Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೌತ್ನ ಈ ಹೀರೊ ಜೊತೆ ಡೇಟಿಂಗ್ ಹೋಗ್ಬೇಕಂತೆ ಮಾನುಷಿ ಚಿಲ್ಲರ್!
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಕೊಂಡಿದ್ದ ಮಾನುಷಿ ಚಿಲ್ಲರ್ ಸದ್ಯ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಚಿತ್ರರಂಗದ ಮೂಲಕ ಅಭಿನಯವನ್ನು ಆರಂಭಿಸಿದ್ದಾರೆ. ಮಾನುಷಿ ಚಿಲ್ಲರ್. ಬಾಲಿವುಡ್ನ 'ಪೃಥ್ವಿರಾಜ್' ಚಿತ್ರ ಈಕೆ ಅಭಿನಯದ ಮೊದಲ ಸಿನಿಮಾ. ಈ ಸಿನಿಮಾ ಜೂನ್ 3ಕ್ಕೆ ರಿಲೀಸ್ ಆಗಿದೆ.
'ಪೃಥ್ವಿರಾಜ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಆದರೆ ಸಿನಿಮಾಗಿಂತಲೂ ಹೆಚ್ಚಾಗಿ ಮಾನುಷಿ ತಮ್ಮ ಹೇಳಿಕೆಯ ಮೂಲಕ ಸುದ್ಧಿ ಆಗುತ್ತಿದ್ದಾರೆ. ಹೌದು ನಟ ರಾಮ್ ಚರಣ್ ತೇಜ ಬಗ್ಗೆ ಮಾತನಾಡಿ ಮಾನುಷಿ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ನಿರೂಪಣೆಗೆ ಸಮಂತಾ: ನಾಗರ್ಜುನಾಗೆ ಬಿಗ್ ಶಾಕ್!
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡುವ ನಟಿ ಮಾನುಷಿ ಚಿಲ್ಲರ್ ರಾಮ್ ಚರಣ್ ತೇಜಾ ಬಗ್ಗೆ ಮಾತನಾಡಿದ್ದಾರೆ. ಯಾವ ನಾಯಕ ನಟನ ಜೊತೆಗೆ ಸಿನಿಮಾ ಮಾಡಲು ಇಚ್ಛಿಸುತ್ತೀರಾ ಎಂದು ಕೇಳಿದಾಗ, ನಟಿ ಮಾನುಷಿ ರಾಮ್ ಚರಣ್ ಹೆಸರು ಹೇಳಿದ್ದಾರೆ. RRR ಸಿನಿಮಾ ನೋಡಿದ ಬಳಿಕ ಮಾನುಷಿ ಚಿಲ್ಲರ್ ರಾಮ್ ಚರಣ್ ತೇಜ ಅಭಿಮಾನಿ ಆಗಿದ್ದಾರಂತೆ. ಹಾಗಾಗಿ ಅವರ ಜೊತೆಗೆ ಸಿನಿಮಾ ಮಾಡುವ ಆಸೆ ಇದೆಯಂತೆ.
ಇನ್ನು ಯಾವ ನಟನ ಜೊತೆಗೆ ಡೇಟಿಂಗ್ ಹೋಗಲು ಇಚ್ಛಿಸುತ್ತೀರಾ ಎಂದು ಕೇಳಿದಾಗ, ಆಗಲೂ ಮಾನುಷಿ ಚಿಲ್ಲರ್ ರಾಮ್ ಚರಣ್ ಹೆಸರು ಹೇಳಿದ್ದಾರೆ. ನಟ ರಾಮ್ ಚರಣ್ ಜೊತೆಗೆ ಡೇಟಿಂಗ್ ಹೋಗಲು ಇಷ್ಟ ಪಡುತ್ತೀನಿ ಎಂದಿದ್ದಾರೆ.
ನಟಿ ಮಾನುಷಿ ಚಿಲ್ಲರ್ ನೀಡಿರುವ ಈ ಹೇಳಿಕೆಗೆ ಸದ್ಯ ಟಾಲಿವುಡ್ನಲ್ಲಿ ಬಿಸಿ, ಬಿಸಿ ಚರ್ಚೆ ಆಗುತ್ತಿದೆ. ಇನ್ನು ಎಲ್ಲವೂ ಮಾನುಷಿ ನಿರೀಕ್ಷೆಯಂತೆ ಆದರೆ, ಮುಂದಿನ ದಿನಗಳಲ್ಲಿ ರಾಮ್ ಚರಣ್ ಸಿನಿಮಾಗೆ ನಟಿ ಮಾನುಷಿ ನಾಯಕಿ ಆಗಬಹುದು. ಇನ್ನು ಇವರ ಜೋಡಿ ಚೆನ್ನಾಗಿ ಇರುತ್ತದೆ ಎನ್ನುವ ಬಗ್ಗೆಯೂ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.