Don't Miss!
- Automobiles Hyundai: ಹ್ಯುಂಡೈ ಎಕ್ಸ್ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಶಸ್ತಿ ಸಮಾರಂಭಕ್ಕೆ ಹೋಗಲು ಬಟ್ಟೆ ಖರೀದಿಸಲು ಹಣ ಇರಲಿಲ್ಲ: ಕಷ್ಟದ ದಿನಗಳನ್ನು ನೆನೆದ ನಟಿ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಗಾಡ್ ಫಾದರ್ ಇಲ್ಲದೆ ಚಿತ್ರರಂಗ ಪ್ರವೇಶಿಸಿ ಕಠಿಣ ಪರಿಶ್ರಮದ ಮೂಲಕ ಟಾಪ್ ನಟಿಯಾಗಿ ಹೊರಹೊಮ್ಮಿದ್ದಾರೆ. ಪ್ರಾರಂಭದ ದಿನಗಳಲ್ಲಿ ಕಂಗನಾ ಎದುರಿಸಿದ ಕಷ್ಟಗಳ ಬಗ್ಗೆ ಆಗಾಗ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
Recommended Video
ಬಾಲಿವುಡ್ ಪ್ರಾವೇಶ ಮಾಡಿದ ಸಮಯದಲ್ಲಿ ಅವಕಾಶಕ್ಕಾಗಿ ಪರದಾಡಬೇಕಿತ್ತು. ಹಣ ಕೂಡ ಇರಲಿಲ್ಲ ಎಂದಿದ್ದಾರೆ. ಸಾಮಾನ್ಯ ಹುಡುಗಿಯಾಗಿ ವಿನಮ್ರ ಹಿನ್ನಲೆಯುಳ್ಳ ಕುಟುಂಬದಿಂದ ಚಿತ್ರರಂಗಕ್ಕೆ ಬಂದೆ. ಚಿಕ್ಕ ಪಟ್ಟಣ್ಣದಿಂದ ಬಂದ ನನಗೆ ಇಲ್ಲಿ ಪ್ರೀತಿ, ಘನತೆಗೆ ಅವಕಾಶಲಿರಲಿಲ್ಲ. ಸ್ವಜನಪಕ್ಷಪಾತ, ಭೌತಿಕವಾದ ಜನರ ಜಗತ್ತಿನಲ್ಲಿ ಬದುಕಬೇಕಿತ್ತು. ಎಂದಿದ್ದಾರೆ. ಮುಂದೆ ಓದಿ..
'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ
ಭಾರತದ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾಗಬೇಕು
"ಅಂದು ನಿರ್ಧರಿಸಿದೆ ಉತ್ತಮವಾದ ಮನೆ ಮತ್ತು ಉತ್ತಮ ಕಚೇರಿ ಹೊಂದಬೇಕೆಂದು. 50 ವರ್ಷ ತುಂಬವ ಹೊತ್ತಿಗೆ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಬೇಕು ಎಂದು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ.
ಪ್ರಶಸ್ತಿ ಸಮಾರಂಭಕ್ಕೆ ಹೋಗಲು ಬಟ್ಟೆ ಇರಲಿಲ್ಲ
ಸ್ಟಾರ್ ಕಿಡ್ ಅಲ್ಲದ ಕಾರಣ ಚಿತ್ರರಂಗದ ಪ್ರಾರಂಭದಲ್ಲಿ ತುಂಬಾ ಕಷ್ಟ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ಮೊದಲ ಚಿತ್ರ ಗ್ಯಾಂಗ್ ಸ್ಟಾರ್ ರಿಲೀಸ್ ಆದ ನಂತರ, ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಬೇಕಿತ್ತು. ಆದರೆ ಸಮಾರಂಭಕ್ಕೆ ಹೋಗಲು ಬಟ್ಟೆ ಖರೀಧಿಸಲು ಹಣ್ಣ ಇರಲಿಲ್ಲ. ಆ ನಂತರ ಫ್ಯಾಷನ್ ಡಿಸೈನರ್ ರಿಕ್ ರಾಯ್ ಬಟ್ಟೆಯನ್ನು ರೆಡಿಮಾಡಿ ಕೊಟ್ಟರು ಎಂದು ಹೇಳಿದ್ದಾರೆ.
ಸುಶಾಂತ್ ಸಾವಿನ ಪರಿಣಾಮ: 'ಬಾಲಿವುಡ್ ಕುಟುಂಬ'ಗಳ ಫಾಲೋವರ್ಸ್ ಸಂಖ್ಯೆ ಇಳಿಕೆ
ಡಿಸೈನರ್ ಬಟ್ಟೆ ರೆಡಿ ಮಾಡಿ ಕೊಟ್ಟರು
"ಆಗ ನನಗೆ ಈ ಬಟ್ಟೆಯನ್ನು ರೆಡಿಮಾಡಿಕೊಟ್ಟ ನಂತರ ಎಲ್ಲಿಂದ ಹಣಪಡೆಯುತ್ತಾರೆ ಎಂದು ಅಶ್ಚರ್ಯ ಪಟ್ಟಿದ್ದೆ. ಯಾರೊ ನನ್ನ ಸಹಾಯಕ್ಕೆ ಬಂದಿರುವುದು ಅದ್ಭುತವಾಗಿದೆ. ಅಲ್ಲಿಂದ ನಾನು ಈಗ ಇಲ್ಲಿವರೆಗೂ ಬಂದಿದ್ದೇನೆ" ಎಂದು ಹೇಳಿದ್ದಾರೆ.
ಸುಶಾಂತ್ ಸಿಂಗ್ನದ್ದು ಆತ್ಮಹತ್ಯೆಯಲ್ಲ ಯೋಜಿತ ಕೊಲೆ: ನಟಿ ಕಂಗನಾ ರಣಾವತ್
ಕಂಗನಾ ಬಳಿ ಇರುವ ಸಿನಿಮಾಗಳು
ಕಂಗನಾ ಕೊನೆಯದಾಗಿ ಪಂಗ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಲೈವಿ, ಧಾಖಡ್, ತೇಜಸ್ ಸೇರಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಕಂಗನಾ, ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ಮಾಫಿಯಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ.