Don't Miss!
- News Namma Metro Service Extend: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hyundai: ಹ್ಯುಂಡೈ ಎಕ್ಸ್ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಜೆಪಿ ಶಾಸಕನ ವಿರುದ್ಧ ಹರಿಹಾಯ್ದ ನಟಿ ಕೃತಿ ಸೆನನ್ ಮತ್ತು ಇತರ ನಟರು
ಬಾಲಿವುಡ್ ಖ್ಯಾತ ಮಂದಿ ಆಡಳಿತದಲ್ಲಿರುವವರನ್ನು ಟೀಕಿಸುವ ಗೋಜಿಗೆ ಹೋಗುವುದು ಬಹಳ ಕಡಿಮೆ. ಬಿಜೆಪಿ ಅಧಿಕಾರದಲ್ಲಿರುವ ಈ ಸಮಯದಲ್ಲಂತೂ ಬಹಳಷ್ಟು ನಟ-ನಟಿಯರು ರಾಜಕೀಯ ವಿಮರ್ಶೆಯಿಂದ ದೂರವೇ ಉಳಿದಿದ್ದಾರೆ.
ಆದರೆ ಕೆಲವು ನಟಿಯರು ಮಾತ್ರ ಇದಕ್ಕೆ ಭಿನ್ನವಾಗಿ, ಸರ್ಕಾರವಾಗಲಿ, ಶಾಸಕ, ಸಂಸದ, ಮಂತ್ರಿ ಯಾರೇ ಆಗಿರಲಿ ತಮ್ಮ ಅಭಿಪ್ರಾಯವನ್ನು ನಿರ್ಭೀಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಮುಖರು ಸ್ವರಾ ಭಾಸ್ಕರ್, ನಿರ್ದೇಶಕ ಅನುರಾಗ್ ಕಶ್ಯಪ್ ಇನ್ನೂ ಕೆಲವರು. ಇದೇ ಸಾಲಿಗೆ ಸೇರುವವರ ನಟಿ ಕೃತಿ ಸೆನನ್.
ಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರ
ದೇಶದಾದ್ಯಂತ ಸುದ್ದಿಯಾಗಿರುವ ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಬಿಜೆಪಿ ಶಾಸಕನೊಬ್ಬ ಆಡಿರುವ ಮತಿಹೀನ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ ನಟಿ ಕೃತಿಸೆನನ್.
'ಅತ್ಯಾಚಾರ ತಡೆಯಲು ಸರ್ಕಾರದಿಂದ ಆಗದು, ಸಂಸ್ಕಾರದಿಂದ ಆಗುತ್ತದೆ'
ಬಿಜೆಪಿ ಶಾಸಕ ಸುರೇಂದರ್ ಸಿಂಗ್, ಹತ್ರಾಸ್ ಅತ್ಯಾಚಾರದ ಕುರಿತಾಗಿ ಮಾಧ್ಯಮಗಳ ಬಳಿ ಮಾತನಾಡಿ, 'ಅತ್ಯಾಚಾರ ವು ಆಡಳಿತದಿಂದ ಅಥವಾ ಕತ್ತಿಯಿಂದ ನಿಲ್ಲಿಸಲು ಸಾಧ್ಯವಿಲ್ಲ, ಅತ್ಯಾಚಾರ ನಿಲ್ಲಿಸಲು ಸಂಸ್ಕಾರದಿಂದ ಮಾತ್ರದಿಂದ ಸಾಧ್ಯ' ಎಂದು ಹೇಳಿದ್ದಾರೆ ಸುರೇಂದರ್.
ಹೆಣ್ಣು ಮಕ್ಕಳಿಗೆ ಪೋಷಕರು ಸಂಸ್ಕಾರ ಕೊಡಬೇಕು: ಶಾಸಕ
ಮುಂದುವರೆದು, 'ತಂದೆ ತಾಯಿಗಳು ತಮ್ಮ ಯುವ ಹೆಣ್ಣುಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು, ಹೇಗೆ ನಡೆಯಬೇಕು, ಹೇಗೆ ಇರಬೇಕು, ಹೇಗೆ ವ್ಯವಹರಿಸಬೇಕು, ಅತ್ಯಾಚಾರಕ್ಕೆ ಒಳಗಾಗದಂತಹಾ ಸಂಸ್ಕಾರ ನೀಡಬೇಕು, ಅದರಿಂದ ಮಾತ್ರ ಅತ್ಯಾಚಾರಗಳು ನಿಲ್ಲುತ್ತವೆ' ಎಂದಿದ್ದಾರೆ.
ಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿ
ಗಂಡು ಮಕ್ಕಳಿಗೆ ಸಂಸ್ಕಾರ ಕೊಡಿ: ಕೃತಿ ಸೆನನ್
ಇದನ್ನು ತೀವ್ರವಾಗಿ ವಿರೋಧಿಸಿರುವ ಕೃತಿ ಸೆನನ್, 'ಈ ವ್ಯಕ್ತಿಗೆ ತಾನು ಏನು ಮಾತನಾಡುತ್ತಿದ್ದೇನೆಂಬ ಅರಿವಿದೆಯಾ, ತನ್ನದೇ ಮಾತನ್ನು ಪುನಃ ಈತ ಕೇಳಿಸಿಕೊಳ್ಳಬಲ್ಲನೇ? ಈ ರೀತಿಯ ಯೋಚನೆಗಳೇ ಬದಲಾಗಬೇಕಿರುವುದು, ಗಂಡು ಮಕ್ಕಳಿಗೆ ಯಾಕೆ ಇಂಥಹವರು ಸಂಸ್ಕಾರ ಕೊಡುವುದಿಲ್ಲ?' ಎಂದು ಪ್ರಶ್ನೆ ಮಾಡಿದ್ದಾರೆ.
Recommended Video
ಹಲವು ಬಾಲಿವುಡ್ ನಟ-ನಟಿಯರಿಂದ ವಿರೋಧ
ಶಾಸಕ ಸುರೇಂದರ್ ಹೇಳಿಕೆಗೆ ಇನ್ನೂ ಕೆಲವು ಬಾಲಿವುಡ್ ನಟ-ನಟಿಯರು ವಿರೋಧ ವ್ಯಕ್ತಪಡಿಸಿದ್ದು, 'ಅತ್ಯಾಚಾರ ಮಾಡಬಾರದು ಎಂಬ ಸಂಸ್ಕಾರವನ್ನು ಗಂಡು ಮಕ್ಕಳಿಗೆ ಕೊಡಿ' ಎಂದು ಹೇಳಿದ್ದಾರೆ. ಮತ್ತೊಬ್ಬ ನಟ, 'ಇಂಥಹಾ ಬುದ್ಧಿಹೀನರನ್ನು ಏಕೆ ಶಾಸಕನಾಗಿ ಆಯ್ಕೆ ಮಾಡುತ್ತಾರೆ' ಎಂದು ಪ್ರಶ್ನಿಸಿದ್ದಾರೆ.