ಅವರು ಸುಶಾಂತ್ರನ್ನು ಕೊಂದು ಹಾಕಿದರು. ಖಂಡಿತಾ ಇದು ಅವರ ಕುಟುಂಬ ಮತ್ತು ದೇಶಕ್ಕೆ ದುಃಖದ ದಿನ ಎಂದು ಹೇಳಿದ್ದಾರೆ.
ಮುಂಬೈ ಪೊಲೀಸರ ಮೇಲಿನ ಗೌರವ ಹೋಯ್ತು
ನಟಿ ಪಾಯಲ್ ಘೋಷ್ ಕೂಡ ಮುಂಬೈ ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇತ್ತು. ಭಾರತದಲ್ಲಿ ಮುಂಬೈ ಪೊಲೀಸರೇ ಉತ್ತಮರು ಎಂದು ಕೋಲ್ಕತಾದಲ್ಲಿರುವ ನನ್ನ ಕುಟುಂಬದವರೊಂದಿಗೆ ಜಗಳವಾಡುತ್ತಿದ್ದೆ. ರಾತ್ರಿ, ನಸುಕಿನಲ್ಲಿಯೂ ನಮ್ಮನ್ನು ಸುರಕ್ಷಿತರಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಮುಂಬೈ, ನನ್ನ ಮುಂಬೈ ಪೊಲೀಸ್. ಆದರೆ ಈಗ ಅದರ ಕುರಿತು ಇನ್ನು ಏನೂ ಹೇಳಲು ಸಾಧ್ಯವಾಗುತ್ತಿಲ್ಲ. ಸುಶಾಂತ್ ಸಾವನ್ನು ಸಿಬಿಐಗೆ ಒಪ್ಪಿಸಲು ಭಾರತ ಕೂಗುತ್ತಿದೆ ಎಂದು ಪಾಯಲ್ ಹೇಳಿದ್ದಾರೆ.