Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬನ್ಸಾಲಿ ಅವರನ್ನು ಭೇಟಿ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್
ಬಾಲಿವುಡ್ ಚಿತ್ರರಂಗ ಮೇಕಿಂಗ್ ಮಾಂತ್ರಿಕ ಅಂದರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಬನ್ಸಾಲಿ ಮಾಡುವ ಪ್ರತಿ ಸಿನಿಮಾಗಳು ಕೂಡ ಒಬ್ಬ ನಿರ್ದೇಶಕನಿಗೆ ಸ್ಫೂರ್ತಿ ನೀಡುತ್ತದೆ. ಒಂದು ಸಣ್ಣ ಸೀನ್ ತೆಗೆಯಲು ಅವರು ಹಾಕುವ ಶ್ರಮ ದೊಡ್ಡದಿರುತ್ತದೆ. ಅದೇ ಕಾರಣಕ್ಕೆ ಅವರು ಅದೆಷ್ಟೋ ನಿರ್ದೇಶಕರ ಫೇವರೇಟ್ ಆಗಿದ್ದಾರೆ. ಅಂದಹಾಗೆ, ಈಗ ಕನ್ನಡದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಬನ್ಸಾಲಿ ಪ್ರತಿಭೆಯನ್ನು ಹೊಗಳಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬನ್ಸಾಲಿ ಅವರ ಬಗ್ಗೆ ಬರೆದುಕೊಂಡಿದ್ದಾರೆ. ''ಇವರು ಮ್ಯೂಜಿಷಿಯನ್, ಇವರು ಮ್ಯಾಸಿಷಿಯನ್, ಹೈಲಿ ಕಮಿಟೇಡ್ ಡೈರೆಕ್ಟರ್. ಅವರನ್ನು ಭೇಟಿ ಮಾಡಿದ್ದು ತುಂಬ ಖುಷಿ ಆಯ್ತು. ಅವರ ಅದ್ಬುತ ಸಿನಿಮಾಗಳನ್ನು ನಾನು ಪೂಜಿಸುತ್ತೇನೆ.'' ಎಂದು ಬನ್ಸಾಲಿ ಅವರ ಪ್ರತಿಭೆಯನ್ನು ಹೊಗಳಿದ್ದಾರೆ.
ಅಂದಹಾಗೆ, ನಿನ್ನೆ ಮುಂಬೈನಲ್ಲಿರುವ ಸಂಜಯ್ ಲೀಲಾ ಬಸ್ಸಾಲಿ ಕಛೇರಿಯಲ್ಲಿಯೇ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಮೀಟ್ ಮಾಡಿದ್ದಾರೆ. ಇನ್ನು ಸಂಜಯ್ ಲೀಲಾ ಬನ್ಸಾಲಿ 'ಪದ್ಮಾವತ್' ಸಿನಿಮಾದ ಸೂಪರ್ ಸಕ್ಸಸ್ ನಂತರ ಹೊಸ ಸಿನಿಮಾದ ತಯಾರಿಯಲ್ಲಿ ಇದ್ದಾರೆ.