Don't Miss!
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಭಾಸ್ ಹೆಸರು ಬಳಸಿ ಭಾರಿ ಮೋಸ: ವ್ಯಕ್ತಿ ಬಂಧನ
ನಟ ಪ್ರಭಾಸ್ ಹೆಸರು ಬಳಸಿಕೊಂಡು ಮೋಸ ಮಾಡುತ್ತಿರುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಇದೀಗ ಪ್ರಭಾಸ್ ಹೆಸರು ಬಳಸಿ ಮೋಸ ಮಾಡಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ನಲ್ಲಿ ಬಂಧಿಸಲಾಗಿದೆ.
ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡಿದ್ದ ವ್ಯಕ್ತಿ ಆನಂದ್ ಸಕ್ಪಾಲ್ ಅಲಿಯಾಸ್ ಪ್ರಿತೇಶ್ ಜೈನ್ ಅನ್ನು ಪೊಲೀಸರು ಮುಂಬೈ ನಲ್ಲಿ ಬಂಧಿಸಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್' ರಿಲೀಸ್ ದಿನಾಂಕ ಘೋಷಣೆ
'ರಾಧೆ-ಶ್ಯಾಮ್' ಸಿನಿಮಾದ ವಿವಿಧ ಪಾತ್ರಗಳಿಗಾಗಿ ಆಡಿಷನ್ ನಡೆಸುತ್ತೇನೆಂದು ಹೇಳಿ ಯುವಕ-ಯುವತಿಯರನ್ನು ಕರೆದು ಆಡಿಷನ್ ಮಾಡಿ. ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆಂದು ಹೇಳಿ ಆನಂದ್ ಸಕ್ಪಾಲ್ ಹಣ ಪೀಕಿಸಿದ್ದ. ಈ ಬಗ್ಗೆ ಒಂದು ತಿಂಗಳ ಹಿಂದೆ ದೂರು ದಾಖಲಾಗಿತ್ತು.
24 ವರ್ಷ ವಯಸ್ಸಿನ ಆನಂದ್ ಸಕ್ಪಾಲ್ ತಾನು ಟಿ-ಸೀರೀಸ್ ಸಂಸ್ಥೆಯ ಕಾಸ್ಟಿಂಗ್ ಮ್ಯಾನೇಜರ್ ಎಂದು ಹೇಳಿ ಹಲವರ ಆಡಿಷನ್ ಮಾಡಿಸಿದ್ದ. ಟಿ-ಸೀರೀಸ್ನ ನಕಲಿ ಐಡಿ ಕಾರ್ಡ್ ಅನ್ನು ಸಹ ಆತ ಬಳಸಿದ್ದ.
'ನಿಮಗೆ ರಾಧೆ-ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ಸಹೋದರನ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದೇವೆ' ಎಂದು ಟಿ-ಸೀರೀಸ್ ನ ನಕಲಿ ಲೆಟರ್ ಹೆಡ್ ಬಳಸಿ ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡಿದ್ದ. ಇದೇ ವ್ಯಕ್ತಿ ವಂಚನೆ ಪ್ರಕರಣದಲ್ಲಿ ಈ ಹಿಂದೆ ಸಹ ಬಂಧನಕ್ಕೆ ಒಳಗಾಗಿದ್ದ.
'ರಾಧೆ-ಶ್ಯಾಮ್' ಸಿನಿಮಾದ ಆಡಿಷನ್ ಕಾಲ್ ಬಗ್ಗೆ ನಕಲಿ ಜಾಹೀರಾತು ತಯಾರಿಸಿ ಇನ್ಸ್ಟಾಗ್ರಾಂ ನಲ್ಲಿ ಹಾಕುತ್ತಿದ್ದ ಈತ, ಜಾಹೀರಾತು ನೋಡಿ ತನ್ನನ್ನು ಸಂಪರ್ಕಿಸಿದ ಆಸಕ್ತರಿಗೆ ಕ್ಯುಆರ್ ಕೋಡ್ ಕಳಿಸಿ ಆಡಿಷನ್ಗಾಗಿ ಶುಲ್ಕದ ಹೆಸರಿನಲ್ಲಿ ಹಣ ಹಾಕಿಸಿಕೊಳ್ಳುತ್ತಿದ್ದ ಆ ನಂತರ ಅವರನ್ನು ಬ್ಲಾಕ್ ಮಾಡುತ್ತಿದ್ದ.
Recommended Video
ಒಂದು ತಿಂಗಳ ಹಿಂದೆ ಈ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರ ಬಳಿ ದೂರು ದಾಖಲಾಗಿತ್ತು. ಅಂದಿನಿಂದಲೂ ತಲೆಮರೆಸಿಕೊಂಡಿದ್ದ ಈತನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.