Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡು ಕೋಟಿ ಕೇಳಿದ ಕಂಗನಾ ವಿರುದ್ಧ ಹರಿಹಾಯ್ದ ಬಿಎಂಸಿ
ಅಕ್ರಮ ನಿರ್ಮಾಣ ಎಂಬ ಆರೋಪದ ಮೇಲೆ ಕಂಗನಾ ರಣೌತ್ ರ ಮುಂಬೈ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಯು ಒಡೆದು ಹಾಕಿದೆ. ಈ ಘಟನೆ ಸಾಕಷ್ಟು ಬಿಸಿ-ಬಿಸಿ ಚರ್ಚೆ ಹುಟ್ಟುಹಾಕಿದೆ.
ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ನೊಟೀಸ್ ನೀಡಿದ್ದ ಮುಂಬೈ ಮಹಾನಗರ ಪಾಲಿಕೆ ಕಂಗನಾ ಅವರ ಕಚೇರಿ ಕಟ್ಟಡವನ್ನು ಒಡೆದುಹಾಕಿತ್ತು. ಇದನ್ನು ಕಂಗನಾ ಸೇರಿದಂತೆ ಹಲವರು ಕಟುವಾಗಿ ಖಂಡಿಸಿದ್ದರು.
ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಸನ್ನಿ ಲಿಯೋನ್
ತಮ್ಮ ಕಟ್ಟಡವನ್ನು ಒಡೆದಿದ್ದಕ್ಕೆ ವಿರುದ್ಧವಾಗಿ ಬಿಎಂಸಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಂಗನಾ, ಬಿಎಂಸಿಯು ತಮಗೆ ಎರಡು ಕೋಟಿ ನಷ್ಟ ಪರಿಹಾರ ಕೊಡಬೇಕು ಎಂದು ಅರ್ಜಿ ಸಲ್ಲಿಸಿದರು. ಈ ಅರ್ಜಿಗೆ ನ್ಯಾಯಾಲಯಕ್ಕೆ ಬಿಎಂಸಿಯು ಉತ್ತರ ನೀಡಿದೆ.
ಎರಡು ಕೋಟಿ ಬೇಡಿಕೆ ನ್ಯಾಯಾಂಗ ನಿಂದನೆ: ಬಿಎಂಸಿ
ನ್ಯಾಯಾಲಯಕ್ಕೆ ಉತ್ತರಿಸಿರುವ ಬಿಎಂಸಿ, 'ಕಂಗನಾ ಅವರ ಎರಡು ಕೋಟಿ ಬೇಡಿಕೆ, ಕಾನೂನು ಪ್ರಕ್ರಿಯೆಯ ನಿಂದನೆ ಆಗಿದೆ. ಕಾನೂನು, ನಿಯಮ ಪಾಲನೆ ಮಾಡಿದ್ದಕ್ಕೆ ದಂಡ ಪಾವತಿಸಲು ಕೇಳುವುದು ಕಾನೂನು ನಿಂದನೆ' ಎಂದಿದ್ದಾರೆ.
ಚುನಾವಣೆ ಹೇಳಿಕೆ: ಸುಳ್ಳು ಹೇಳಿ ಸಿಕ್ಕಿ ಬಿದ್ದ ಕಂಗನಾ!
ಕಂಗನಾ ಗೆ ದಂಡ ಹಾಕಿ: ಬಿಎಂಸಿ ಮನವಿ
ಅಷ್ಟೇ ಅಲ್ಲದೆ, ಕಂಗನಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರದ್ದುಗೊಳಿಸಿ, ಇಂಥಹಾ ಅರ್ಜಿ ಸಲ್ಲಿಸಿ ಬಾಂಬೆ ಹೈಕೋರ್ಟ್ನ ಸಮಯ ವ್ಯರ್ಥ ಮಾಡಿದ್ದಕ್ಕೆ ಕಂಗನಾ ಮೇಲೆ ದಂಡ ಹೇರಬೇಕು ಎಂದು ಬಿಎಂಸಿ ಮನವಿ ಮಾಡಿದೆ.
ಸೆಪ್ಟೆಂಬರ್ 9 ರಂದು ಕಚೇರಿಯ ಒಂದು ಭಾಗ ಒಡೆಯಲಾಯಿತು
ಸೆಪ್ಟೆಂಬರ್ 9 ರಂದು ಬಿಎಂಸಿಯು ಕಂಗನಾರ ಕಚೇರಿಯ ಒಂದು ಭಾಗವನ್ನು ಒಡೆದುಹಾಕಿತ್ತು. ಅದೇ ದಿನ ನ್ಯಾಯಾಲಯದಿಂದ ತಡೆ ಆಜ್ಞೆಯನ್ನು ಕಂಗನಾ ತಮ್ಮ ವಕೀಲರ ಮುಖಾಂತರ ತಂದಿದ್ದರು. ಹಾಗಾಗಿ ಕಚೇರಿ ಒಡೆಯುವ ಕಾರ್ಯವನ್ನು ಬಿಎಂಸಿ ಅರ್ಧಕ್ಕೆ ಕೈಬಿಟ್ಟಿತು.
ದೀಪಿಕಾ ಪಡುಕೋಣೆಯನ್ನು ನೋಡಿ ಕಲಿ: ಕಂಗನಾ ಗೆ ರಮ್ಯಾ ಸಲಹೆ
Recommended Video
ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ
ಕಂಗನಾ ರಣೌತ್, ಮುಂಬೈ ಅನ್ನು 'ಪಾಕ್ ಆಕ್ರಮಿತ ಕಾಶ್ಮೀರ' ಎಂದಿದ್ದರು. ಇದಕ್ಕೆ ಅಧಿಕಾರದಲ್ಲಿರುವ ಶಿವಸೇನಾ ಪಕ್ಷದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಂಗನಾ ಸಹ ಶಿವಸೇನೆ ಹಿರಿಯ ಮುಖಂಡರೊಬ್ಬರಿಗೆ ಸವಾಲು ಎಸೆದಿದ್ದರು. ಈ ಘಟನಾವಳಿಗಳ ನಂತರ ಕಂಗನಾ ರ ಕಚೇರಿಯನ್ನು ಬಿಎಂಸಿ ಒಡೆಯಿತು.