Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೀಗೇನಾದರು ಆದರೆ ಕಂಗನಾ ಅಭಿನಯ ನಿಲ್ಲಿಸುತ್ತಾರೆ: ಸವಾಲ್ ಎಸೆದ ರಂಗೋಲಿ
ಬಾಲಿವುಡ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಮಣಿಯರಲ್ಲಿ ಕಂಗನಾ ರಣಾವತ್ ಕೂಡ ಒಬ್ಬರು. ಬಾಲಿವುಡ್ ನ ಬಹು ಬೇಡಿಕೆಯ ಕಿರಿಕ್ ನಟಿ ಕಂಗನಾ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕಂಗನಾ ಸಹೋದರಿ ಮತ್ತು ಮ್ಯಾನೇಜರ್ ಆಗಿರುವ ರಂಗೋಲಿ ಚಾಂಡೇಲ್ ಕಂಗನಾ ಅಭಿನಯ ನಿಲ್ಲಿಸುವ ಬಗ್ಗೆ ಮಾತನಾಡಿದ್ದಾರೆ.
Recommended Video
ಚಿತ್ರರಂಗದಲ್ಲಿ ಹೀಗೇನಾದರು ಆದರೆ ಕಂಗನಾ ಸಿನಿಮಾರಂಗ ಬಿಡುತ್ತಾರೆ ಎಂದು ಹೇಳಿದಿದ್ದಾರೆ. ಹೀಗೇನಾದರು ಅಂದರೆ, ಕಂಗನಾ ಹೊರತು ಪಡಿಸಿ, ಇಂದಿನ ಕಾಲದ ಹುಡುಗಿಯರು 60, 70, 100 ಕೋಟಿಗಿಂತ ಹೆಚ್ಚಿನ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇ ಆದರೆ ಕಂಗನಾ ಸಿನಿಮಾರಂಗ ಬಿಡುತ್ತಾರೆ ಎಂದು ರಂಗೋಲಿ ಸವಾಲ್ ಎಸೆದಿದ್ದಾರೆ.
ಕಂಗನಾ ರಣಾವತ್ ಮತ್ತು ಅಮೀರ್ ಖಾನ್ ಸ್ನೇಹ ಕೆಡಲು ಕಾರಣ ಬಿಚ್ಚಿಟ್ಟ ಸಹೋದರಿ
ರಂಗೋಲಿ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಂಗನಾ ಸಹೋದರಿ ಇದು ಚಿತ್ರರಂಗಕ್ಕೆ ನನ್ನ ಮುಕ್ತ ಸವಾಲ್. ಕಂಗನಾ ಹೊರತುಪಡಿಸಿ ಚಿತ್ರರಂಗದಲ್ಲಿ ಹುಡುಗಿಯರು ಸಿಂಗಲ್ ಆಗಿ 60, 70, 100 ಕೋಟಿಗಿಂತ ಹೆಚ್ಚಿನ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯಾನ?? ನೀವು ನನಗೆ ಅಸಲಿ ಹೆಸರನ್ನು ನೀಡಿದರೆ ಕಂಗನಾ ಶಾಶ್ವತವಾಗಿ ಅಭಿನಯಿಸುವುದನ್ನು ನಿಲ್ಲಿಸುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಜಯಲಲಿತಾ ಜನ್ಮ ವಾರ್ಷಿಕೋತ್ಸವ: ರಿಲೀಸ್ ಆಯ್ತು 'ತಲೈವಿ' ಹೊಸ ಲುಕ್
ಸವಾಲ್ ಎಸೆಯಲು ಕಾರಣವೇನು?
ರಂಗೋಲಿ ಹೀಗೆ ಟ್ವೀಟ್ ಮಾಡಲು ಕಾರಣ ನಿರ್ದೇಶಕ ಅಹಮ್ಮದ್ ಖಾನ್. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಹಮ್ಮದ್ ಮಣಿಕರ್ಣಿಕಾ ಸಿನಿಮಾ ಮಾಡಲು ೫ ಜನ ಮುಂದೆ ಬಂದಿದ್ದರು. ಆದರೆ ಸಿನಿಮಾದ ಕೆಟ್ಟ ಸ್ಥಿತಿ ನೋಡಿ ಹಾಗೆ ವಾಪಸ್ ಆದರು. ಅದೆ ಸಮಯದಲ್ಲಿ ಕಂಗನಾ ಅಭಿನಯದ ಮತ್ತೊಂದು ಸಿನಿಮಾ ಧಾಕಡ್ ಸಿನಿಮಾ ಅನೌನ್ಸ್ ಆಯಿತು. ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ ಮಣಿಕರ್ಣಿಕಾ ಸ್ಥಿತಿ ನೋಡಿ ಆ ಸಿನಿಮಾ ಕೂಡ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ.
ಗರಂ ಆದ ಸಹೋದರಿ ರಂಗೋಲಿ
ಇದನ್ನು ನೋಡಿ ಗರಂ ಆದ ರಂಗೋಲಿ ಅಹಮ್ಮದ್ ಖಾನ್ ವಿರುದ್ಧ ಸಿಡಿದೆದ್ದಿದ್ದಾರೆ. ಟ್ವಿಟ್ಟರ್ ನಲ್ಲಿ ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡಿರುವ ರಂಗೋಲಿ ಮಣಿಕರ್ಣಿಕಾ ಮತ್ತು ಭಾಗಿ-3 ಸಿನಿಮಾದ ಕಲೆಕ್ಷನ್ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಹಮ್ಮದ್ ಖಾನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್ ನ ವಿಫಲ ನಿರ್ದೇಶಕ ಎಂದು ಜರಿದಿದ್ದಾರೆ.
50 ವರ್ಷ ಪೂರೈಸಿದ ಮೇಕಪ್ ಕಲಾವಿದೆಗೆ ಕೃತಜ್ಞತೆ ತಿಳಿಸಿದ ಸ್ಟಾರ್ ನಟಿ
ಅಹಮ್ಮದ್ ಖಾನ್ ಗೆ ಲೀಗಲ್ ನೋಟೀಸ್
ಧಾಕಡ್ ಸಿನಿಮಾದ ಬಗ್ಗೆ ಮಾತನಾಡಿದ್ದಕ್ಕೆ ಧಾಕಡ್ ಸಿನಿಮಾದ ನಿರ್ದೇಶಕ, ಅಹಮ್ಮದ್ ಖಾನ್ ಗೆ ಲೀಗಲ್ ನೋಟೀಸ್ ನೀಡಿದ್ದಾರಂತೆ. ಅಲ್ಲದೆ ಧಾಕಡ್ ಸಿನಿಮಾ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಸಧ್ಯದಲ್ಲೇ ಸೆಟ್ಟೇರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.