Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಂಚನೆ ಪ್ರಕರಣ: ಕಪಿಲ್ ಶರ್ಮಾಗೆ ಮುಂಬೈ ಪೊಲೀಸರ ಸಮನ್ಸ್
ಖ್ಯಾತ ಕಮಿಡಿಯನ್, ನಟ ಕಪಿಲ್ ಶರ್ಮಾ ಗೆ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಕಮಿಡಿಯನ್ ಕಪಿಲ್ ಶರ್ಮಾ, ಕಾರ್ ಡಿಸೈನರ್ ಒಬ್ಬರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣ ಸಂಬಂಧ ಕಪಿಲ್ ಶರ್ಮಾ ಅವರನ್ನು ವಿಚಾರಣೆಗೆ ಕರೆದಿದ್ದಾರೆ ಪೊಲೀಸರು.
ಕಾರು ಡಿಸೈನ್ ಸಂಸ್ಥೆ ಡಿಸಿ ಡಿಸೈನ್ ಸ್ಟುಡಿಯೋ ಮಾಲೀಕ ದಿಲಿಪ್ ಛಬ್ರಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು ಕಪಿಲ್ ಶರ್ಮಾ. ದಿಲಿಪ್ ಅನ್ನು ಬಂಧಿಸಿದ್ದ ಪೊಲೀಸರು ಹಲವು ಕಾರುಗಳನ್ನು ವಶಪಡಿಸಿಕೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಪಿಲ್ ಶರ್ಮಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಕಪಿಲ್ ಶರ್ಮಾ, ದಿಲಿಪ್ ಗೆ ವ್ಯಾನಿಟಿ ವ್ಯಾನ್ ಒಂದನ್ನು ನಿರ್ಮಿಸಿಕೊಡುವಂತೆ ಹಣ ಪಾವತಿಸಿದ್ದರು. ಆದರೆ ದಿಲಿಪ್ ವ್ಯಾನಿಟಿ ವಾಹನ ಮಾಡಿಕೊಟ್ಟಿರಲಿಲ್ಲ. ಈ ಪ್ರಕರಣ ಸಂಬಂಧ ಕಪಿಲ್ ಮತ್ತು ದಿಲೀಪ್ ನಡುವೆ ವಾಗ್ವಾದ ಆಗಿದ್ದು, ನಂತರ ಕಪಿಲ್ ಶರ್ಮಾ, ದಿಲೀಪ್ ವಿರುದ್ಧ ದೂರು ದಾಖಲಿಸಿದ್ದರು.
ದಿಲೀಪ್ ಅನ್ನು ಬಂಧಿಸಿದ ಮುಂಬೈ ಪೊಲೀಸರು ಆತನಿಂದ ಕೆಲವು ಕಾರುಗಳನ್ನು ವಶಪಡಿಸಿಕೊಂಡಿದ್ದು, ಆತ ಕಾರುಗಳ ನೊಂದಾವಣಿಯಲ್ಲಿ ಸಹ ವಂಚನೆ ಎಸಗಿದ್ದಾನೆ ಎಂಬ ಅಂಶ ಹೊರಗೆಡವಿದ್ದಾರೆ.