Don't Miss!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಥಕ್ ನೃತ್ಯ ಪಾರಂಗತ ಬಿರ್ಜು ಮಹಾರಾಜ್ ನಿಧನ: ಬಾಲಿವುಡ್ಡಿಗರ ಸಂತಾಪ
'ವಿಶ್ವರೂಪಂ', 'ದಿಲ್ ತೋ ಪಾಗಲ್ ಹೇ', 'ದೇವ್ದಾಸ್' ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಸಿನಿಮಾಗಳ ಐಕಾನಿಕ್ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದ ಕಥಕ್ ನೃತ್ಯ ಸಾಮ್ರಾಟ ಪಂಡಿತ್ ಬಿರ್ಜು ಮಹಾರಾಜ್ ಭಾನುವಾರ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು ಈ ಖೇದಕರ ವಿಷಯವನ್ನು ಬಿರ್ಜು ಮಹಾರಾಜರ ಮೊಮ್ಮಗ ಸ್ವರಾಂಶ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಮಲ್ ಹಾಸನ್ ನಟಿಸಿದ್ದ 'ವಿಶ್ವರೂಂಪಂ' ಸಿನಿಮಾದ 'ಉನ್ನ ಕಾಣಾದೆ' ಹಾಡಿಗೆ ಮಾಡಿದ ಅದ್ಭುತ ನೃತ್ಯ ಸಂಯೋಜನೆಗೆ ಬಿರ್ಜು ಮಹಾರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ಅದು ಮಾತ್ರವೇ ಅಲ್ಲದೆ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ 1986ರಲ್ಲಿಯೇ ಅವರಿಗೆ ಸಂದಿದೆ.
'ದೇವ್ದಾಸ್' ಸಿನಿಮಾದ 'ಕಾಹೆ ಚೇಡೆ ಮೋಹೆ' ಹಾಡನ್ನು ಹಾಡಿರುವುದಲ್ಲದೆ ಹಾಡಿಗೆ ನೃತ್ಯ ಸಂಯೋಜನೆ ಸಹ ಮಾಡಿದ್ದಾರೆ. ಬಾಲಿವುಡ್ನ ಅತ್ಯುತ್ತಮ ಹಾಡುಗಳಲ್ಲಿ ಇದು ಸಹ ಒಂದು. ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರೊಟ್ಟಿಗೂ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ. 'ಡೇಡ್ ಇಷ್ಕಿಯಾ', 'ದಿಲ್ ತೋ ಪಾಗಲ್ ಹೇ', ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ.
ಬಿರ್ಜು ಮಹಾರಾಜ್ ನಿಧನಕ್ಕೆ ಬಾಲಿವುಡ್ನ ಹಲವು ಖ್ಯಾತ ನಾಮರು ಸಂತಾಪ ವ್ಯಕ್ತಪಡಿಸಿದ್ದಾರೆ.