Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊಟ ಕೊಡಲಿಲ್ಲ, ಬಾತ್ರೂಂಗೆ ಬಿಡಲಿಲ್ಲ, ಸ್ಟಾರ್ ನಟನ ವಿರುದ್ಧ ಪತ್ನಿ ಆರೋಪ
ಬಾಲಿವುಡ್ನ ಸ್ಟಾರ್ ಪೋಷಕ ನಟ ಹಾಗೂ ವಿಲನ್ ಆಗಿರುವ ನವಾಜುದ್ಧೀನ್ರ ಖಾಸಗಿ ಜೀವನದಲ್ಲಿ ಬಿರುಗಾಳಿಯೆದ್ದು ಬಹಳ ಸಮಯವಾಗಿದೆ.
ನವಾಜುದ್ಧೀನ್ ಸಿದ್ಧಿಕಿ ಹಾಗೂ ಅವರ ಪತ್ನಿ ಆಲಿಯಾ ಸಿದ್ಧಿಕಿ ಸಂಬಂಧದಲ್ಲಿ ಬಿರುಕು ಬಿಟ್ಟು ಬಹಳ ಸಮಯವಾಗಿದೆ. ಇವರಿಬ್ಬರ ಸಂಬಂಧ ಪ್ರಸ್ತುತ ನ್ಯಾಯಾಲಯದ ಮೆಟ್ಟಿಲೇರಿದೆ. ನವಾಜುದ್ಧೀನ್ ಕುಟುಂಬದವರು, ಆಲಿಯಾ ಮೇಲೆಯೂ, ಆಲಿಯಾ, ನವಾಜುದ್ಧೀನ್ ಹಾಗೂ ಅವರ ಕುಟುಂಬದವರ ಮೇಲೆಯೂ ದೂರುಗಳನ್ನು ದಾಖಲಿಸಿದ್ದಾರೆ.
ಶಿವರಾಜ್ಕುಮಾರ್ ನಟನೆಯ ಘೋಸ್ಟ್ ಚಿತ್ರದಲ್ಲಿ ಬಾಲಿವುಡ್ನ ಅನುಪಮ್ ಖೇರ್ ನಟನೆ
ಇತ್ತೀಚೆಗೆ ನ್ಯಾಯಾಲಯದ ಸೂಚನೆಯಂತೆ ಆಲಿಯಾ ನವಾಜುದ್ಧಿನ್ ಸಿದ್ಧಿಕಿಯ ಹೊಸ ಮನೆ ಸೇರಿದ್ದಾರೆ. ಆದರೆ ಅಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಆಲಿಯಾ ಆರೋಪಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆಲಿಯಾರ ವಕೀಲ, ನನ್ನ ಕಕ್ಷಿದಾರೆಗೆ ನವಾಜುದ್ಧೀನ್ ಸಿದ್ಧಿಕಿ ಕುಟುಂಬದವರು ಕಿರುಕುಳ ನೀಡಿದ್ದಾರೆ. ಆಕೆಗೆ ಆಹಾರ ನೀಡದೆ, ಸ್ನಾನ ಮಾಡಲು ಬಾತ್ರೂಂ ನೀಡದೆ, ಮಲಗಲು ಬೆಡ್ ನೀಡದೆ ಹಿಂಸೆ ನೀಡಿದ್ದಾರೆ'' ಎಂದಿದ್ದಾರೆ.
ನವಾಜುದ್ಧೀನ್ ಸಿದ್ಧಿಕಿಯ ತಾಯಿ, ಆಲಿಯಾ ವಿರುದ್ಧ ಅಕ್ರಮ ಪ್ರವೇಶದ ದೂರು ನೀಡಿದ್ದು, ಪೊಲೀಸರಿಂದ ಬಂಧನದ ಬೆದರಿಕೆ ಹಾಕಿಸಿದ್ದಾರೆ. ಪ್ರತಿದಿನ ಸಂಜೆಯಾದ ಬಳಿಕ ಪೊಲೀಸ್ ಠಾಣೆಗೆ ಬರುವಂತೆ ಹೇಳಿ ಪೊಲೀಸರು ಸಹ ನನ್ನ ಕಕ್ಷಿದಾರೆಗೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ ವಕೀಲ ರಿಜ್ವಾನ್ ಸಿದ್ಧಿಕಿ.
''ಕಳೆದ ಏಳು ದಿನದಿಂದ ಸರಿಯಾಗಿ ಊಟ ನೀಡದೆ, ಬಾತ್ರೂಂ ನೀಡದೆ ಕಿರುಕುಳ ನೀಡಿರುವ ನವಾಜುದ್ಧೀನ್ ಸಿದ್ಧಿಕಿ ಕುಟುಂಬದವರು, ಆಲಿಯಾ ಸುತ್ತ ಕೆಲ ಬಾಡಿಗಾರ್ಡ್ಗಳನ್ನು ಇಟ್ಟಿದ್ದಾರೆ. ಅಲ್ಲದೆ, ಆಲಿಯಾ ಇರುವ ಹಾಲ್ನಲ್ಲಿ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅದು ಮಾತ್ರವೇ ಅಲ್ಲದೆ, ಆಕೆಯ ವಕೀಲನಾದ ನನ್ನನ್ನು ಸಹ ಭೇಟಿಯಾಗಲು ಬಿಡುತ್ತಿಲ್ಲ. ಆಲಿಯಾರಿಂದ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲು ಸಹ ಬಿಡುತ್ತಿಲ್ಲ'' ಎಂದು ವಕೀಲ ಹೇಳಿದ್ದಾರೆ.