Don't Miss!
- News ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರ: ಡಿ ಕೆ ಸುರೇಶ್ ಹೇಳಿದ್ದೇನು?
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ನ ಬೆತ್ತಲೆ ಚಿತ್ರವನ್ನು ಕ್ಲಿಕ್ಕಿಸಿದ್ದು ನನ್ನ ಪತ್ನಿಯೇ: ಮಿಲಿಂದ್ ಸೋಮನ್
ವಿವಾದ ಎಬ್ಬಿಸಿದ್ದ ತಮ್ಮ ಬೆತ್ತಲೆ ಚಿತ್ರದ ಬಗ್ಗೆ ಮೊದಲ ಬಾರಿಗೆ ನಟ ಮಿಲಿಂದ್ ಸೋಮನ್ ಮಾತನಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದು ಬೆತ್ತಲೆಯಾಗಿ ಬೀಚ್ನಲ್ಲಿ ಓಡಿ ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಆ ಚಿತ್ರ ಅದೇಕೆ ಅಷ್ಟು ವಿವಾದ ಎಬ್ಬಿಸಿತೊ ಗೊತ್ತಿಲ್ಲ. ಜನ ಈ ಮೊದಲು ಯಾರನ್ನೂ ಬೆತ್ತಲೆಯಾಗಿ ನೋಡಿಲ್ಲವಾ ಹೇಗೆ?' ಎಂದಿದ್ದಾರೆ ಮಿಲಿಂದ್.
'99% ಮಂದಿ ನನ್ನ ಬೆತ್ತಲೆ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಕೆಲವರಿಗೆ ಆ ಚಿತ್ರ ಶಾಕ್ ತಂದಿದೆ. ವಿಶೇಷವಾಗಿ 'ಸಾಮಾಜಿಕ ಜಾಲತಾಣ ಸಂಸ್ಕೃತಿ'ಗೆ ಹೊಸದಾಗಿ ಪರಿಚಯವಾಗಿರುವವರಿಗೆ ಆ ಚಿತ್ರ 'ಡಿಸ್ಟರ್ಬಿಂಗ್' ಎನಿಸಿರಬಹುದು' ಎಂದಿದ್ದಾರೆ ಮಿಲಿಂದ್ ಸೋಮನ್.
'ನನ್ನ ಚಿತ್ರ ನೋಡಿ ತಕರಾರು ತೆಗೆಯುತ್ತಿರುವವರು ಇನ್ಸ್ಟಾಗ್ರಾಂ ನಲ್ಲಿ ಹೋಗಿ 'ನೂಡ್' ಹ್ಯಾಷ್ಟ್ಯಾಗ್ ಟೈಪ್ ಮಾಡಲಿ ಲಕ್ಷಾಂತರ ಬೆತ್ತಲೆ ಚಿತ್ರಗಳು ಸಿಗುತ್ತವೆ. ಬೆತ್ತಲೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಹೊಸದೇನೂ ಅಲ್ಲ' ಎಂದಿದ್ದಾರೆ ಮಿಲಿಂದ್ ಸೋಮನ್.
'ನನ್ನ ಆ ಬೆತ್ತಲೆ ಚಿತ್ರವನ್ನು ಕ್ಲಿಕ್ಕಿಸಿದ್ದು ನನ್ನ ಪತ್ನಿ ಅಂಕಿತಾ. ಫೊಟೊಗ್ರಾಫರ್ ಅಥವಾ ಯಾವುದೇ ಸುದ್ದಿ ಪತ್ರಿಕೆಯ ಪತ್ರಕರ್ತರಲ್ಲ' ಎಂದಿದ್ದಾರೆ ಮಿಲಿಂದ್ ಸೋಮನ್. ಪತ್ನಿ ಅಂಕಿತಾ, ಮಿಲಿಂದ್ ಗೆ ವಯಸ್ಸಿನಲ್ಲಿ 25 ವರ್ಷ ಅಂತರ. ಇದೂ ಸಹ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
Recommended Video
ಮಿಲಿಂದ್ ಸೋಮನ್ ಹಂಚಿಕೊಂಡಿದ್ದ ಬೆತ್ತಲೆ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಚಿತ್ರದ ವಿರುದ್ಧ ದೂರು ಸಹ ನೀಡಲಾಗಿತ್ತು. ಮಿಲಿಂದ್ ಗೂ ಮುನ್ನಾ ನಟಿ ಪೂನಂ ಪಾಂಡೆ ಗೋವಾದ ಬೀಚ್ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಈ ಎರಡೂ ಘಟನೆಗಳನ್ನು ತಳುಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲಾಯಿತು.