Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲತಾ ಮಂಗೇಶ್ಕರ್,ರಫಿ ಮಗನ ನಡುವೆ ನಡೆದ ಜಟಾಪಟಿ
ರಾಷ್ಟ್ರೀಯ ದಿನ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಾನು ಮೊಹಮ್ಮದ ರಫಿ ಜೊತೆ ಹಾಡುವುದನ್ನು ನಿಲ್ಲಿಸಿದ್ದೆ. ರಫಿ ಅವರಿಂದ ಕ್ಷಮಾಪಣಾ ಪತ್ರ ಬಂದ ನಂತರವಷ್ಟೇ ಅವರ ಜೊತೆ ಹಾಡಲು ಒಪ್ಪಿಕೊಂಡಿದ್ದೆ ಎಂದು ಲತಾ ಮಂಗೇಶ್ಕರ್ ಹೇಳಿಕೆ ನೀಡಿದ್ದರು.
ಗೌರವ ಧನದ ವಿಚಾರಕ್ಕಾಗಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ನನ್ನ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಜೊತೆ ಇನ್ನು ಮುಂದೆ ಹಾಡುವುದಿಲ್ಲ ಎಂದು ರಫಿ ಹೇಳಿಕೆ ನೀಡಿದ್ದರು. ಸಿಟ್ಟಿನಿಂದ ನಾನೂ ಇನ್ನೆಂದೂ ರಫಿ ಜೊತೆ ಹಾಡುವುದಿಲ್ಲ ಎಂದು ಹೇಳಿದ್ದೆ.
ಆ ನಂತರ ಅವರು ನನಗೆ ಕ್ಷಮಾಪಣಾ ಪತ್ರ ಕಳುಹಿಸಿಕೊಟ್ಟರು ಎಂದು ಲತಾ ಪತ್ರಿಕೆಯೊಂದಕ್ಕೆ ಹೇಳಿದ್ದರು.
ಇದರಿಂದ ಸಿಟ್ಟಾದ ಮೊಹಮ್ಮದ್ ರಫಿ ಪುತ್ರ ಶಹೀದ್ ರಫಿ, ನನ್ನ ತಂದೆ ಈ ದೇಶದ ಆಸ್ತಿ. ನನ್ನ ತಂದೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳಿಲ್ಲ. ಲತಾಜಿ ಬಳಿ ಆ ಪತ್ರ ಇದ್ದರೆ ತೋರಿಸಲಿ, ಇಲ್ಲದಿದ್ದರೆ ಇನ್ನು ಹತ್ತು ದಿನದೊಳಗೆ ಅವರು ಕ್ಷಮೆ ಕೇಳಬೇಕು.
ಇದು ನಡೆಯದಿದ್ದರೆ ನಾನು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇಶದ ಯಾವುದೇ ಗಾಯಕರಿಗೆ ಇರದಷ್ಟು ಅಭಿಮಾನಿಗಳು ನನ್ನ ತಂದೆಗೆ ಇದ್ದಾರೆ. ಲತಾ ಮಂಗೇಶ್ಕರ್ ಅವರಿಗೆ ಇದರ ಭಯ ಕಾಡಿರಬಹುದು. ನನ್ನ ತಂದೆಯ ಜೀವಿತಾವಧಿಯಲ್ಲಿ ಅವರಿಗೆ ಬೇರೊಬ್ಬರ ಪೈಪೋಟಿ ಅನ್ನೋದೇ ಇರಲಿಲ್ಲ.
ಬಾಲಿವುಡ್ ಜಗತ್ತಿನಲ್ಲಿ ಏಕಸ್ವಾಮ್ಯತೆ ಅವರು ಸಾಧಿಸಿದ್ದರು. ಲತಾ ಅವರ ಹೇಳಿಕೆ ಮನಸಿಗೆ ನೋವು ತಂದಿದೆ ಎಂದು ಶಹೀದ್ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.
ಶಮ್ಮಿ ಕಪೂರ್, ಧರ್ಮೇಂದ್ರ ಮುಂತಾದ ಹೆಸರಾಂತ ನಟರು ಅವರ ಚಿತ್ರದ ಹಾಡನ್ನು ನನ್ನ ತಂದೆಯಿಂದಲೇ ಹಾಡಿಸಬೇಕೆಂದು ಡಿಮಾಂಡ್ ಮಾಡುತ್ತಿದ್ದರು.
ಆದರೆ ಆ ಸಮಯದಲ್ಲಿ ಮಹಿಳಾ ಗಾಯಕಿಯ ವಿಚಾರಕ್ಕೆ ಬಂದಾಗ ಲತಾಗೆ ಪೈಪೋಟಿ ನೀಡಲು ಸುಮನ್ ಕಲ್ಯಾಣಪುರ್, ಹೇಮಲತಾ, ಮುಬಾರಕ್ ಬೇಗಂ ಮುಂತಾದವರಿದ್ದರು ಎನ್ನುವುದು ಲತಾ ಅವರಿಗೆ ತಿಳಿದಿರಲಿ ಎಂದು ಶಹೀದ್ ಗರಂ ಆಗಿದ್ದಾರೆ.
ಕೃಪೆ: ಫಸ್ಟ್ ಪೋಸ್ಟ್