Don't Miss!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಡುರಸ್ತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾದ ನಟ
ಬಾಲಿವುಡ್ ನಟ ವರುಣ್ ಧವನ್ ತೆಗೆಸಿಕೊಂಡಿರುವ ಸೆಲ್ಫಿಯೊಂದು ಮುಂಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ನಟ ವರುಣ್ ಧವನ್ ಮುಂಬೈನ ನಡುರಸ್ತೆಯ ಟ್ರಾಪಿಕ್ ನಲ್ಲಿ ಕಾರು ನಿಲ್ಲಿಸಿ ಯುವತಿಯ ಜೊತೆ ಫೋಟೋ ಕ್ಲಿಕ್ಕಿಸಿದ್ದಾರೆ. ತಾವು ಇದ್ದ ಕಾರು ಮತ್ತು ಆ ಯುವತಿ ಇದ್ದ ಆಟೋ ಕಾಣುವಂತೆ ಫೋಟೋ ಕ್ಲಿಕ್ಕಿಸಿದ್ದಾರೆ.
ರಸ್ತೆಯಲ್ಲಿ ಈ ರೀತಿ ಫೋಟೋ ತೆಗೆದುಕೊಂಡಿರುವುದು ಅಪಾಯ ಮತ್ತು ಇದರಿಂದ ಬೇರೆಯವರಿಗೆ ತೊಂದರೆಯಾಗಿದೆ ಎಂಬ ದೃಷ್ಠಿಯಿಂದ ಪೊಲೀಸರು ವರುಣ್ ಗೆ ಎಚ್ಚರಿಕೆ ನೀಡಿದ್ದಾರೆ.
ಲಂಡನ್ ಸೆನ್ಸಾರ್ ಮಂಡಳಿಯಿಂದ 'ಪದ್ಮಾವತಿ'ಗೆ ಕ್ಲೀನ್ ಚಿಟ್
''ವರುಣ್ ಧವನ್, ಈ ರೀತಿಯ ಸಾಹಸಗಳು ಸಿನಿಮಾದಲ್ಲಿ ನೋಡಿದ್ರೆ ಚೆನ್ನಾಗಿರುತ್ತೆ. ಆದ್ರೆ, ಮುಂಬೈ ರಸ್ತೆಯಲ್ಲಿ ಅಲ್ಲ. ನಿಮ್ಮ ಜೀವನವನ್ನ ರಿಸ್ಕ್ ನಲ್ಲಿಡುವುದಲ್ಲದೇ, ಬೇರೆಯವರಿಗೂ ಇದು ಸಂಕಷ್ಟ ತರುವುದು. ನಿಮ್ಮಿಂದ ನಾವು ಜವಾಬ್ದಾರಿಯುತ ಕೆಲಸಗಳನ್ನ ನಿರೀಕ್ಷೆ ಮಾಡುತ್ತೇವೆ. ನೀವೊಬ್ಬ ಯೂತ್ ಐಕಾನ್. ನಿಮ್ಮ ಮನೆಗೆ ಈ ಇ-ಚಲನ್ ಬರುತ್ತಿದೆ. ಮುಂದಿನ ಬಾರಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ'' ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದರು.
ಬಾಲಿವುಡ್ 'ಪದ್ಮಾವತಿ' ಬಗ್ಗೆ ಸ್ಯಾಂಡಲ್ ವುಡ್ 'ಪದ್ಮಾವತಿ' ಹೇಳಿದ್ದೇನು?
.@Varun_dvn These adventures surely work on D silver screen but certainly not on the roads of Mumbai! U have risked ur life,ur admirer’s & few others. V expect better from a responsible Mumbaikar & youth icon like U! An E-Challan is on d way 2 ur home. Next time, V will B harsher pic.twitter.com/YmdytxspGY
— Mumbai Police (@MumbaiPolice) November 23, 2017
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ವರುಣ್ ಧವನ್ ಕ್ಷಮೆ ಕೇಳಿದ್ದಾರೆ. ''ನನ್ನ ಕಾರು ಟ್ರಾಫಿಕ್ ನಲ್ಲಿ ತುಂಬ ಹೊತ್ತು ನಿಂತಿತ್ತು. ಈ ಮಧ್ಯೆ ಫೋಟೋ ಕೇಳಿದ ಅಭಿಮಾನಿಯ ಭಾವನೆಯನ್ನ ನೋಯಿಸಲು ಮನಸ್ಸು ಒಪ್ಪಲಿಲ್ಲ. ಹಾಗಾಗಿ, ಈ ಫೋಟೋ ತೆಗೆಸಿಕೊಳ್ಳಬೇಕಾಯಿತು. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ಮತ್ತೆ ಸಂಭವಿಸಲ್ಲ'' ಎಂದು ತಿಳಿಸಿದ್ದಾರೆ.
ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!
My apologies 🙏 Our cars weren’t moving since we were at a traffic signal and I didn’t want to hurt the sentiment of a fan but next time I’ll keep safety in mind and won’t encourage this. https://t.co/MEJk56EksG
— Varun Dhawan (@Varun_dvn) November 23, 2017