ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಬ್ಬಿದ ಕೇಸರಿ ಸಂಚಲನ: ಸಿನಿಮಾ ಆಗ್ತಿದೆ ಆರ್ಎಸ್ಎಸ್ 100 ವರ್ಷಗಳ ಚರಿತ್ರೆ
ನಮ್ಮ ದೇಶದಲ್ಲಿ ಯಾವುದಾದರೂ ದೊಡ್ಡ ಮಟ್ಟದ ಸಂಚಲನ ಶುರುವಾಯಿತೆಂದರೆ, ಅದು ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದಂತೆ ಹಬ್ಬಿಬಿಡುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಮತ್ತು ಸಂಸ್ಕೃತಿಯ ವಿಚಾರ ಬಂದರೆ ಸಾಕು, ಯುವಜನತೆ ಫುಲ್ ಅಲರ್ಟ್ ಆಗಿಬಿಡುತ್ತಾರೆ. ಈಗ ಅಂತಹದ್ದೇ ಒಂದು ಘಟನೆ ಇಡೀ ಭಾರತದ ಗಮನ ಸೆಳೆಯುತ್ತಿದೆ.
ಇದು ಬರೀ ಸುದ್ದಿಯಲ್ಲ, ಇದೊಂದು ಎಮೋಷನ್. ಕಾಶ್ಮೀರದ ಹಿಮಭರಿತ ಬೆಟ್ಟಗಳಿಂದ ಹಿಡಿದು ಕನ್ಯಾಕುಮಾರಿಯ ಸಮುದ್ರ ತೀರದವರೆಗೆ ಈಗ ಒಂದೇ ಒಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳ ಪ್ರಚಾರದಷ್ಟೇ ಅದ್ಧೂರಿಯಾಗಿ ಈ ವಿಚಾರ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಅಂದ್ಹಾಗೆ, ಆರ್ಎಸ್ಎಸ್ 100 ವರ್ಷಗಳ ಇತಿಹಾಸವನ್ನು ದೇಶದ ಜನರಿಗೆ ತಿಳಿಸುವುದಕ್ಕೆ ಸಿನಿಮಾ ಆಗಿದೆ. ಅದುವೇ 'ಶತಕ್' ಈ ಸಿನಿಮಾ ಇದೇ ಫೆಬ್ರವರಿ 19ರಂದು ದೇಶಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾ ಆರ್ಎಸ್ಎಸ್ ಹುಟ್ಟಿನಿಂದ ಹಿಡಿದು, ಅದು ಬೆಳೆದು ಬಂದ ಹಾದಿಯನ್ನು ತಿಳಿಸಲಿದೆ. ಧ್ವಜ್ ಯಾತ್ರಾ ಸಮಯದಲ್ಲಿ ಸಿನಿಮಾ 'ಶತಕ್' ಪ್ರಚಾರವೂ ನಡೆಯುತ್ತಿದೆ.
ಏನಿದು ಕುತೂಹಲ? ಯಾಕಿಷ್ಟು ಬಿಲ್ಡಪ್?
ಸಾಮಾನ್ಯವಾಗಿ ನಾವು ಸಿನಿಮಾಗಳ ಶೂಟಿಂಗ್ ನೋಡಲು ಲಾಲ್ ಚೌಕ್ಗೆ ಹೋಗುವುದನ್ನು ಕೇಳಿದ್ದೇವೆ. ಅಲ್ಲಿನ ಸುಂದರ ತಾಣಗಳಲ್ಲಿ ಹೀರೋ-ಹೀರೋಯಿನ್ ಡ್ಯಾನ್ಸ್ ಮಾಡುವುದನ್ನು ನೋಡಿ ಸಂಭ್ರಮಿಸಿದ್ದೇವೆ. ಆದರೆ, ಈ ಬಾರಿ ಅಲ್ಲಿ ನಡೆದಿದ್ದೇ ಬೇರೆ. ಅಷ್ಟಕ್ಕೂ ಅಲ್ಲಿ ನಡೆದ ಆ ಘಟನೆ ಯಾವುದು? ಯಾಕೆ ಎಲ್ಲರೂ ಇದರ ಬಗ್ಗೆಯೇ ಮಾತಾಡುತ್ತಿದ್ದಾರೆ ಅಂತೀರಾ?

ಯಾವುದೇ ಒಂದು ದೊಡ್ಡ ಕ್ರಾಂತಿ ಶುರುವಾಗುವ ಮೊದಲು ಒಂದು ಸಣ್ಣ ಕಿಡಿ ಇರಲೇಬೇಕು. ಆ ಕಿಡಿ ಈಗ ಕಾಶ್ಮೀರದಲ್ಲಿ ಹೊತ್ತಿಕೊಂಡಿದೆ. ಇಲ್ಲಿ ಹದಿನೆಂಟು ವರ್ಷದ ಯುವಕನಿಂದ ಹಿಡಿದು ಎಪ್ಪತ್ತರ ಹಣ್ಣು ಹಣ್ಣು ಮುದುಕನವರೆಗೂ ಪ್ರತಿಯೊಬ್ಬರೂ ಈ ಹೊಸ ಪಯಣಕ್ಕೆ ಸಾಕ್ಷಿಯಾಗಲು ಕಾತುರದಿಂದ ಕಾಯುತ್ತಿದ್ದಾರೆ.
ಲಾಲ್ ಚೌಕ್ನಲ್ಲಿ ಹಾರಾಡಿದ ಆ ಐತಿಹಾಸಿಕ ಭಗವಾ ಧ್ವಜ
ಹೌದು, ಈಗ ಅಸಲಿ ವಿಷಯಕ್ಕೆ ಬರೋಣ. ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ 'ಶತಕ್ ಧ್ವಜ ಯಾತ್ರೆ' ಅಧಿಕೃತವಾಗಿ ಚಾಲನೆಗೊಂಡಿದೆ. ಕಾಶ್ಮೀರದ ಅತ್ಯಂತ ಸೂಕ್ಷ್ಮ ಮತ್ತು ಐತಿಹಾಸಿಕ ಪ್ರದೇಶವಾದ ಲಾಲಾ ಚೌಕ್ನಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ಈ ಮಹಾನ್ ಯಾತ್ರೆಗೆ ಅಡಿಪಾಯ ಹಾಕಲಾಗಿದೆ. ಇದು ಬರೀ ಧ್ವಜಾರೋಹಣವಲ್ಲ, ಇದು ಭಾರತದ ಏಕತೆಯ ಸಂಕೇತ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಾಗಲಿರುವ ಈ ಯಾತ್ರೆಯು ದೇಶದ ಮೂಲೆ ಮೂಲೆಯಲ್ಲೂ ಸಂಸ್ಕೃತಿಯ ಕಂಪನ್ನು ಹರಡಲಿದೆ. ಲಾಲ್ ಚೌಕ್ನಲ್ಲಿ ಕೇಸರಿ ಬಾವುಟ ಹಾರಾಡುತ್ತಿದ್ದಂತೆ ಅಲ್ಲಿದ್ದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ದೃಶ್ಯಗಳನ್ನು ನೋಡುತ್ತಿದ್ದರೆ ಯಾವುದೋ ಬಿಗ್ ಬಜೆಟ್ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ನೋಡಿದಂತೆಯೇ ಭಾಸವಾಗುತ್ತಿತ್ತು.
ಅಭಿಮಾನಿಗಳ ಹಬ್ಬ, ದೇಶಪ್ರೇಮಿಗಳ ಸಂಭ್ರಮ
ಒಂದು ಕಾಲದಲ್ಲಿ ಕಾಶ್ಮೀರ ಅಂದ ಕೂಡಲೇ ಭಯ ಭೀತಿಯ ವಾತಾವರಣ ನೆನಪಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅಲ್ಲಿ ಶಾಂತಿ ಮತ್ತು ಏಕತೆಯ ಮಂತ್ರ ಜಪಿಸಲಾಗುತ್ತಿದೆ. ಈ ಯಾತ್ರೆಯು ಕೇವಲ ಒಂದು ಗುಂಪಿಗೆ ಸೀಮಿತವಾಗಿಲ್ಲ. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಹೆಮ್ಮೆಯ ವಿಷಯವಾಗಿದೆ.
ಸಿನಿಮಾ ಸ್ಟಾರ್ಗಳ ಎಂಟ್ರಿಗೆ ಸಿಗುವಂತಹ ಅದ್ಧೂರಿ ಸ್ವಾಗತ ಈಗ ಈ ಯಾತ್ರೆಗೆ ಸಿಗುತ್ತಿದೆ. ದಾರಿಯುದ್ದಕ್ಕೂ ಜನರು ಹೂಮಳೆ ಸುರಿಸುತ್ತಾ, ಜೈಕಾರ ಹಾಕುತ್ತಾ ಈ ಪಯಣವನ್ನು ಸ್ವಾಗತಿಸುತ್ತಿದ್ದಾರೆ. ಇದು ಭಾರತೀಯ ಸಂಸ್ಕೃತಿಯ ಶಕ್ತಿಯನ್ನು ಜಗತ್ತಿಗೆ ತೋರಿಸುವ ಪ್ರಯತ್ನವಾಗಿದೆ.
ಕನ್ಯಾಕುಮಾರಿಯಲ್ಲಿ ಈ ಸಂಭ್ರಮ ಹೇಗೆ ಇರಲಿದೆ?
ಈಗಷ್ಟೇ ಕಾಶ್ಮೀರದಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಈ ಯಾತ್ರೆ ಮುಂದೆ ಕನ್ಯಾಕುಮಾರಿಯ ತೀರಕ್ಕೆ ತಲುಪಲಿದೆ. ಅಂದು ಅಲ್ಲಿ ನಡೆಯುವ ಸಂಭ್ರಮ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳುವುದೇ ಒಂದು ರೋಮಾಂಚನ. ಒಟ್ಟಿನಲ್ಲಿ, ಭಾರತದ ಉದ್ದಗಲಕ್ಕೂ ಈ ಕೇಸರಿ ಸಂಚಲನ ಹೊಸ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.


Click it and Unblock the Notifications











