Don't Miss!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡು ಕೋಟಿ ಕೇಳಿದ ಕಂಗನಾ ವಿರುದ್ಧ ಹರಿಹಾಯ್ದ ಬಿಎಂಸಿ
ಅಕ್ರಮ ನಿರ್ಮಾಣ ಎಂಬ ಆರೋಪದ ಮೇಲೆ ಕಂಗನಾ ರಣೌತ್ ರ ಮುಂಬೈ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಯು ಒಡೆದು ಹಾಕಿದೆ. ಈ ಘಟನೆ ಸಾಕಷ್ಟು ಬಿಸಿ-ಬಿಸಿ ಚರ್ಚೆ ಹುಟ್ಟುಹಾಕಿದೆ.
ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ನೊಟೀಸ್ ನೀಡಿದ್ದ ಮುಂಬೈ ಮಹಾನಗರ ಪಾಲಿಕೆ ಕಂಗನಾ ಅವರ ಕಚೇರಿ ಕಟ್ಟಡವನ್ನು ಒಡೆದುಹಾಕಿತ್ತು. ಇದನ್ನು ಕಂಗನಾ ಸೇರಿದಂತೆ ಹಲವರು ಕಟುವಾಗಿ ಖಂಡಿಸಿದ್ದರು.
ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಸನ್ನಿ ಲಿಯೋನ್
ತಮ್ಮ ಕಟ್ಟಡವನ್ನು ಒಡೆದಿದ್ದಕ್ಕೆ ವಿರುದ್ಧವಾಗಿ ಬಿಎಂಸಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಂಗನಾ, ಬಿಎಂಸಿಯು ತಮಗೆ ಎರಡು ಕೋಟಿ ನಷ್ಟ ಪರಿಹಾರ ಕೊಡಬೇಕು ಎಂದು ಅರ್ಜಿ ಸಲ್ಲಿಸಿದರು. ಈ ಅರ್ಜಿಗೆ ನ್ಯಾಯಾಲಯಕ್ಕೆ ಬಿಎಂಸಿಯು ಉತ್ತರ ನೀಡಿದೆ.
ಎರಡು ಕೋಟಿ ಬೇಡಿಕೆ ನ್ಯಾಯಾಂಗ ನಿಂದನೆ: ಬಿಎಂಸಿ
ನ್ಯಾಯಾಲಯಕ್ಕೆ ಉತ್ತರಿಸಿರುವ ಬಿಎಂಸಿ, 'ಕಂಗನಾ ಅವರ ಎರಡು ಕೋಟಿ ಬೇಡಿಕೆ, ಕಾನೂನು ಪ್ರಕ್ರಿಯೆಯ ನಿಂದನೆ ಆಗಿದೆ. ಕಾನೂನು, ನಿಯಮ ಪಾಲನೆ ಮಾಡಿದ್ದಕ್ಕೆ ದಂಡ ಪಾವತಿಸಲು ಕೇಳುವುದು ಕಾನೂನು ನಿಂದನೆ' ಎಂದಿದ್ದಾರೆ.
ಚುನಾವಣೆ ಹೇಳಿಕೆ: ಸುಳ್ಳು ಹೇಳಿ ಸಿಕ್ಕಿ ಬಿದ್ದ ಕಂಗನಾ!
ಕಂಗನಾ ಗೆ ದಂಡ ಹಾಕಿ: ಬಿಎಂಸಿ ಮನವಿ
ಅಷ್ಟೇ ಅಲ್ಲದೆ, ಕಂಗನಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರದ್ದುಗೊಳಿಸಿ, ಇಂಥಹಾ ಅರ್ಜಿ ಸಲ್ಲಿಸಿ ಬಾಂಬೆ ಹೈಕೋರ್ಟ್ನ ಸಮಯ ವ್ಯರ್ಥ ಮಾಡಿದ್ದಕ್ಕೆ ಕಂಗನಾ ಮೇಲೆ ದಂಡ ಹೇರಬೇಕು ಎಂದು ಬಿಎಂಸಿ ಮನವಿ ಮಾಡಿದೆ.
ಸೆಪ್ಟೆಂಬರ್ 9 ರಂದು ಕಚೇರಿಯ ಒಂದು ಭಾಗ ಒಡೆಯಲಾಯಿತು
ಸೆಪ್ಟೆಂಬರ್ 9 ರಂದು ಬಿಎಂಸಿಯು ಕಂಗನಾರ ಕಚೇರಿಯ ಒಂದು ಭಾಗವನ್ನು ಒಡೆದುಹಾಕಿತ್ತು. ಅದೇ ದಿನ ನ್ಯಾಯಾಲಯದಿಂದ ತಡೆ ಆಜ್ಞೆಯನ್ನು ಕಂಗನಾ ತಮ್ಮ ವಕೀಲರ ಮುಖಾಂತರ ತಂದಿದ್ದರು. ಹಾಗಾಗಿ ಕಚೇರಿ ಒಡೆಯುವ ಕಾರ್ಯವನ್ನು ಬಿಎಂಸಿ ಅರ್ಧಕ್ಕೆ ಕೈಬಿಟ್ಟಿತು.
ದೀಪಿಕಾ ಪಡುಕೋಣೆಯನ್ನು ನೋಡಿ ಕಲಿ: ಕಂಗನಾ ಗೆ ರಮ್ಯಾ ಸಲಹೆ
Recommended Video
ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ
ಕಂಗನಾ ರಣೌತ್, ಮುಂಬೈ ಅನ್ನು 'ಪಾಕ್ ಆಕ್ರಮಿತ ಕಾಶ್ಮೀರ' ಎಂದಿದ್ದರು. ಇದಕ್ಕೆ ಅಧಿಕಾರದಲ್ಲಿರುವ ಶಿವಸೇನಾ ಪಕ್ಷದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಂಗನಾ ಸಹ ಶಿವಸೇನೆ ಹಿರಿಯ ಮುಖಂಡರೊಬ್ಬರಿಗೆ ಸವಾಲು ಎಸೆದಿದ್ದರು. ಈ ಘಟನಾವಳಿಗಳ ನಂತರ ಕಂಗನಾ ರ ಕಚೇರಿಯನ್ನು ಬಿಎಂಸಿ ಒಡೆಯಿತು.