Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೂರ್ತಿ ದೇಹ ಕಪ್ಪಾಗಿ ಇದಿಯಾ ಎಂದು ಅಣಕಿಸುತ್ತಿದ್ದರು; ಮಸಾಬಾ ಗುಪ್ತಾ
ಡಿಸೈನರ್ ಮತ್ತು ನಟಿ ಮಸಾಬಾ ಗುಪ್ತಾ ಎದುರಿಸಿದ ವರ್ಣಬೇಧ ನೀತಿಯ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕಪ್ಪಾಗಿದ್ದಿದ್ದಕ್ಕೆ ಶಾಲೆಯಲ್ಲಿ ಮತ್ತು, ಕಾಲೇಜಿನಲ್ಲಿ ಬಾಯಿಗೆ ಬಂದಹಾಗೆ ಮಾತಾಡಿಕೊಳ್ಳುತ್ತಿದ್ದರು ಎಂದು ಮಸಾಬಾ ಬೇಸರ ವ್ಯಕ್ತಪಡಿಸಿದ್ದಾರೆ.
ತಾನು ಎದುರಿಸಿದ ತಾರತಮ್ಯದ ಬಗ್ಗೆ ಮಸಾಬಾ ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಮಸಾಬಾ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ ಅವರ ಪುತ್ರಿ. ಕಪ್ಪಾಗಿದ್ದಾರೆ ಎನ್ನುವ ಕಾರಣಕ್ಕೆ ಸಾಕಷ್ಟು ನೋವು ಎದುರಿಸಬೇಕಾಗಿ ಬಂತು ಹೇಳಿದ್ದಾರೆ.
'ಸ್ನೇಹಿತರು ಮತ್ತು ಪರಿಚಯಸ್ಥರು ಬೆನ್ನ ಹಿಂದೆ ಮಾತನಾಡಿರುವುದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಯಾವ ಆಟ ಆಡಬೇಕು, ಯಾವ ಬಟ್ಟೆ ಧರಿಸಬೇಕು, ಯಾವುದನ್ನು ಓದಬೇಕು ಅಂತ ನನ್ನ ಸ್ನೇಹಿತೆ ಕೇಳುತ್ತಿದ್ದೆ. ಇದು ವಿಚಿತ್ರ ವಿಲಕ್ಷಣ ಎಂದು ನಾನು ಭಾವಿಸಿದೆ.'
'ನನ್ನ ಚರ್ಮದ ಬಣ್ಣಕ್ಕಿಂತ ಹೆಚ್ಚಾಗಿ ಇದು ನನ್ನ ಹೆತ್ತವರ ಸಂಬಂಧದ ಪ್ರತೀಕ. ಶಾಲೆಯಲ್ಲಿ ಯಾರಿಗೋ ಹುಟ್ಟಿದವಳು ಎಂದು ಅಂತ ನನ್ನನ್ನು ಕರೆದಿದ್ದು ಇನ್ನು ನೆನಪಿದೆ. ಚಿಕ್ಕವಳಿದ್ದಾಗ ಇದರ ಅರ್ಥ ಗೊತ್ತಿರಲಿಲ್ಲ. ಏನಿದು ಅಂತ ತಾಯಿ ಕೇಳಿದೆ. ಅಮ್ಮ ಇದಕ್ಕೂ ಮಿಗಿಲಾದ ಪದ ಕೇಳ ಬೇಕಾಗಿ ಬರಬಹುದು. ಎದುರಿಸಲು ರೆಡಿಯಾಗಿರು ಅಂತ ಹೇಳಿದರು.'
'ಶಾಲೆಯಲ್ಲಿ ನಾನು ಟೆನ್ನಿಸ್ ಆಡುತ್ತಿದ್ದೆ. ಹಾಗಾಗಿ ತರಗತಿಗೆ ತಡವಾಗಿ ಬರುತ್ತಿದೆ. ಇದಕ್ಕೆ ಅವಕಾಶ ಕೊಟ್ಟಿದ್ದರು' ಎಂದಿದ್ದಾರೆ. 'ಕ್ಲಾಸ್ ಬಂದಾಗ ಹುಡುಗರು ನನ್ನ ಬ್ಯಾಗ್ ನಲ್ಲಿದ್ದ ಒಳ ಉಡುಪುಗಳನ್ನು ತೆಗೆದು ಎಲ್ಲೆಡೆ ಬಿಸಾಕುತ್ತಿದ್ದರು, ನಾನು ದಪ್ಪಗಿದ್ದಿದ್ದಕ್ಕಾಗಿ ಬಟ್ಟೆಗಳನ್ನು ನೋಡಿ ನಗುತ್ತಿದ್ದರು. ಪೂರ್ತಿ ದೇಹ ಕಪ್ಪಾಗಿ ಇದಿಯಾ ಎಂದು ಪ್ರಶ್ನಿಸುತ್ತಿದ್ದರು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Recommended Video
'ಜಗತ್ತಿನಲ್ಲಿ ನನ್ನಂತವರು ತುಂಬಾ ಜನರಿದ್ದಾರೆ ಎಂದು ಗೊತ್ತಾಯಿತು. ಮೊದಲ ಬಾರಿಗೆ ಕನ್ನಡಿ ನೋಡುತ್ತಿದ್ದೇನೆ ಅಂತ ಅನಿಸಿತು. ಆಮೇಲೆ ಏಕಾಂಗಿತನ ದೂರವಾಗೋಕೆ ಆರಂಭವಾಯ್ತು. ವರ್ಣಬೇಧದ ಬಗ್ಗೆ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ.