Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದ್ಯಮಿಗೆ ಹಣ ವಂಚನೆ: ನಟ ಮತ್ತು ಸಹಚರನ ಬಂಧನ
ನಟನೊಬ್ಬ ತನ್ನ ಗೆಳೆಯನೊಡನೆ ಸೇರಿ ಉದ್ಯಮಿಯೊಬ್ಬನಿಗೆ ಹಣ ವಂಚನೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುವ ಫಿರೋಜ್ ಅಬ್ಬಾಸಿ ಮತ್ತು ಆತನ ಗೆಳೆಯ ಮುಶಿರ್ ಖಾನ್ ಉದ್ಯಮಿಯೊಬ್ಬರಿಗೆ ಖಾಸಗಿ ಸಾಲ ಕೊಡುವುದಾಗಿ ಹೇಳಿ ಮುಂಗಡವಾಗಿ 7.20
ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ಇವರು ಇನ್ನೂ ಹಲವರಿಗೆ ಇದೇ ರೀತಿ ವಂಚನೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಭದ್ರತಾ ಸಂಸ್ಥೆ ನಡೆಸುತ್ತಿರುವ ಉದ್ಯಮಿ ಕುನಾಲ್ ಸೌರಾಟಿಯಾಗೆ 2016ರಲ್ಲಿ 10 ಕೋಟಿ ಸಾಲ ಬೇಖಾಗಿತ್ತು. ಆಗ ಧಿರೇನ್ ಖಜಾರಿಯಾ ಎಂಬಾತನನ್ನು ಭೇಟಿಯಾಗಿ ಆತ ಹೇಳಿದಂತೆ 18 ಲಕ್ಷ ಹಣ ಮುಂಗಡವಾಗಿ ಕೊಟ್ಟಿದ್ದರು. ಅದರ ಬಳಿಕ ಧಿರೇನ್, ಫಿರೋಜ್ ಅಬ್ಬಾಸಿಯನ್ನು ಭೇಟಿ ಮಾಡಿಸಿದ್ದಾರೆ. ತಾನೊಬ್ಬ ಸೂಪರ್ ಸ್ಟಾರ್ ನಿರ್ದೇಶಕನ ಸಂಬಂಧಿ ಎಂದು ಹೇಳಿಕೊಂಡ ಫಿರೋಜ್ ಅಬ್ಬಾಸಿ ಸಾಲ ನೀಡಲು ಮುಂಗಡವಾಗಿ 10 ಲಕ್ಷ ಬಡ್ಡಿ ಪಾವತಿಸಬೇಕು ಎಂದಿದ್ದಾರೆ.
ಅಂತೆಯೇ ಕುನಾಲ್ ಸೌರಾಟಿಯಾ 7.2 ಲಕ್ಷ ಹಣವನ್ನು ಫಿರೋಜ್ ಅಬ್ಬಾಸಿ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಫಿರೋಜ್ ಮತ್ತು ಆತನ ಗೆಳೆಯ ಮುಶಿರ್ ಖಾನ್ 75 ಲಕ್ಷ ಹಾಗೂ 25 ಲಕ್ಷ ಹಣದ ಚೆಕ್ ನೀಡಿದ್ದಾರೆ. ಆ ಚೆಕ್ ಅನ್ನು ತಾವು ಹೇಳುವವರೆಗೆ ಬ್ಯಾಂಕ್ಗೆ ಡೆಪಾಸಿಟ್ ಮಾಡಬೇಡ ಎಂದು ಸಹ ಹೇಳಿದ್ದಾರೆ. ಬಹಳ ದಿನಗಳ ವರೆಗೆ ಡೆಪಾಸಿಟ್ ಮಾಡಲು ಹೇಳದಾಗ ಅನುಮಾನಗೊಂಡ ಫಿರೋಕ್ ಅಬ್ಬಾಸಿ ಬ್ಯಾಂಕ್ನಲ್ಲಿ ವಿಚಾರಿಸಿದಾಗ ಆ ಖಾತೆಯಲ್ಲಿ ಹಣವಿಲ್ಲವೆಂಬುದು ಗೊತ್ತಾಗಿದೆ.
ಮುಂಬೈನ ಖಾರ್ ಠಾಣೆಯ ಪೊಲೀಸರು ಫಿರೋಜ್ ಅಬ್ಬಾಸಿ ಮತ್ತು ಆತನ ಗೆಳೆಯ ಕಿಂಗ್ ಮುಶಿರ್ ಖಾನ್ ಅನ್ನು ಬಂಧಿಸಿದ್ದು ಇವರುಗಳ ಮೇಲೆ ವಂಚನೆ, ಫೋರ್ಜರಿ, ಪಿತೂರಿ ಆರೋಪಗಳನ್ನು ಹೊರಿಸಿ ಎಫ್ಐಆರ್ ದಾಖಲಿಸಿದ್ದಾರೆ. 18 ಲಕ್ಷ ಹಣ ಪಡೆದುಕೊಂಡು ಧಿರೇನ್ಗಾಗಿ ಹುಡುಕಾಟ ನಡೆಸುತ್ತಿದ್ದು ಆತ ಕಣ್ಮರೆಯಾಗಿದ್ದಾನೆ. ಇವರು ಈ ಉದ್ಯಮಿಗೆ ಮಾತ್ರವೇ ಅಲ್ಲದೆ ಇನ್ನೂ ಕೆಲವರಿಗೆ ಹಣ ವಂಚನೆ ಮಾಡಿರಬಹುದಾದ ಗುಮಾನಿಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.