Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿಗೆ ಹೊಡೆದು ಹಣ ದೋಚಿ ಪರಾರಿಯಾದ ದುರುಳರು
'ನಮಸ್ತೆ ಲಂಡನ್' ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅಲಂಕೃತಾ ಸಹಾಯ್ ಮನೆಗೆ ನುಗ್ಗಿ ನಟಿಯನ್ನು ಹೊಡೆದು ಹಣ, ಒಡವೆ ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
ಬಾಲಿವುಡ್ ನಟಿ ಅಲಂಕೃತಾ ಸಹಾಯ್ ಚಂಡೀಘಡದ ತಮ್ಮ ಹೊಸ ಮನೆಯಲ್ಲಿ ಒಬ್ಬರೇ ಇರುವ ಸಮಯದಲ್ಲಿ ಮನೆಗೆ ನುಗ್ಗಿದ ಮೂವರು ದರೋಡೆಕೋರರು ನಟಿಗೆ ಚಾಕು ತೋರಿಸಿ ಹೆದರಿಸಿದ್ದಾರೆ, ಹಲ್ಲೆ ಸಹ ಮಾಡಿದ್ದಾರೆ. ನಟಿಯು ಹೆಗೊ ತಪ್ಪಿಸಿಕೊಂಡು ತಮ್ಮ ರೂಮ್ ಸೇರಿಕೊಂಡಿದ್ದಾಳೆ, ರೂಮ್ನ ಒಳಗೂ ನುಗ್ಗಿದಾಗ ಬಾತ್ರೂಂ ಸೇರಿಕೊಂಡಿದ್ದಾಳೆ.
ಆದರೆ ದರೋಡೆಕೋರರು ನಟಿಯನ್ನು ಹೆದರಿಸಿ, ಪ್ರಾಣ, ಮಾನ ಬೆದರಿಕೆ ಹಾಕಿ ಆಕೆಯ ಎಟಿಎಂ ಕಾರ್ಡ್, ಪಿನ್ ನಂಬರ್, ಮನೆಯಲ್ಲಿದ್ದ ಹಣ ಚಿನ್ನಗಳನ್ನು ದೋಚಿಕೊಂಡು ಹೋಗಿದ್ದಾರೆ.
ಅಲಂಕೃತಾ ಸಹಾಯ್ ಕೆಲವು ದಿನಗಳ ಹಿಂದಷ್ಟೆ ಚಂಡೀಘಡದ ಸೆಕ್ಟರ್ 27 ನಲ್ಲಿ ಹೊಸ ಮನೆ ಖರೀದಿಸಿದ್ದರು. ಮಧ್ಯಾಹ್ನದ ವೇಳೆ ಕೆಲಸದ ಮಹಿಳೆ ಮನೆಗೆ ಬರಲೆಂದು ಮನೆಯ ಬಾಗಿಲನ್ನು ತೆರೆದಿಟ್ಟದ್ದರು. ಇದೇ ಅವಕಾಶವನ್ನು ಬಳಸಿಕೊಂಡು ದರೋಡೆಕೋರರು ಮನೆಗೆ ನುಗ್ಗಿದ್ದಾರೆ.
ದರೋಡೆಕೋರರು ಮನೆಗೆ ನುಗ್ಗಿದ ಸಮಯದಲ್ಲಿ ಮನೆಯಲ್ಲಿ ಅಲಂಕೃತಾ ಒಬ್ಬರೇ ಇದ್ದರು. ಆ ಮನೆಯಲ್ಲಿ ಅಲಂಕೃತಾ ತನ್ನ ಪೋಷಕರೊಂದಿಗೆ ವಾಸವಿದ್ದಾರೆ. ಆದರೆ ಅವರ ಪೋಷಕರು ಕೆಲ ದಿನಗಳ ಹಿಂದಷ್ಟೆ ಪ್ರವಾಸ ಹೋಗಿದ್ದರು. ಹಾಗಾಗಿ ಅಲಂಕೃತಾ ಒಬ್ಬರೇ ಮನೆಯಲ್ಲಿದ್ದರು.
ಪ್ರಕರಣದ ಬಗ್ಗೆ ನಟಿ ಅಲಂಕೃತಾ ಸೆಕ್ಟರ್ 26 ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಮೂವರು ದರೋಡೆಕೋರರಲ್ಲಿ ಒಬ್ಬನು ಕೆಲವು ದಿನಗಳ ಹಿಂದಷ್ಟೆ ನಟಿಯ ಮನೆಗೆ ಬಂದಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಹೊಸ ಮನೆಗೆ ಕೆಲವು ಪೀಠೋಪಕರಣಗಳನ್ನು ಅಲಂಕೃತಾ ತರಿಸಿಕೊಂಡಿದ್ದರು. ಪೀಠೋಪಕರಣಗಳನ್ನು ಡೆಲಿವರಿ ಮಾಡಲು ಆತ ಮನೆಗೆ ಹೋಗಿದ್ದ. ಮನೆಯನ್ನು ಚೆನ್ನಾಗಿ ನೋಡಿಕೊಂಡು ಕೆಲವರು ದುರುಳರನ್ನು ಜೊತೆ ಮಾಡಿಕೊಂಡು ಮನೆ ದೋಚಲು ಬಂದಿದ್ದ. ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.