twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಕುಂದ್ರಾ ಬಂಧನ ಕೇಸ್: ಇಡಿ ಎಂಟ್ರಿ, ನಟಿ ಗೆಹನಾಗೆ ಸಮನ್ಸ್

    |

    ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದ್ದು, ಜುಲೈ 27ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇತ್ತೀಚಿಗಷ್ಟೆ ರಾಜ್ ಕುಂದ್ರಾ ಬಂಗಲೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಇದೀಗ, ರಾಜ್ ಕುಂದ್ರಾ ಪರವಾಗಿ ಹೇಳಿಕೆ ಕೊಡ್ತಿದ್ದ ನಟಿ ಗೆಹನಾ ವಸಿಸ್ತ್‌ಗೆ ಮುಂಬೈ ಕ್ರೈಂ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಇನ್ನು ಮುಂಬೈ ಪೊಲೀಸರ ಜೊತೆ ಜಾರಿ ನಿರ್ದೇಶನಾಲಯ ಸಹ ಕೈ ಜೋಡಿಸಿದ್ದು, ರಾಜ್ ಕುಂದ್ರಾ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರತಿ ಪಡೆದುಕೊಂಡಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಮುಂದೆ ಓದಿ...

    ಭಾರತ ಗೆದ್ರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ?: ಪೂನಂ ವಿರುದ್ಧ ಗೆಹನಾ ಗರಂಭಾರತ ಗೆದ್ರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ?: ಪೂನಂ ವಿರುದ್ಧ ಗೆಹನಾ ಗರಂ

    ಮೂರು ಜನರಿಗೆ ಸಮನ್ಸ್

    ಮೂರು ಜನರಿಗೆ ಸಮನ್ಸ್

    ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲಿ ನಟಿ ಗೆಹನಾ ವಸಿಸ್ತ್‌ ಸಹ ಒಬ್ಬರು. ವರದಿ ಪ್ರಕಾರ, ಮುಂಬೈ ಪೊಲೀಸರ ಎದುರು ಭಾನುವಾರ ವಿಚಾರಣೆ ಎದುರಿಸಲಿದ್ದಾರೆ.

    ರಾಜ್ ಕುಂದ್ರಾ ಪರವಾಗಿದ್ದ ಗೆಹನಾ

    ರಾಜ್ ಕುಂದ್ರಾ ಪರವಾಗಿದ್ದ ಗೆಹನಾ

    ರಾಜ್ ಕುಂದ್ರಾ ಬಂಧನದ ಬಳಿಕ ನಟಿ ಗೆಹನಾ ವಸಿಸ್ತ್, ಕುಂದ್ರಾ ಪರವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. "ಬೋಲ್ಡ್ ಮತ್ತು ಎರೋಟಿಕಾ ಸಿನಿಮಾಗಳನ್ನು ಪೋರ್ನ್ ಸಿನಿಮಾಗಳಿಗೆ ಹೋಲಿಸಬೇಡಿ. ರಾಜ್ ಕುಂದ್ರಾ ಕಂಪೆನಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ರಾಜ್ ಕುಂದ್ರಾ ನಿರ್ಮಿಸಿದ ಆಪ್ ಗಳಲ್ಲಿ ಮೂರು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಅವರು ಎಂದಿಗೂ ನನಗೆ ಇದನ್ನೆ ಮಾಡಿ ಎಂದು ಒತ್ತಾಯ ಮಾಡಿಲ್ಲ. ನಾನು ಮಾಡಿದ ಕೆಲಸದ ಪ್ರಕಾರ ನನಗೆ ಸಂಬಳ ನೀಡಲಾಗಿದೆ" ಎಂದು ಹೇಳಿದ್ದರು.

    ಅವರು ಯಾವತ್ತೂ ನನಗೆ ಬಲವಂತ ಮಾಡಿಲ್ಲ: ರಾಜ್ ಕುಂದ್ರ ಪರನಿಂತ ಗೆಹನಾಅವರು ಯಾವತ್ತೂ ನನಗೆ ಬಲವಂತ ಮಾಡಿಲ್ಲ: ರಾಜ್ ಕುಂದ್ರ ಪರನಿಂತ ಗೆಹನಾ

    ಗೆಹನಾ ಬಂಧನ ಆಗಿತ್ತು

    ಗೆಹನಾ ಬಂಧನ ಆಗಿತ್ತು

    ಅಂದ್ಹಾಗೆ, ನಟಿ ಗೆಹನಾ ವಸಿಸ್ತ್ ಅವರನ್ನು ಸಹ ಈ ಹಿಂದೆ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೇ ಕೇಸ್‌ನಲ್ಲಿ ಈಗ ರಾಜ್ ಕುಂದ್ರಾರನ್ನು ಅರೆಸ್ಟ್ ಮಾಡಲಾಗಿದೆ. ಐದು ತಿಂಗಳು ಜೈಲಿನಲ್ಲಿದ್ದರು ಗೆಹನಾ. ಮೊಬೈಲ್, ಲ್ಯಾಪ್‌ಟ್ಯಾಪ್ ಸಹ ಪೋಲಿಸರ ವಶದಲ್ಲಿದೆ.

    Recommended Video

    ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ
    ಇಡಿ ಎಂಟ್ರಿ, ಮತ್ತಷ್ಟು ಕಂಟಕ

    ಇಡಿ ಎಂಟ್ರಿ, ಮತ್ತಷ್ಟು ಕಂಟಕ

    ರಾಜ್ ಕುಂದ್ರಾ ಬಂಧನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸಿದೆ ಎಂದು ವರದಿಯಾಗಿದೆ. ಅದಾಗಲೇ ಮುಂಬೈ ಪೊಲೀಸರಿಂದ ಎಫ್ ಐ ಆರ್ ಕಾಪಿ ಪಡೆದುಕೊಂಡಿದೆ. ಬಹುಶಃ ಮನಿಲಾಂಡರಿಂಗ್ ಪ್ರಕರಣ ದಾಖಲಿಸಿ ತನಿಖೆ ಮಾಡುವ ಸಾಧ್ಯತೆ ಇದೆ.

    English summary
    Raj Kundra Case: Mumbai crime branch has summoned actress Gehana Vasisth for questioning.
    Sunday, July 25, 2021, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X