Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೋದಿ ಈಗ ದೇಶದ ನಾಯಕ, ದೇಶ ತೊರೆದ ಗಾಯಕ
ಬಾಲಿವುಡ್ ನ ಕಿರಿಕ್ ಖಾ ನ್ ಎಂದೇ ಖ್ಯಾತಿಯಾಗಿರುವ ಕಮಲ್ ಆರ್ ಖಾನ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ. 'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗೆದ್ದರೆ ನಾನು ಭಾರತ ತೊರೆಯುತ್ತೇನೆ' ಎಂದಿದ್ದ ಗಾಯಕ ಕಮ್ ನಟ ಕಮಲ್ ಖಾನ್ ಈಗ ನುಡಿದಂತೆ ನಡೆದಿದ್ದಾನೆ ಭಾರತ ತೊರೆದು ದುಬೈ ಕಡೆಗೆ ಮುಖ ಮಾಡಿ ನಿಂತಿದ್ದಾನೆ.
ಬಿಗ್ ಬಾಸ್ 3 ಸ್ಪರ್ಧಿಯಾಗಿ ಕೂಡಾ ಜನರಿಗೆ ಒಂದಷ್ಟು ಮನರಂಜನೆ ಕೊಟ್ಟ ಕಮಲ್ ಖಾನ್, ಅನೇಕ ಬಾರಿ ಟ್ವೀಟ್ ವಾರ್ ಗಳಲ್ಲಿ ತೊಡಗಿದ್ದ. ಕೆಲವು ತಿಂಗಳುಗಳ ಹಿಂದೆ ' ನಾನು ಮೋದಿ ಅವರಿಗೆ ಚಾಲೆಂಜ್ ಮಾಡುತ್ತೇನೆ, ಅವರು ಪಿಎಂ ಆದರೆ, ನಾನು ನನ್ನ ಲಿಂಗ ಪರಿವರ್ತನೆ ಮಾಡಿಕೊಂಡು ಕರಣ್ ಜೋಹರ್ ನನ್ನು ಮದುವೆಯಾಗುತ್ತೇನೆ' ಎಂದಿದ್ದ.
ಲೋಕಸಭೆ ಚುನಾವಣೆ 2014ರ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಬಿಜೆಪಿ ಭಾರಿ ಬಹುಮತ ಪಡೆದು ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಕಮಲ್ ಖಾನ್ ಟ್ವೀಟ್ ಗಳಿಗೆ ಬೆಲೆ ಇಲ್ಲದಿದ್ದರೂ ಉಡಾಫೆ ಮಾತುಗಳನ್ನು ಜನ ಗಣನೆಗೆ ತೆಗೆದುಕೊಳ್ಳದಿದ್ದರೂ ಕಮಲ್ ಯಾಕೋ ಈ ಬಾರಿ ತಮ್ಮ ಟ್ವೀಟ್ ಅನ್ನೇ ಸೀರಿಯಸ್ ಆಗಿ ತೆಗೆದುಕೊಂಡು ದೇಶ ತೊರೆದಿದ್ದಾನೆ. ಕಮಲ್ ಖಾನ್ ದೇಶವನ್ನು ಬಿಟ್ಟಾಗಿದೆ ಅದರೆ, ಲಿಂಗ ಪರಿವರ್ತನೆ ಕಥೆ ಏನು? ಮುಂದೆ ಓದಿ...[ಮಹೇಶ್ ಭಟ್ಟರ ಮಗಳೇ ನನ್ನ ಪತ್ನಿ ಕಣ್ರಿ!]
ದೇಶ ತೊರೆದ ಬಾಲಿವುಡ್ ನ ಕಿರಿಕ್ ಖಾನ್
'ನಾನು ಮೋದಿ ಅವರಿಗೆ ಚಾಲೆಂಜ್ ಮಾಡುತ್ತೇನೆ, ಅವರು ಪಿಎಂ ಆದರೆ, ನಾನು ನನ್ನ ಲಿಂಗ ಪರಿವರ್ತನೆ ಮಾಡಿಕೊಂಡು ಕರಣ್ ಜೋಹರ್ ನನ್ನು ಮದುವೆಯಾಗುತ್ತೇನೆ' ಎಂದಿದ್ದ.
|
ಮೋದಿಗೆ ಗೆಲುವು ನಾನು ದೇಶ ಬಿಟ್ಟೆ
ಮೋದಿಗೆ ಗೆಲುವು ನಾನು ದೇಶ ಬಿಟ್ಟೆ ಎಂದು ಕಮಲ್ ಟ್ವೀಟ್
|
ಕೊಟ್ಟ ವಚನ ಪಾಲಿಸಿದ್ದೇನೆ, ಆದರೆ
ಕೊಟ್ಟ ವಚನ ಪಾಲಿಸಿದ್ದೇನೆ, ಆದರೆ ನನ್ನ ನೆಚ್ಚಿನ ದೇಶವನ್ನು ತೊರೆಯುವುದು ಕಷ್ಟವಾಗುತ್ತಿದೆ
|
ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದ ಕಮಲ್
ಕಾಂಗ್ರೆಸ್ಸಿನ ಸಂಜಯ್ ನಿರುಪಮ್ ಸೋಲಿನ ಬಗ್ಗೆ ನನ್ನ ಭವಿಷ್ಯ ನಿಜವಾಗಿದೆ.
|
ನನ್ನ ಮೂರನೇ ಭವಿಷ್ಯ ನಿಜವಾಗಿದೆ
ನನ್ನ ಮೂರನೇ ಭವಿಷ್ಯ ನಿಜವಾಗಿದೆ ಸ್ಮೃತಿ ಇರಾನಿಗೆ ರಾಹುಲ್ ಗಾಂಧಿ ವಿರುದ್ಧ ಸೋಲುಂಟಾಗಿದೆ.
ಕಮಲ್ ಕೂಡಾ ಮುಂಬೈನಲ್ಲಿ ಅಭ್ಯರ್ಥಿಯಾಗಿದ್ದ
ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕಮಲ್ ರಷಿದ್ ಖಾನ್ ಸೋಲುಂಡಿದ್ದಾನೆ. ಸಮಾಜವಾದಿ ಪಕ್ಷ ಟಿಕೆಟ್ ನೀಡಲು ನಿರಾಕರಿಸಿತ್ತು.
|
ಶಾರುಖ್ ಬಗ್ಗೆ ನನಗೆ ಗೊತ್ತಿಲ್ಲ
ಶಾರುಖ್ ಬಗ್ಗೆ ನನಗೆ ಗೊತ್ತಿಲ್ಲ, ನಾನಂತೂ ದೇಶ ತೊರೆಯುತ್ತಿದ್ದೇನೆ. ಎಂದಿರುವ ಕಮಲ್, ಲಿಂಗ ಪರಿವರ್ತನೆ ಬಗ್ಗೆ ತುಟಿ ಬಿಚ್ಚಿಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟರ್ ಕಮಲ್ ಖಾನ್ ಜತೆ ದುಬೈಗೆ ಪ್ರಯಾಣ ಬೆಳೆಸಿದ್ದಾನೆ.