Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫುಟ್ ಬಾಲ್ ಕೋಚ್ ಆದ ಅಜಯ್ ದೇವಗನ್ : ಬಾಲಿವುಡ್ ಪ್ರವೇಶಿಸಿದ ಮಹಾನಟಿ
'ಸೂಪರ್ 30' ಹಾಗೂ 'ಮಿಷನ್ ಮಂಗಲ್' ಚಿತ್ರಗಳ ಬಳಿಕ ಬಾಲಿವುಡ್ ನಲ್ಲಿ ಇದೀಗ ಮತ್ತೊಂದು ರಿಯಲ್ ಸ್ಟೋರಿ ಸಿನಿಮಾ ಶುರುವಾಗಿದೆ. 1952 - 1962 ರವರೆಗಿನ ಭಾರತದ ಫುಟ್ ಬಾಲ್ ಆಟದ ಬಂಗಾರದ ಕಥೆಯನ್ನು ಸಿನಿಮಾ ಹೇಳುತ್ತಿದೆ.
ಅಜಯ್ ದೇವಗನ್ ಈ ಸಿನಿಮಾದ ನಾಯಕನಾಗಿದ್ದಾರೆ. ಅಂದಿನ ಫುಟ್ ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಅಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ 'ಮೈದಾನ್' ಎನ್ನುವ ಹೆಸರು ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಜನಿವಾರ ಧರಿಸುವ ಮನೆಯಲ್ಲಿ ಶಿಲುಬೆ ಯಾಕೆ? ಗರಂ ಆದ ನೆಟ್ಟಿಗರಿಗೆ ಮಾಧವನ್ ಖಡಕ್ ಉತ್ತರ
ವಿಶೇಷ ಅಂದರೆ, ಸೌತ್ ನಟಿ ಕೀರ್ತಿ ಸುರೇಶ್ ಸಿನಿಮಾದ ನಾಯಕಿಯಾಗಿದ್ದಾರೆ. ಇತ್ತೀಚಿಗಷ್ಟೆ ರಾಷ್ಟ್ರ ಪ್ರಶಸ್ತಿ ಪಡೆದ ಈ ಮಹಾನಟಿ ಈಗ ಬಾಲಿವುಡ್ ಪ್ರವೇಶಿಸಿದ್ದಾರೆ. ಈಗಾಗಲೇ ತೆಲುಗಿನ ಅನೇಕ ನಟಿಯರು ಹಿಂದಿ ಸಿನಿಮಾ ಮಾಡುವ ಅವಕಾಶ ಪಡೆದಿದ್ದು, ಈಗ ಕೀರ್ತಿ ಸುರೇಶ್ ಗೆ ಕಾಲ ಕೂಡಿ ಬಂದಿದೆ.
1951 ಮತ್ತು 1962 ರ ವೇಳೆ ಏಷಿಯನ್ ಗೇಮ್ಸ್ ನಲ್ಲಿ ಭಾರತ ಫುಟ್ ಬಾಲ್ ತಂಡ ವಿಜಯ ಸಾಧಿಸಿತ್ತು. ಇದಕ್ಕೆ ಪ್ರಮುಖ ಕಾರಣ ಆಗಿದ್ದವರು ಕೋಚ್ ಸೈಯದ್ ಅಬ್ದುಲ್ ರಹೀಮ್. ಇದೇ ಕಥೆಯನ್ನು ಸಿನಿಮಾ ಹೊಂದಿದೆ.
Mood of the Nation poll: ಮೊದಲ ಸ್ಥಾನ ಉಳಿಸಿಕೊಂಡ ಸಲ್ಮಾನ್ ಖಾನ್
ಅಮಿತ್ ಶರ್ಮ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಬೋನಿ ಕಪೂರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. 2020ರಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. 2018 ರಲ್ಲಿ ಶುರುವಾಗಿದ್ದ ಸಿನಿಮಾಗೆ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ.