Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಾವಳಿ-ಮಲೆನಾಡಿನ ವಿಶೇಷ ಖಾದ್ಯಕ್ಕೆ ಕಂಗನಾ ಫಿದಾ: ಪತ್ರೊಡೆ ಸವಿದು ನಟಿ ಹೇಳಿದ್ದೇನು?
ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದದಲ್ಲಿ ವಿಷೇಶವಾಗಿ ತಯಾರಿಸುವ ಖಾದ್ಯ ಪತ್ರೊಡೆ. ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಬೆಳೆಯುವ ಕೆಸುವಿನ ಎಲೆಯಿಂದ ಈ ಖಾದ್ಯ ತಯಾರಿಸುತ್ತಾರೆ. ಈ ಭಾಗದವರಿಗೆ ಪತ್ರೊಡೆ ಅಂದರೆ ಅಚ್ಚುಮೆಚ್ಚು. ಮಳೆಗಾಲದ ಆಷಾಢ ಮಾಸದ ಸಮಯದಲ್ಲಿ ಈ ವಿಶೇಷವಾದ ಖಾದ್ಯವನ್ನು ತಯಾರಿಸುತ್ತಾರೆ.
ಈ ಪತ್ರೊಡೆ ಈಗ ಬಾಲಿವುಡ್ ನಲ್ಲಿಯೂ ಫೇಮಸ್ ಆಗಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಪತ್ರೊಡೆ ಸವಿದು ಸಂತಸ ಪಟ್ಟಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಪತ್ರೊಡೆಯನ್ನು ತಿಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ಇಬ್ಬರು Below Average....,ಅವರ ಟೈಂ ಮುಗಿತು': 'ಲವ್ಬರ್ಡ್ಸ್' ಕಾಲೆಳೆದ ಕಂಗನಾ
ಅಂದ್ಹಾಗೆ ಕಂಗನಾ ರಣಾವತ್ ಹಿಮಾಚಲ ಪ್ರದೇಶದವರು. ಆದರೂ ಪತ್ರೊಡೆಯ ಸ್ವಾದಿಷ್ಟ ಖಾದ್ಯ ಕಂಗನಾಗೆ ತುಂಬಾ ಇಷ್ಟ. ಅಮ್ಮ ನನಗೆ ತುಂಬಾ ಇಷ್ಟವಾದ ಪತ್ರೊಡೆ ಮತ್ತು ಲಸ್ಸಿ ಜಾಲ್ ಮಾಡಿದ್ದಾರೆ. ಕೆಸುವಿನ ಎಳೆಯಿಂದ ತಯಾರಿಸಿದ ಖಾದ್ಯ ಪತ್ರೊಡೆ. ನನ್ನ ನೆಚ್ಚಿನ ಗಿಡಮೂಲಿಕೆ ಇದು" ಎಂದು ಬರೆದುಕೊಂಡಿದ್ದಾರೆ.
ಕಂಗನಾ ಮನೆಯ ಪತ್ರೊಡೆಗೆ ಕರಾವಳಿಯ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಕಂಕನಾ ನೆಪೋಟಿಸಂ ವಿರುದ್ಧ, ಬಾಲಿವುಡ್ ನ ಪ್ರಮುಖ ವ್ಯಕ್ತಿಗಳ ವಿರುದ್ಧ ಟ್ವೀಟ್ ಮಾಡುತ್ತ ಕಿಡಿ ಕಾರುತ್ತಿದ್ದರು. ಇದೀಗ ವಿಶೇಷ ಖಾದ್ಯ ಸವಿದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇನ್ನೂ ಕರಾವಳಿ ಮೂಲದ ಬಾಲಿವುಡ್ ನಟಿಯರಾದ ಶಿಲ್ಪ ಶೆಟ್ಟಿ, ದೀಪಿಕಾ ಪಡುಕೋಣೆ, ಪೂಜೆ ಹೆಗಡೆ ಸೇರಿದಂತೆ ಅನೇಕರು ಕರಾವಳಿಯ ವಿಶೇಷ ತಿನಿಸುಗಳ ಬಗ್ಗೆ ವಿಡಿಯೋ ಮೂಲಕ ಪರಿಚಯಿಸುತ್ತಿರುತ್ತಾರೆ. ಇದೀಗ ಕಂಗನಾ ಕೂಡ ಪತ್ರೊಡೆಗೆ ಫಿದಾ ಆಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.