Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಷೇಕ್ ಬಚ್ಚನ್ ನೇಣು ಹಾಕಿಕೊಂಡರೆ: ಜಯಾ ಬಚ್ಚನ್ಗೆ ಕಂಗನಾ ಪ್ರಶ್ನೆ
ಬಾಲಿವುಡ್ ವಿರುದ್ಧ, ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಸಮಯ ಸಾರಿರುವ ನಟಿ ಕಂಗನಾ ರಣೌತ್ ಈಗ ಬಾಲಿವುಡ್ನ ದೊಡ್ಡ ಮನೆ ಮೇಲೆ ಕಣ್ಣು ಹಾಕಿದ್ದಾರೆ.
ಹೌದು, ಅಮಿತಾಬ್ ಬಚ್ಚನ್ ಕುಟುಂಬ ಮೇಲೆ ಕಂಗನಾ ಮಾತುಗಳ ಬಾಣವನ್ನು ಎಸೆದಿದ್ದಾರೆ. ಇದಕ್ಕೆ ಕಾರಣ ನಿನ್ನೆ ನಟಿ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಆಡಿರುವ ಮಾತುಗಳು.
ಡ್ರಗ್ಸ್ ಪ್ರಕರಣ: ನಟಿ ಕಂಗನಾ ಮತ್ತು ರವಿ ಕಿಶನ್ ವಿರುದ್ಧ ಜಯಾ ಬಚ್ಚನ್ ಆಕ್ರೋಶ
ರಾಜ್ಯಸಭೆಯಲ್ಲಿ ಮಾತನಾಡಿದ್ದ ಜಯಾ ಬಚ್ಚನ್, ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀಯ ಬಾಲಿವುಡ್ ಉದ್ಯಮವನ್ನೇ ಹಳಿಯುವುದು ತಪ್ಪಲ್ಲ ಎಂದಿದ್ದರು. ಕೆಲವರು ಬಾಲಿವುಡ್ ಅನ್ನು ಮೋರಿಗೆ ಹೋಲಿಸಿದ್ದಾರೆ ಇದು ಖಂಡನೀಯ ಎಂದು ಕಂಗನಾ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದರು ಜಯಾ ಬಚ್ಚನ್.
ಶ್ವೇತಾ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ: ಕಂಗನಾ ಉದ್ಧಟತನ
ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, 'ನಿಮ್ಮ ಮಗಳು ಶ್ವೇತಾ ಗೆ ಯಾರಾದರೂ ಡ್ರಗ್ಸ್ ನೀಡಿದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ, ಆಕೆಯ ಮೇಲೆ ಹಲ್ಲೆ ನಡೆಸಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರೇ?' ಎಂದು ಪ್ರಶ್ನೆ ಮಾಡಿದ್ದಾರೆ.
ಅಭಿಷೇಕ್ ಬಚ್ಚನ್ ಆತ್ಮಹತ್ಯೆ ಮಾಡಿಕೊಂಡರೆ: ಕಂಗನಾ ಪ್ರಶ್ನೆ
ಮುಂದುವರೆದು, 'ಒಂದು ವೇಳೆ ಅಭಿಷೇಕ್ ಬಚ್ಚನ್, ಬೆದರಿಕೆ ಹಾಗೂ ಕಿರುಕುಳ ನೀಡಿದ್ದಾರೆಂದು ದೂರು ನೀಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರೇ?' ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.
ಮುಂಬೈ 'ಪಿಒಕೆ' ಎಂದು ಕಂಗನಾ ಹೇಳಿದರೂ ಬಾಲಿವುಡ್ ಯಾಕೆ ಮೌನ ವಹಿಸಿದೆ?: ಸಂಜಯ್ ರಾವತ್
ಕಂಗನಾ ಹೇಳಿಕೆಗೆ ವಿರೋಧ
'ಕಂಗನಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ' ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಯಾ ಬಚ್ಚನ್ ಹೇಳಿರುವ ಮಾತಿಗೂ ಕಂಗನಾ ಮಾಡಿರುವ ಪ್ರಶ್ನೆಗೂ ಸಂಬಂಧವೇ ಇಲ್ಲ ಎಂದಿದ್ದಾರೆ ನೆಟ್ಟಿಗರು. ಕೆಲವರು ಕಂಗನಾ ಗೆ ಬೆಂಬಲವನ್ನೂ ನೀಡಿದ್ದಾರೆ.
Recommended Video
ಬಾಲಿವುಡ್ ಅನ್ನು ಮೋರಿಗೆ ಹೋಲಿಸಿದ್ದ ಕಂಗನಾ
'ಸ್ವಚ್ಛ ಭಾರತ ಅಭಿಯಾನದಡಿ ಬಾಲಿವುಡ್ ಎಂಬ ಮೋರಿಯನ್ನು ಸ್ವಚ್ಛ ಮಾಡಬೇಕು' ಎಂದು ಕಂಗನಾ ಹೇಳಿದ್ದರು. ಮತ್ತೊಬ್ಬ ನಟ, ರಾಜಕಾರಣಿ ರವಿ ಕಿಶನ್ ನಿನ್ನೆ ಲೋಕಸಭೆಯಲ್ಲಿ ಮಾತನಾಡಿ, ಬಾಲಿವುಡ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇವರಿಬ್ಬರ ಹೆಸರು ಹೇಳದೆ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಇವರ ಹೇಳಿಕೆಯನ್ನು ವಿರೋಧಿಸಿದರು.