'ಮುಂಬೈನಿಂದ ಶಿಮ್ಲಾಗೆ ಕೇಸ್ ವರ್ಗಾಯಿಸಿ': ಸುಪ್ರೀಂ ಮೊರೆ ಹೋದ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈ ಕೋರ್ಟ್ನಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲ ಕೇಸ್ಗಳನ್ನು ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಎಂದು ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.
ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ದಾಖಲಾಗಿರುವ ಕೇಸ್, ಜಾವಿದ್ ಅಖ್ತರ್ ಹೂಡಿರುವ ಮಾನನಷ್ಟ ಮೊಕದ್ದಮೆ ಕೇಸ್ ಸೇರಿದಂತೆ ಹಲವು ಕೇಸ್ಗಳು ನಟಿ ಕಂಗನಾ ಹಾಗೂ ಸಹೋದರಿ ರಂಗೋಲಿ ವಿರುದ್ಧ ದಾಖಲಾಗಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ಕ್ಷುಲ್ಲಕ ಹಾಗೂ ತಮಗೆ ಕಿರುಕುಳ ನೀಡುವ ದುರುದ್ದೇಶ ಹೊಂದಿದೆ. ಮತ್ತು ಸಾರ್ವಜನಿಕ ತಮ್ಮ ವ್ಯಕ್ತಿತ್ವ ಕೆಡಿಸುವ ದುರುದ್ದೇಶದಿಂದ ಕೂಡಿದೆ ಎಂದು ಕಂಗನಾ ಮತ್ತು ರಂಗೋಲಿ ಆರೋಪಿಸಿದ್ದಾರೆ.

ದೇಶದ ನ್ಯಾಯಾಲಯಗಳ ಬಗ್ಗೆ ಅತ್ಯಂತ ನಂಬಿಕೆ ಮತ್ತು ಗೌರವವಿದ್ದರೂ, ಮುಂಬೈನಲ್ಲಿ ಪ್ರಕರಣಗಳ ವಿಚಾರಣೆ ಮುಂದುವರಿದರೆ ನಟಿ ಹಾಗೂ ಅವರ ಸಹೋದರಿಗೆ ಜೀವ ಮತ್ತು ಆಸ್ತಿಗೆ ಬೆದರಿಕೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
"ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಅರ್ಜಿದಾರರಿಗೆ (ಕಂಗನಾ ಹಾಗೂ ರಂಗೋಲಿ) ಕಿರುಕುಳ ನೀಡುತ್ತಿದೆ'' ಎಂದು ವಕೀಲ ನೀರಜ್ ಶೇಖರ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ, ನಟಿ ಕಂಗನಾ ರಣಾವತ್ ಮೂಲತಃ ಹಿಮಾಚಲ ಪ್ರದೇಶದವರು. ಹಾಗಾಗಿ, ತಮ್ಮದೇ ರಾಜ್ಯದಲ್ಲಿ ಈ ಕೇಸ್ ಮುನ್ನಡೆಸಲು ನಿರ್ಧರಿಸಿದ್ದು, ಮುಂಬೈನಿಂದ ಶಿಮ್ಲಾಗೆ ವರ್ಗಾಯಿಸಿ ಎಂದು ಕೇಳಿಕೊಂಡಿದ್ದಾರೆ.


Click it and Unblock the Notifications











