Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ರಾಷ್ಟ್ರೀಯತೆ ಚಿತ್ರಗಳಲ್ಲಿ ಇರಲಿ, ಚಿತ್ರಮಂದಿರಗಳಲ್ಲಿ ಅಲ್ಲ'' - ವಿದ್ಯಾ ಬಾಲನ್
''ಭಾರತೀಯರು ತಮ್ಮ ದೇಶದ ಬಗ್ಗೆ ಹೆಮ್ಮೆ ಪಡುವ ಅನೇಕ ವಿಷಯಗಳು ಇವೆ. ಆದರೆ, ನಾವು ಅದನ್ನು ಮಾಡುವುದೇ ಇಲ್ಲ.'' ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಹೇಳಿದ್ದಾರೆ.
ಸಖತ್ ವೈರಲ್ ಆಗ್ತಿದೆ ವಿದ್ಯಾ ಬಾಲನ್ ಹಾಟ್ ಫೋಟೋ
ಇತ್ತೀಚಿಗಿನ ಸಂದರ್ಶನದಲ್ಲಿ ಮಾತನಾಡಿರುವ 'ಮಿಷನ್ ಮಂಗಲ್' ನಾಯಕಿ 'ರಾಷ್ಟ್ರೀಯತೆ ಮತ್ತು ಸಿನಿಮಾ' ಬಗ್ಗೆ ಹೇಳಿಕೆ ನೀಡಿದ್ದಾರೆ. ''ರಾಷ್ಟ್ರೀಯತೆ ಸಿನಿಮಾದಲ್ಲಿ ಇರಲಿ ಆದರೆ, ಚಿತ್ರಮಂದಿರದಲ್ಲಿ ಅಲ್ಲ.'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿತ್ರಮಂದಿರಗಳಲ್ಲಿ ಹಾಡಿಸುವ ರಾಷ್ಟ್ರಗೀತೆಗಿಂತ ಸಿನಿಮಾಗಳಲ್ಲಿ ರಾಷ್ಟ್ರೀಯತೆ ಇರಬೇಕು ಎನ್ನುವುದು ವಿದ್ಯಾ ಬಾಲನ್ ಮಾತಿನ ಅರ್ಥವಾಗಿದೆ. ''ವಿಶ್ವವನ್ನು ಸುತ್ತಿ ಬಂದರೆ, ಭಾರತೀಯರು ಹೆಮ್ಮೆ ಪಡುವ ಅನೇಕ ವಿಷಯಗಳು ನಮ್ಮಲ್ಲಿ ಇವೆ. ಇಲ್ಲಿನ ವೈವಿದ್ಯತೆ, ಪರಂಪರೆ ಹಾಗೂ ನೈಸರ್ಗಿಕ ಸೌಂದರ್ಯದಲ್ಲಿ ಭಾರತ ಶ್ರೀಮಂತವಾಗಿದೆ. ನಾವು ನಮ್ಮ ದೇಶವನ್ನು ಸಂಭ್ರಮಿಸಬೇಕು'' ಎನ್ನುವುದು ವಿದ್ಯಾ ಮಾತು.
ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್
ವಿಜ್ಞಾನ ಮತ್ತು ಧರ್ಮ ಸಹಬಾಳ್ವೆ ನಡೆಸಬಹುದು, ಅವು ಬೇರೆ ಬೇರೆ ಆಗುವ ಅಗತ್ಯ ಇಲ್ಲ. ''ಇಂದಿನ ದಿನದಲ್ಲಿ ಧರ್ಮವನ್ನು ವ್ಯಾಖ್ಯಾನಿಸಿರುವ ರೀತಿಯಲ್ಲಿ ಸಮಸ್ಯೆ ಇದೆ. ಎಷ್ಟೋ ಜನರು ತಾವು ಧಾರ್ಮಿಕರು ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ನಾನು ಕೂಡ ಅದರಲ್ಲಿ ಒಬ್ಬಳು.'' ಎಂದು ವಿದ್ಯಾ ತಿಳಿಸಿದ್ದಾರೆ.
ವಿದ್ಯಾ ಬಾಲನ್ ನಟನೆಯ 'ಮಿಷನ್ ಮಂಗಲ್' ಚಿತ್ರ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ತಾರ ಶಿಂಧೆ ಎಂಬ ಪಾತ್ರದಲ್ಲಿ ವಿದ್ಯಾ ಬಾಲನ್ ನಿರ್ವಹಿಸಿದ್ದಾರೆ. ಇತ್ತ ಪೂಜೆ, ದೇವರು ಹಾಗೂ ಅತ್ತ ವಿಜ್ಞಾನ, ತಂತ್ರಜ್ಙಾನ ಎರಡನ್ನು ಗೌರವಿಸುವ ಪಾತ್ರ ಇದಾಗಿದೆ.