Don't Miss!
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖ್ಯಾತ ಚಿತ್ರ ಸಾಹಿತಿ, ಕವಿ ರಾಹತ್ ಇಂದೋರಿ ನಿಧನ
ಬಾಲಿವುಡ್ ಚಿತ್ರರಂಗದ ಖ್ಯಾತ ಗೀತರಚನೆಕಾರ ಹಾಗೂ ಉರ್ದು ಕವಿ ರಾಹತ್ ಇಂದೋರಿ (70) ಮಂಗಳವಾರ ಸಂಜೆ 5 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಇಂದೋರ್ನ ಅರಬಿಂದೋ ಆಸ್ಪತ್ರೆಗೆ ರಾಹತ್ ಅವರು ದಾಖಲಾಗಿದ್ದಾರೆ. ಈ ಕುರಿತು ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದ ರಾಹತ್ 'ಕೊವಿಡ್ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ಪರೀಕ್ಷೆಗೆ ಒಳಪಟ್ಟಿದ್ದೆ. ಪಾಸಿಟಿವ್ ಬಂದಿತ್ತು. ಹಾಗಾಗಿ, ಅರಬಿಂದೋ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ರೋಗದಿಂದ ನಾನು ಗೆದ್ದು ಬರಲು ಪ್ರಾರ್ಥಿಸಿ'' ಎಂದು ಮನವಿ ಮಾಡಿದ್ದರು.
ಆಧುನಿಕ ರಂಗಭೂಮಿ ಹರಿಕಾರ ಇಬ್ರಾಹಿಂ ಅಲ್ಕಜಿ ನಿಧನ: ಮೋದಿ ಸಂತಾಪ
ದುರಾದೃಷ್ಟವಶಾತ್ ಮಂಗಳವಾರ ಸಂಜೆ ರಾಹತ್ ಇಂದೋರಿ ಅವರಿಗೆ ಹೃದಯಾಘಾತವಾಗಿದೆ. ಸತತವಾಗಿ ಮೂರು ಸಲ ಹೃದಯಾಘಾತ ಸಂಭವಿಸಿತು. ನಿರಂತರ ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಮುನ್ನಾಭಾಯ್ ಎಂಬಿಬಿಎಸ್, ಘಾತಕ್, ಇಷ್ಕ್, ಖದ್ದರ್, ಮೀನಾಕ್ಷಿ ಎಂಬ ಹಿಟ್ ಚಿತ್ರಗಳು ಸೇರಿದಂತೆ ಅನೇಕ ಹಿಂದಿ ಚಿತ್ರಗಳಿಗೆ ಗೀತೆ ರಚನೆ ಮಾಡಿದ್ದಾರೆ. ಸುಮಾರು 50 ವರ್ಷಗಳ ಕಾಲ ಕಾವ್ಯ ಜೀವನದಲ್ಲಿ ತೊಡಗಿಕೊಂಡಿದ್ದರು ಎನ್ನುವುದು ವಿಶೇಷ.
ಎಆರ್ ರೆಹಮಾನ್, ಅನು ಮಲ್ಲಿಕ್, ಅರಿಜಿತ್ ಸಿಂಗ್, ಅಲ್ಕಾ ಯಾಗ್ನಿಕ್ ಸೇರಿದಂತೆ ಹಲವು ಖ್ಯಾತನಾಮ ಸಂಗೀತ ನಿರ್ದೇಶಕರ ಜೊತೆ ರಾಹತ್ ಇಂದೋರಿ ಕಾರ್ಯನಿರ್ವಹಿಸಿದ್ದರು.