Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರ್ ಮಂಡ್ಯದಲ್ಲಿ ಅರೆಸ್ಟ್
ಅತ್ಯಾಚಾರ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಬಾರ್ಡ್ ಕುಮಾರ್ ಹೆಗ್ಡೆಯನ್ನು ಇಂದು (ಮೇ 30) ಮಂಡ್ಯದಲ್ಲಿ ಬಂಧಿಸಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಹೆಗ್ಗದಹಳ್ಳಿಯಲ್ಲಿ ಕುಮಾರ್ ಹೆಗ್ಡೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕುಮಾರ್ ಹೆಗ್ಡೆ ವಿರುದ್ಧ ಮುಂಬೈನ ಅಂಧೇರಿ ಮೂಲದ ಬ್ಯೂಟಿಷಿಯನ್ ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿದ್ದರು. ಕುಮಾರ್ ವಿರುದ್ಧ ಮುಂಬೈನ ಡಿಎನ್ ನಗರದ ಪೊಲೀಸ್ ಸ್ಟೇಷನ್ನಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಯುವತಿ ಆರೋಪ ಮಾಡಿದ್ದರು. ಕುಮಾರ್ ಮುಂಬೈ ತೊರೆದು ಕರ್ನಾಟಕಕ್ಕೆ ಬಂದು ತಲೆಮರೆಸಿಕೊಂಡಿದ್ದರು. ಮುಂದೆ ಓದಿ...
ಕುಮಾರ್ ವಿರುದ್ಧ ಯುವತಿ ಆರೋಪ
ದೂರು ನೀಡಿರುವ ಯುವತಿ ಹೇಳುವ ಪ್ರಕಾರ 8 ವರ್ಷಗಳಿಂದ ಒಬ್ಬರಿಗೊಬ್ಬರು ತಿಳಿದಿದ್ದು, ಕಳೆದ ವರ್ಷ ಜೂನ್ ನಲ್ಲಿ ಕುಮಾರ್ ಹೆಗ್ಡೆ ಮದುವೆಯಾವುದಾಗಿ ಒಪ್ಪಿಗೆ ನೀಡದ ಬಳಿಕ ಲಿವಿಂಗ್ ಟುಗೆದರ್ನಲ್ಲಿ ಇದ್ದೆವು ಎಂದಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ಮದುವೆಯಾಗುವುದಾಗಿ ಹೇಳಿ ದೈಹಿಕವಾಗಿ ಮತ್ತು ಅಶ್ಲೀಲವಾಗಿ ತನ್ನನ್ನು ಬಳಸಿಕೊಂಡಿರುವುದಾಗಿ ಆರೋಪಿಸಿದ್ದಾರೆ.
50 ಸಾವಿರ ಪಡೆದು ಊರಿಗೆ ಹೋಗಿದ್ದಾನೆ: ಯುವತಿ ಆರೋಪ
'ಏಪ್ರಿಲ್ 27ರಂದು ಕುಮಾರ್ ತಾಯಿ ನಿಧನ ಹೊಂದಿದ್ದಾರೆ, ತನ್ನ ಊರಿಗೆ ಹೋಗಬೇಕೆಂದು 50 ಸಾವಿರ ಕೇಳಿದ. 50 ಸಾವಿರ ನೀಡಿದ ಬಳಿಕ ಅವನು ತನ್ನ ಊರು ಕರ್ನಾಟಕಕ್ಕೆ ಹೋದ. ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿಲ್ಲ' ಎಂದಿದ್ದರು.
ಆತನಿಗೆ ಬೇರೊಬ್ಬರ ಜೊತೆ ಮದುವೆ ನಿಗದಿಯಾಗಿದೆ
ಮೇ 11ರಂದು ಯುವತಿಗೆ ಕುಮಾರ್ ಸ್ನೇಹಿತನಿಂದ ಫೋನ್ ಕರೆ ಬಂದಿದೆ. ಆತನನ್ನು ಯಾರು ಭೇಟಿ ಮಾಡಲು ಸಾಧ್ಯವಿಲ್ಲ ಮತ್ತು ಆತ ಮತ್ತೊಬ್ಬಳನ್ನು ಮದುವೆಯಾಗಲಿದ್ದಾನೆ ಎಂದು ಹೇಳಿದರು. ಬಳಿಕ ಕುಮಾರ್ ತಾಯಿ ಫೋನ್ ಮಾಡಿ ಇಬ್ಬರು ಬೇರೆ ಬೇರೆ ಜಾತಿಯಾದ ಕಾರಣ ಮದುವೆ ಸಾಧ್ಯವಿಲ್ಲ ಎಂದು ಹೇಳಿದರು ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ.
Recommended Video
ಜೂನ್ ನಲ್ಲಿ ಮದುವೆ ಆಗುತ್ತಿದ್ದಾರೆ; ಯುವತಿ ಆರೋಪ
ಜೂನ್ 5 ರಂದು ಕುಮಾರ್ ಮತ್ತೋರ್ವ ಯುವತಿ ಜೊತೆ ಮದುವೆಯಾಗುತ್ತಿರುವ ಮಾಹಿತಿ ತಿಳಿದುಬಂದಿದೆ. ಆತ ತನಗೆ ಮೋಸ ಮಾಡಿದ್ದಾನೆ, ಅತ್ಯಾಚಾರ ವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿ ಭಾರತ್ ಗಾಯಕ್ವಾಡ್, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದರು. ಇದೀಗ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.