Don't Miss!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರ್ಮಿಕರಿಗೆ ಸಹಾಯ ಮಾಡಿದ ಸೋನು ಸೂದ್ ಅನ್ನು ವ್ಯಂಗ್ಯ ಮಾಡಿದ ಸಂಸದ
ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ಸಹಾಯ ಮಾಡಿದ ಸೋನು ಸೂದ್ ಅನ್ನು ದೇಶವೇ ಕೊಂಡಾಡುತ್ತಿದೆ. ಆದರೆ ಅವರನ್ನೂ ತೆಗಳುವ ಜನರಿದ್ದಾರೆ.
Recommended Video
ಹೌದು, ನಟ ಸೋನು ಸೂದ್, ಈ ಕೊರೊನಾ ಸಂಕಷ್ಟದ ಸಮಯದಲ್ಲಿ ರಸ್ತೆಗಿಳಿದು ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದಾರೆ. ಅಧಿಕಾರ ಹೊಂದಿರುವ ಸಚಿವರುಗಳು ಮಾಡಬಹುದಾದ ಕಾರ್ಯಕ್ಕಿಂತಲೂ ಹೆಚ್ಚಿಗೆ ಕಾರ್ಯವನ್ನು ಖಾಸಗಿ ವ್ಯಕ್ತಿಯಾಗಿ ಅವರು ಮಾಡುತ್ತಿದ್ದಾರೆ. ತಮ್ಮ ದೊಡ್ಡ ಹೋಟೆಲ್ ಅನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆಂದು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ ಸೋನು ಸೂದ್.
ಸೋನು ಸೂದ್ ಸೇವೆ ಮೆಚ್ಚಿ ರಾಜಭವನಕ್ಕೆ ಆಹ್ವಾನಿಸಿದ ಮಹಾರಾಷ್ಟ್ರ ರಾಜ್ಯಪಾಲ
ಸುಮಾರು 22,000 ಜನರನ್ನು ಸೋನು ಸೂದ್ ಒಬ್ಬರೇ ಅವರ ಸ್ವಗೃಹಗಳಿಗೆ ತೆರಳಲು ನೇರ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಹರತುಪಡಿಸಿ, ಕಾರ್ಮಿಕರಿಗೆ ಊಟ, ವಸತಿ ಸೌಕರ್ಯ, ಹಣಕಾಸಿನ ಸಹಾಯ ಹೀಗೆ ಹಲವು ಬಗೆಯ ಸಹಾಯ ಮಾಡಿದ್ದಾರೆ ಸೋನು ಸೂದ್.
ಸೋನು ಸೂದ್ ಅನ್ನು ಟೀಕಿಸಿರುವ ರಾಜಕಾರಣಿ
ಆದರೆ ಇಂಥಹಾ ಕರ್ಮಯೋಗಿಯನ್ನು ಟೀಕಿಸುವ ಕಾರ್ಯವನ್ನು ರಾಜಕಾರಣಿಯೊಬ್ಬರು ಮಾಡಿದ್ದಾರೆ. ಅದೂ ಅಧಿಕಾರದಲ್ಲಿರುವ ಸರ್ಕಾರದ ಭಾಗವಾಗಿರುವ ರಾಜಕಾರಣಿ, ಸಂಸದ ಜನತೆಗೆ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಅನ್ನು ವ್ಯಂಗ್ಯ ಮಾಡಿದ್ದಾರೆ.
ಮಹಾರಾಷ್ಟ್ರ ಸಂಸದ ಸಂಜಯ್ ರಾವತ್
ಶಿವಸೇನಾ ಪತ್ರಿಕೆಯ ಮುಖವಾಣಿ 'ಸಾಮ್ನಾ' ನಲ್ಲಿ ಲೇಖನ ಬರೆದಿರುವ ಮಹಾರಾಷ್ಟ್ರ ಸಂಸದ, ಮಹಾರಾಷ್ಟ್ರ ಸಿಎಂ ಆಪ್ತ ಸಂಜಯ್ ರಾವತ್, ಮಹಾರಾಷ್ಟ್ರ ರಾಜ್ಯಪಾಲರು ಸೋನೂ ಸೂದ್ ಅನ್ನು ಮಹಾತ್ಮಾ ಎಂದು ಕರೆದಿರುವುದನ್ನು ವ್ಯಂಗ್ಯ ಮಾಡಿದ್ದಾರೆ.
ಸಲ್ಮಾನ್ ಖಾನ್ ಅನ್ನು ಮೀರಿಸಿದ ನಿಜಜೀವನ ನಾಯಕ ಸೋನು ಸೂದ್
'ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ'
'ಸೋನು ಸೂದ್ ಶೀಘ್ರದಲ್ಲಿಯೇ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್ ಆಗಲಿದ್ದಾರೆ (ಮೋದಿ ಅವರಿಗೆ ಸೆಲೆಬ್ರಿಟಿ ಮ್ಯಾನೇಜರ್) ಆಗಲಿದ್ದಾರೆ ಎಂದು ತಮ್ಮ ಲೇಖನದಲ್ಲಿ ವ್ಯಂಗ್ಯ ಮಾಡಿದ್ದಾರೆ ರಾವತ್.
ಮಹಾತ್ಮಾ ಎಂದು ಕರೆದಿದ್ದ ರಾಜ್ಯಪಾಲ
ಸೋನು ಸೋದ್ ಅನ್ನು ಭೇಟಿ ಮಾಡಿದ್ದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಸೋನು ಸೂದ್ ಅನ್ನು 'ಮಹಾತ್ಮಾ' ಎಂದು ಕರೆದಿದ್ದರು. ಇದನ್ನೂ ವಿಮರ್ಶಿಸಿದ್ದ ರಾವತ್, 'ಸಾಮಾಜಿಕ ಜಾಲತಾಣದಿಂದಾಗಿ ಮಹಾತ್ಮಾ ಎನಿಸಿಕೊಳ್ಳುವುದು ಎಷ್ಟೋಂದು ಸುಲಭವಾಗಿಬಿಟ್ಟಿದೆ' ಎಂದಿದ್ದರು.
ಚಂಡಮಾರುತದ ಹೊಡೆತಕ್ಕೆ ಸಿಲುಕಿದ 28 ಸಾವಿರ ನಿರಾಶ್ರಿತರಿಗೆ ನೆರವಾದ ನಟ ಸೋನು ಸೂದ್
ಸೋನು ಸೂದ್ ಅನ್ನು ಬಳಸಿಕೊಳ್ಳಲಾಗುತ್ತಿದೆ:ರಾವತ್
ಬಿಜೆಪಿಯು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸೋನು ಸೂದ್ ಅನ್ನು ಧಾಳವಾಗಿ ಬಳಸಿಕೊಳ್ಳುವ ಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಟೀಕೆಗೆ ಸೋನು ಸೂದ್ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಅರ್ಥ ರಾವತ್ ಅವರ ಇಡೀಯ ಲೇಖನದಿಂದ ಹೊಮ್ಮುತ್ತಿದೆ.
ಮುಂಬೈನಲ್ಲಿ ಸಿಲುಕಿದ ಕನ್ನಡಿಗರನ್ನು ಮನೆ ಸೇರಿಸಿದ ನಟ ಸೋನು ಸೂದ್: ಅಭಿಮಾನಿಗಳ ಮೆಚ್ಚುಗೆ