Don't Miss!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಯಾನ್ಸರ್ ನಿಂದ ಗೆದ್ದು ಬರಲು ಮನೀಶಾ ಕೊಯಿರಾಲಾಗೆ ಸ್ಫೂರ್ತಿಯಾಗಿದ್ದು ಈತ
Recommended Video
ಬಾಲಿವುಡ್ ನಟಿ ಮನೀಶಾ ಕೊಯಿರಾಲಾ ಕ್ಯಾನ್ಸರ್ ಗೆ ಸವಾಲು ಹಾಕಿ ಗೆದ್ದು ಬಂದಿದ್ದಾರೆ. ಹಿಂದಿನಂತೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಿನ ಒಂದು ಸಂದರ್ಶನದಲ್ಲಿ ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟದ ಸಂದರ್ಭವನ್ನು ವಿವರಿಸಿದ್ದಾರೆ.
ಈ ವೇಳೆ ಮಾತನಾಡಿರುವ ಮನೀಶಾ ಕೊಯಿರಾಲಾ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ನನ್ನ ಸ್ಫೂರ್ತಿ ಎಂದು ಹೇಳಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿದ ಯುವರಾಜ್ ನನಗೆ ಸ್ಫೂರ್ತಿಯಾದರು ಎಂದು ಮನೀಶಾ ಕೊಯಿರಾಲಾ ತಿಳಿಸಿದ್ದಾರೆ.
ಚಿತ್ರಗಳು: ಮನಿಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು
ನಟಿ ಮನೀಶಾ ಕೊಯಿರಾಲಾ ಹಾಗೂ ಯುವರಾಜ್ ಸಿಂಗ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. 2013ರಲ್ಲಿ ಕ್ಯಾನ್ಸರ್ ಬಗ್ಗೆ ನಡೆದ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.
ವರ್ಷದ ಹಿಂದೆ ಕ್ಯಾನ್ಸರ್ ಎದುರಿಸಿದ್ದ ನಟಿ ಸೋನಾಲಿ ಬೇಂದ್ರೆ ಬಗ್ಗೆಯೂ ಮನೀಶಾ ಕೊಯಿರಾಲಾ ಮೆಚ್ಚುಗೆ ಮಾತನ್ನು ಆಡಿದ್ದಾರೆ. ''ಕ್ಯಾನ್ಸರ್ ನಿಮ್ಮನ್ನು ಅಲುಗಾಡಿಸಬಹುದು. ಆದರೆ, ಅದರಿಂದ ನೀವು ಗೆಲ್ಲಬೇಕು.'' ಎಂದು ಹೇಳಿದ್ದಾರೆ.
ಕಾನ್ಸರ್ ರೋಗಿಗಳಿಗೆ ನಟಿ ಶರ್ಮಿಳಾ ಮಾಂಡ್ರೆ ಸಹಾಯ ಹಸ್ತ
''ಸ್ವರ್ಗ ಇದ್ದರೆ ಇಲ್ಲೇ ಇದೆ. ನರಕ ಇದ್ದರೂ ಇಲ್ಲಿಯೇ ಇದೆ. ನಾನು ಸಾವಿನ ಅಂಚಿನಲ್ಲಿ ಇದ್ದಾಗ ನನಗೆ ಬದುಕಿನ ಮಹತ್ವ ಹೆಚ್ಚು ತಿಳಿಯಿತು.'' ಸ್ಫೂರ್ತಿ ತುಂಬಿದ್ದಾರೆ.
ಕ್ಯಾನ್ಸರ್ ನಿಂದ ಹೊರ ಬಂದ ಮೇಲೆ ಮನೀಶಾ ಕೊಯಿರಾಲಾ 'ಡಿಯಲ್ ಮಾಯಾ', 'ಸಂಜು' ಚಿತ್ರದಲ್ಲಿ ನಟಿಸಿದ್ದರು. ಸದ್ಯ, 'ಪ್ರಸ್ತಾನಮ್' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೆಟ್ ಫ್ಲಿಕ್ಸ್ 'ಲಸ್ಟ್ ಸ್ಟೋರೀಸ್'ಯಲ್ಲಿಯೂ ಅಭಿನಯಿಸಿದ್ದರು.