Don't Miss!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- News Agniveer: 'ಅಗ್ನಿವೀರ್' ಯೋಜನೆಗೆ ಬದಲಾವಣೆ ತರಲು ಕೇಂದ್ರ ಮುಕ್ತ: ರಕ್ಷಣಾ ಸಚಿವ
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಮಹೇಶ್ ಭಟ್ ವಿಚಾರಣೆ
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.
Recommended Video
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಜುಲೈ 27 ರ ಮಧ್ಯಾಹ್ನ 12 ಗಂಟೆ ಒಳಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಮಹೇಶ್ ಭಟ್ಗೆ ಸಮನ್ಸ್ ನೀಡಿದ್ದರು.
ನಿರ್ದೇಶಕ ಅನುರಾಗ್ ಕಶ್ಯಪ್ 'ಮಿನಿ ಮಹೇಶ್ ಭಟ್' ಎಂದು ಟೀಕಿಸಿದ ಕಂಗನಾ ರಣಾವತ್
ಅದರಂತೆಯೇ ಇಂದು ಪೊಲೀಸ್ ಠಾಣೆಗೆ ಹಾಜರಾದ ಮಹೇಶ್ ಭಟ್, ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ಪೊಲೀಸ್ ಠಾಣೆಗೆ ಬರುವುದಕ್ಕೆ ಮುನ್ನಾ ಟ್ವೀಟ್ ಮಾಡಿರುವ ಮಹೇಶ್ ಭಟ್, 'ಕಣ್ಣು ರೆಪ್ಪೆ ಹೊಡೆಯುವಷ್ಟು ಸಮಯವಷ್ಟೆ ನಾವೆಲ್ಲಾ ಇಲ್ಲಿರುತ್ತೇವೆ. ನಮ್ಮ ಅಹಂಕಾರವೆಲ್ಲಾ ಸಾವಿನ ಎದುರು ಮಣ್ಣುಪಾಲಾಗುತ್ತದೆ. ಈ ಕೆಟ್ಟ ಘಳಿಗೆಯೂ ಮುಗಿದುಹೋಗುತ್ತದೆ' ಎಂದಿದ್ದಾರೆ.
40 ಕ್ಕೂ ಹೆಚ್ಚು ಮಂದಿಯ ವಿಚಾರಣೆ
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಈ ವರೆಗೆ ಸುಮಾರು 40 ಮಂದಿಯ ಹೇಳಿಕೆ ಪಡೆಯಲಾಗಿದೆ. ಸಂಜಯ್ ಲೀಲಾ ಬನ್ಸಾಲಿ, ಸುಶಾಂತ್ ಗೆಳತಿ ರೆಹಾ ಚಕ್ರೊವರ್ತಿ, ಅಂಕಿತಾ ಲೋಕಂಡೆ, ಸುಶಾಂತ್ ಗೆಳೆಯ ಸಂದೀಪ್ ಸಿಂಗ್, ನಿರ್ಮಾಪಕ ಆದಿತ್ಯ ಚೋಪ್ರಾ, ನಟಿ ಸಂಜನಾ ಸಂಘಿ, ನಿರ್ದೇಶಕ ಚಬ್ರಾ ಇನ್ನೂ ಹಲವರನ್ನು ಈ ವರೆಗೆ ವಿಚಾರಣೆ ಮಾಡಲಾಗಿದೆ.
ಸ್ವಜನಪಕ್ಷಪಾತದಿಂದ ಸುಶಾಂತ್ ಸಾವು
ಬಾಲಿವುಡ್ನಲ್ಲಿನ ಸ್ವಜನಪಕ್ಷಪಾತವೇ ಸುಶಾಂತ್ ಸಾವಿಗೆ ಕಾರಣ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆದಿದ್ದು, ಮಹೇಶ್ ಭಟ್, ಕರಣ್ ಜೋಹರ್ ಇನ್ನೂ ಕೆಲವು ದೊಡ್ಡ ತಲೆಗಳು ಸ್ವಜನಪಕ್ಷಪಾತ ನಡೆಸುತ್ತಿದ್ದಾರೆಂದು ಆರೋಪಿಸಲಾಗಿತ್ತು.
ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?
ಮಹೇಶ್ ಭಟ್ ನನ್ನ ಮೇಲೆ ಚಪ್ಪಲಿ ಎಸೆದಿದ್ದರು: ಕಂಗನಾ
ಸುಶಾಂತ್ ಸಿಂಗ್ ಗೆ ಮಹೇಶ್ ಭಟ್ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿರಲಿಲ್ಲ. ಅವರನ್ನು ಅವಮಾನಿಸಿದ್ದರು ಎಂದು ಆರೋಪಿಸಲಾಗಿದೆ. ಕಂಗನಾ ರಣೌತ್ ಅಂತೂ ಮಹೇಶ್ ಭಟ್ ನನ್ನ ಮೇಲೆ ಚಪ್ಪಲಿ ಎಸೆದಿದ್ದರು ಎಂದು ಸಹ ಆರೋಪಿಸಿದ್ದಾರೆ.
ಮಾನಸಿಕವಾಗಿ ಜರ್ಜರಿತವಾಗಿದ್ದಾರೆ ಕರಣ್
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಗೆ ಸಹ ಪೊಲೀಸರು ಸಮನ್ಸ್ ಕಳಿಸಿದ್ದು, ಕರಣ್ ಅವರ ಮ್ಯಾನೇಜರ್ ಸಮನ್ಸ್ ಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಕರಣ್ ಒತ್ತಡದಲ್ಲಿದ್ದು, ಅವರು ಮಾನಸಿಕವಾಗಿ ಜರ್ಜಿರಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದಿತ್ಯ ಠಾಕ್ರೆಗೆ ಕರಣ್ ಜೋಹರ್ ಬೆಸ್ಟ್ ಫ್ರೆಂಡ್: ಕಂಗನಾ ತೆರೆದಿಟ್ಟ ಹೊಸ ಸಂಗತಿ