Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ವಿರುದ್ಧ ಹೋರಾಡಿದ ಅನುಭವ ಹಂಚಿಕೊಂಡ ಕಂಗನಾ ರನೌತ್
(ಸೂಚನೆ: ಕೊರೊನಾ ಪಾಸಿಟಿವ್ ಬಂದವರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ವೈದ್ಯರ ಸಲಹೆ ಪಡೆದು ಔಷಧಗಳನ್ನು ಪಡೆಯಿರಿ. ಸ್ವಯಂ ವೈದ್ಯ ಅಪಾಯಕಾರಿ ಆಗಬಹುದು)
ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದ ನಟಿ ಕಂಗನಾ ಮತ್ತೆ ಪರೀಕ್ಷೆಗೆ ಒಳಪಟ್ಟಿದ್ದು ಕೊರೊನಾ ನೆಗೆಟಿವ್ ವರದಿ ಪಡೆದಿದ್ದಾರೆ.
ತಮಗೆ ಕೊರೊನಾ ನೆಗೆಟಿವ್ ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಗನಾ, ತಾವು ಕೊರೊನಾ ಪಾಸಿಟಿವ್ ಆಗಿದ್ದಾಗ ಏನೇನು ಸಮಸ್ಯೆಗಳನ್ನು ಎದುರಿಸಿದೆ ಹಾಗೂ ಕೊರೊನಾವನ್ನು ಹೇಗೆ ಮಣಿಸಿದೆ ಎಂದು ಹೇಳಿಕೊಂಡಿದ್ದಾರೆ.
'ನನಗೆ ಕೊರೊನಾ ಪಾಸಿಟಿವ್ ಆದಾಗ ಸಿಟಿ ಸ್ಕ್ಯಾನ್ ಮಾಡಿಸಿದ್ದೆ ಆಗ ಸಿಟಿ ಕೌಂಟ್ 18 ಇತ್ತು. ಇದು ಬಹಳ ಕಡಿಮೆ. ಈ ಏಳೆಂಟು ದಿನಗಳಲ್ಲಿ ನಾನು ಕೊರೊನಾ ವಿರುದ್ಧ ಹೋರಾಡಿದೆ. ಈ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಕೊಂಡೆ ಆದರೆ ಕೆಲವರು ಅದರ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡಿದರು. ಆದರೆ ನನ್ನ ಅಕ್ಕ ನನಗೆ ಪ್ರೇರಣೆ ನೀಡಿದರು ಹಾಗಾಗಿ ನನ್ನ ಅನುಭವ ಹಂಚಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಕಂಗನಾ.
'ಯಾವುದಕ್ಕೂ ಹೆದರಬೇಡಿ ನೀವು ಹೆದರಿದರೆ ನಿಮ್ಮ ಮನಸ್ಸಿನಲ್ಲಿ ವೈರಿಯನ್ನು ದೊಡ್ಡದಾಗಿ ಕಲ್ಪಿಸಿಕೊಳ್ಳಲು ಆರಂಭಿಸುತ್ತೀರ ಆಗ ನಿಮ್ಮ ವೈರಿಯನ್ನು ನಿಮಗೆ ಸೋಲಿಸಲು ಆಗುವುದಿಲ್ಲ' ಎಂದಿದ್ದಾರೆ ಕಂಗನಾ.
'ಮೂರು ವಿಭಾಗಗಳಾಗಿ ವಿಂಗಡಿಸಿಕೊಂಡು ಹಾರಾಟಕ್ಕಿಳಿಯಿರಿ'
'ನಿಮಗೆ ವೈರಸ್ ಸಮಸ್ಯೆ ಎದುರಾದಾಗ ಸಮಸ್ಯೆಯನ್ನು ದೈಹಿಕ, ಮಾನಸಿಕ, ಭಾವನಾತ್ಮ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ಹೋರಾಡಲು ಅಣಿಯಾಗಿ. ನಿಮಗೆ ದೈಹಿಕವಾಗಿ ಏನು ಸಮಸ್ಯೆ ಆಗುತ್ತಿದೆ ಎಂದು ಮೊದಲು ಗುರುತಿಸಿಕೊಳ್ಳಿ. ನನಗೆ ಕೊರೊನಾ ಪಾಸಿಟಿವ್ ಆಗಿದ್ದಾಗ ವಾಸನೆ, ರುಚಿ ನಿಂತಿತ್ತು, ದೈಹಿಕವಾಗಿ ಬಹಳ ಸುಸ್ತು ಕಾಡುತ್ತಿತ್ತು' ಎಂದಿದ್ದಾರೆ ಕಂಗನಾ.
ದಿನಕ್ಕೆ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದೆ: ಕಂಗನಾ
'ನಾನು ದಿನಕ್ಕೆ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದೆ. ಕಶಾಯ ಕುಡಿಯುತ್ತಿದ್ದೆ. ಬಿಸಿ ನೀರಲ್ಲಿ ಉಪ್ಪು ಬೆರೆಸಿ ಗಾಗಲ್ ಮಾಡುತ್ತಿದ್ದೆ. ಅಜ್ವೈನ್, ಕಾಳು ಮೆಣಸು, ಅರಿಶಿನ ಇತರೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಕಶಾಯ ಮಾಡಿಕೊಂಡು ಕುಡಿಯಿರಿ' ಎಂದರು ಕಂಗನಾ.
'ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ'
'ಕೊರೊನಾ ಸಮಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅವಶ್ಯಕ. ನಾನು ಕೆಲವು ಸರಳ ಯೋಗಾಸನ ಮಾಡುತ್ತಿದ್ದೆ. ಕೊರೊನಾ ಸಮಯದಲ್ಲಿ ಧ್ಯಾನ ಮಾಡುವುದು ಕಷ್ಟವಾಗಿಬಿಡುತ್ತದೆ. ಆದರೆ ಬಿಡದೆ ನಾನು ಧ್ಯಾನ ಮಾಡಿದೆ' ಎಂದಿದ್ದಾರೆ ಕಂಗನಾ.
ಓಂಕಾರ ಹೇಳಿ, ಕಪಾಲಬಾತಿ ಮಾಡಿ: ಕಂಗನಾ
'ಕೊರೊನಾ ಸಮಯದಲ್ಲಿ ನಗೆಟಿವ್ ಆಲೋಚನೆಗಳು ಸಾಕಷ್ಟು ಬರುತ್ತಿರುತ್ತವೆ. ಹಾಗಾಗಿ ಪ್ರಾಣಾಯಮ ಮಾಡಿ. ಓಂಕಾರ ಹೇಳಿ, ಕಪಾಲಬಾತಿ ಮಾಡಿ ಇನ್ನೂ ಕೆಲವು ಯೋಗಾಸನಗಳನ್ನು ಮಾಡಿ. ಕೊರೊನಾ ಸಮಯದಲ್ಲಿ ನನಗೆ ಸಿಟ್ಟು ಬರುವುದು ಸಿಡಿಮಿಡಿಗೊಳ್ಳುವುದು ಆಗುತ್ತಿತ್ತು ಅದೆಲ್ಲದರಿಂದ ನನ್ನನ್ನು ಯೋಗಾಸನ ಕಾಪಾಡಿತು ಎಂದಿದ್ದಾರೆ ಕಂಗನಾ.
Recommended Video
ಹನುಮಾನ್ ಚಾಳೀಸ ಕೇಳಿದೆ ಎಂದ ಕಂಗನಾ
'ಕೊರೊನಾ ಬಂದಿದ್ದ ಸಮಯದಲ್ಲಿ ನಾನು ಹನುಮಾನ ಚಾಳಿಸ ಹೆಚ್ಚು ಕೇಳಿದೆ. ಗಾಯತ್ರಿ ಮಂತ್ರ ಕೇಳಿದೆ ಇತರೆ ದೇವರನಾಮಗಳನ್ನು ಹೆಚ್ಚು ಕೇಳಿದೆ. ಇದೆಲ್ಲವೂ ನಾನು ಶಾಂತವಾಗಿರಲು ಸಹಕರಿಸಿತು' ಎಂದಿದ್ದಾರೆ ಕಂಗನಾ. ಕಂಗನಾ ಅವರು ತಮ್ಮ ವಿಡಿಯೋದಲ್ಲಿ ತಾವು ಯಾವ ಮಾತ್ರೆ ತೆಗೆದುಕೊಂಡೆ, ಯಾವ ವೈದ್ಯರು ಏನು ಸಲಹೆ ನೀಡಿದರು ಎಂದು ಹೇಳಿಲ್ಲ.