Don't Miss!
- News Dingaleshwar Swamiji: ಕೋಟಿ ಒಡೆಯ ದಿಂಗಾಲೇಶ್ವರ ಸ್ವಾಮೀಜಿಯ ಆಸ್ತಿ ವಿವರ ತಿಳಿಯಿರಿ
- Sports PBKS vs MI: ಐಪಿಎಲ್ನಲ್ಲಿ ಈ ಇತಿಹಾಸ ನಿರ್ಮಿಸಿದ 2ನೇ ಆಟಗಾರ ರೋಹಿತ್ ಶರ್ಮಾ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಿಕಾ ನಂತರ ರಜಪೂತರ ಕೆಂಗಣ್ಣಿನಿಗೆ ಗುರಿಯಾದ ಕಂಗನಾ
Recommended Video
ಕೆಲವು ದಿನಗಳ ಹಿಂದೆಯಷ್ಟೇ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ ಪದ್ಮಾವತ್ ಸಿನಿಮಾ ವಿವಾದಲ್ಲಿ ಸಿಲುಕಿಕೊಂಡಿದ್ದು. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾ ಸಾಕಷ್ಟು ಹೋರಾಟಗಳ ಮಧ್ಯೆ ತಡವಾಗಿ ತೆರೆಗೆ ಬಂತು.
ರಜಪೂತ ಕರಣಿ ಸೇನಾ ಆದೇಶದಂತೆ ಸಿನಿಮಾದ ಶೀರ್ಷಿಕೆಯನ್ನ ಬದಲಾವಣೆ ಮಾಡಿಕೊಂಡಿತ್ತು ಪದ್ಮಾವತ್ ಸಿನಿಮಾತಂಡ. ಸದ್ಯ ವಿವಾದ ಅಂತ್ಯವಾಯಿತು ಇನ್ನು ಮುಂದೆ ಯಾವುದೇ ತೊಂದರೆ ಇಲ್ಲ ಎಂದು ಸಿನಿಮಾತಂಡ ನಿಟ್ಟುಸಿರು ಬಿಟ್ಟಿತ್ತು. ದೀಪಿಕಾ ನಿರಾಳವಾಗುವಷ್ಟರಲ್ಲಿ ಇದೇ ಸಮಸ್ಯೆಗೆ ನಟಿ ಕಂಗನಾ ಸಿಕ್ಕಿ ಹಾಕಿಕೊಂಡಿದ್ದಾರೆ.
ರಜಪೂತರ ಕೆಂಗಣ್ಣು ಈಗ ಕಂಗನಾ ರಣಾವತ್ ಮೇಲೆ ಬಿದ್ದಿದೆ. ಕಂಗನಾ ಅಭಿನಯದ ಸಿನಿಮಾದ ಚಿತ್ರೀಕರಣ ನಿಲ್ಲಿಸಬೇಕೆಂದು ರಜಪೂತರು ಹೋರಾಟ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಕಂಗನಾ ಅಭಿನಯದ ಯಾವ ಚಿತ್ರಕ್ಕೆ ರಜಪೂತರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಅಷ್ಟಕ್ಕೂ ಅಂತಹ ವಿಚಾರ ಸಿನಿಮಾದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಣಿಕರ್ಣಿಕಾ ಸಿನಿಮಾಗೆ ವಿರೋಧ
ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯ ಮಣಿಕರ್ಣಿಕಾ ಸಿನಿಮಾಗೆ ರಜಪೂತರು ವಿರೋಧ ವ್ಯಕ್ತ ಪಡಿಸಿದ್ದಾರೆ. ರಾಜಸ್ಥಾನದ 'ಸರ್ವ ಬ್ರಾಹ್ಮಣರ ಮಹಾ ಸಭಾ' ಚಿತ್ರವನ್ನ ವಿರೋಧಿಸಲು ಶುರು ಮಾಡಿದೆ.
ರಾಣಿ ಲಕ್ಷ್ಮೀ ಬಾಯಿಗೆ ನಿಂದನೆ
ವಿದೇಶಿ ಬರಹಗಾರ ಬರೆದಿರುವ 'ರಾಣಿ' ಎನ್ನುವ ಪುಸ್ತಕವನ್ನ ಆಧಾರವಾಗಿಟ್ಟುಕೊಂಡು ಮಣಿಕರ್ಣಿಕಾ ಸಿನಿಮಾವನ್ನ ನಿರ್ದೇಶನ ಮಾಡಲಾಗಿದೆಯಂತೆ. ಪುಸ್ತಕದಲ್ಲಿ ರಾಣಿ ಲಕ್ಷ್ಮೀ ಬಾಯಿ ಹಾಗೂ ಬ್ರಿಟಿಷ್ ಪ್ರಜೆಯ ಮಧ್ಯೆ ಪ್ರೀತಿ ಇತ್ತು ಎಂದು ಬರೆಯಲಾಗಿದೆ. ಇದು ನಮ್ಮ ರಾಣಿಯ ತೇಜೋವಧೆ ಮಾಡುವಂತಹ ಕೆಲಸ ಎಂದು ಸರ್ವ ಬ್ರಾಹ್ಮಣರ ಮಹಾ ಸಭಾ ಅಭಿಪ್ರಾಯ ಪಟ್ಟಿದೆ.
ವಿವರ ನೀಡುವಂತೆ ನಿರ್ಮಾಪಕರಿಗೆ ಪತ್ರ
ಮಣಿಕರ್ಣಿಕಾ ಸಿನಿಮಾದಲ್ಲಿ ಯಾವ ವಿಚಾರಗಳನ್ನ ತೆಗೆದುಕೊಂಡಿದ್ದೀರ ಎಂದು ವಿವರಣೆ ನೀಡಿಬೇಕಾಗಿ ವಿನಂತಿ ಮಾಡಿ ಸರ್ವ ಬ್ರಾಹ್ಮಣರ ಮಹಾ ಸಭಾ ಅಧ್ಯಕ್ಷ ನಿರ್ಮಾಪಕ ಕಮಲ್ ಜೈನ್ ಅವರಿಗೆ ಪತ್ರ ಬರೆದಿದ್ದಾರೆ.
ಹೋರಾಟಕ್ಕೆ ಸಿದ್ದ ಎಂದ ಕರಣಿ ಸೇನಾ
ರಾಣಿ ಲಕ್ಷ್ಮೀ ಬಾಯಿ ಬ್ರಾಹ್ಮಣ ಹೆಮ್ಮೆ ಮಾತ್ರವಲ್ಲ, ಅವರು ರಜಪೂತರ ರಾಣಿ ಹಾಗಾಗಿ ಈ ಹೋರಾಟದಲ್ಲಿ ನಾವು ಕೂಡ ಭಾಗಿ ಆಗುತ್ತೇವೆ ಎಂದು ರಜಪೂತ ಕರಣಿ ಸೇನಾ ಅವರು ತಿಳಿಸಿದ್ದಾರೆ. ಒಟ್ಟಾರೆ ಬಾಲಿವುಡ್ ಮಂದಿಗೂ ರಜಪೂತ ರಾಣಿಯರ ಸಿನಿಮಾಗಳಿಗೂ ಮತ್ತೆ ಮತ್ತೆ ವಿವಾದ ಆಗುತ್ತಲೇ ಇದೆ.