Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಾ ಬಂಧನಕ್ಕೆ ಕಾರಣ ಕೊಟ್ಟ ಎನ್ಸಿಬಿ: 'ಸಿಲ್ಲಿ' ಎಂದ ನೆಟ್ಟಿಗರು
ಸುಶಾಂತ್ ಸಾವು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಶಾಂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿಯನ್ನು ಇಂದು (ಸೆಪ್ಟೆಂಬರ್ 08) ಎನ್ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ) ಬಂಧಿಸಿದೆ.
Recommended Video
ರಿಯಾ ಚಕ್ರವರ್ತಿಯನ್ನು ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇಂದು ರಿಯಾಳನ್ನು ಬಂಧಿಸುವ ನಿರ್ಣಯವನ್ನು ಎನ್ಸಿಬಿ ಮಾಡಿದ್ದು, ರಿಯಾಳನ್ನು ಬಂಧಿಸಲು ಕಾರಣವನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಈ ಕಾರಣ ಬಹಳ 'ಸಿಲ್ಲಿ' ಎನ್ನುತ್ತಿದ್ದಾರೆ ನೆಟ್ಟಿಗರು.
Breaking: ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್
165 ಗ್ರಾಂ ಗಾಂಜಾವನ್ನು ಕೊಂಡುಕೊಂಡ ಕಾರಣಕ್ಕೆ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದಾರಂತೆ ಎನ್ಸಿಬಿ ತಂಡ! ಹೌದು, ಇದೇ ಕಾರಣವನ್ನು ಎನ್ಸಿಬಿ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ್ದಾರೆ.
ಮೂರು ತಿಂಗಳಲ್ಲಿ 165 ಗ್ರಾಂ ಕೊಂಡುಕೊಂಡಿದ್ದರಂತೆ
ಇದೇ ವರ್ಷದ ಮಾರ್ಚ್ ನಿಂದ ಜೂನ್ ವರೆಗೆ ರಿಯಾ ಆದೇಶದಂತೆ ಸುಶಾಂತ್ ಮನೆ ನೌಕರನಾಗಿರುವ ದೀಪೇಶ್ ಸಾವಂತ್ 165 ಗ್ರಾಂ ಗಾಂಜಾವನ್ನು ಕೊಂಡುಕೊಂಡಿದ್ದರಂತೆ. ಅದನ್ನು ಸುಶಾಂತ್ ಗೆ ನೀಡಲಾಗಿತ್ತಂತೆ. ಸುಶಾಂತ್ 2018 ರಿಂದಲೂ ಗಾಂಜಾ ಸೇದುತ್ತಿದ್ದರು ಎಂದು ದೀಪೇಶ್ ಎನ್ಸಿಬಿ ಮುಂದೆ ಹೇಳಿದ್ದಾರೆ.
ಇಬ್ಬರು ಪೆಡ್ಲರ್ಗಳ ಬಳಿ ಸಿಕ್ಕಿದ್ದು 59 ಗ್ರಾಂ ಗಾಂಜಾ!
ಮೊದಲಿಗೆ ಬಂಧನಕ್ಕೆ ಒಳಗಾದ ಇಬ್ಬರು 'ಪೆಡ್ಲರ್'ಗಳ ಬಳಿ ಎನ್ಸಿಬಿ ಅಧಿಕಾರಿಗಳಿಗೆ ಸಿಕ್ಕಿದ್ದ ಕೇವಲ 59 ಗ್ರಾಂ ಗಾಂಜಾ. ಈ ಇಬ್ಬರೂ ಸುಶಾಂತ್ ಸಿಂಗ್ ಹಾಗೂ ಅವರ ನೌಕರರ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಎನ್ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದರು.
ಸುಶಾಂತ್ ಸಾವಿಗೆ ಸಹೋದರಿ ಕಾರಣ: ಸಾಕ್ಷ್ಯದೊಂದಿಗೆ ದೂರು ನೀಡಿದ ರಿಯಾ!
ದೀಪೇಶ್ ಹಾಗೂ ಮಿರಾಂಡಾಗೆ ಹಣ ಕೊಟ್ಟಿದ್ದಕ್ಕೆ ಬಂಧನ
ರಿಯಾ ಚಕ್ರವರ್ತಿಯನ್ನು ಬಂಧಿಸುವುದಕ್ಕೆ ಎನ್ಸಿಬಿ ಕೊಟ್ಟಿರುವ ಕಾರಣ; ಸುಶಾಂತ್ನ ನೌಕರರಾದ ಸ್ಯಾಮ್ಯುಯೆಲ್ ಮಿರಾಂಡಾ ಹಾಗೂ ದೀಪೇಶ್ ಅವರುಗಳು ಸುಶಾಂತ್ ಗಾಗಿ ಗಾಂಜಾ ಕೊಳ್ಳಲು ರಿಯಾ ಹಣ ಕೊಡುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಿದ್ದಾರಂತೆ ಎನ್ಸಿಬಿ. ರಿಯಾ ಗಾಂಜಾ ಆಗಲಿ ಮತ್ಯಾವುದೇ ಡ್ರಗ್ಸ್ ಸೇವನೆ ಮಾಡಿದ್ದಾರೆಂಬ ಬಗ್ಗೆ ಯಾವುದೇ ಉಲ್ಲೇಖ ಬಂಧನ ವಾರೆಂಟ್ನಲ್ಲಿ ಇಲ್ಲ.
ತನಿಖೆಯಿಂದ ಹಿಂದೆ ಸರಿದ ಇಡಿ!?
ಎನ್ಸಿಬಿ, ಇಡಿ ಹಾಗೂ ಸಿಬಿಐ, ಮೂರು ಕೇಂದ್ರ ತನಿಖಾ ಸಂಸ್ಥೆಗಳು ರಿಯಾ ವಿರುದ್ಧ ತನಿಖೆ ನಡೆಸುತ್ತಿವೆ. ಮೊದಲು ತನಿಖೆ ಪ್ರಾರಂಭಿಸಿದ್ದ ಇಡಿ ಈಗ ತನಿಖೆಯಿಂದ ಬಹುತೇಕ ಹಿಂದೆ ಸರಿದಿದೆ. ಸುಶಾಂತ್ ಖಾತೆಯಿಂದ 15 ಕೋಟಿ ವರ್ಗಾವಣೆ ಆಗಿದೆ ಎಂಬ ಆರೋಪದ ಮೇಲೆ ತನಿಖೆ ಪ್ರಾರಂಭಿಸಿದ್ದ ಇಡಿ, ಸುಶಾಂತ್ ಖಾತೆಯಲ್ಲಿ ಅಷ್ಟು ಹಣ ಇರಲೇ ಇಲ್ಲ ಎಂಬ ಸತ್ಯದ ಗೊತ್ತಾದ ಮೇಲೆ ಸುಮ್ಮನಾಗಿದೆ.
ಭಾರತಕ್ಕೆ ಅಭಿನಂದನೆಗಳು, ಮಧ್ಯಮ ವರ್ಗದ ಕುಟುಂಬವನ್ನು ಸರ್ವನಾಶ ಮಾಡಿದ್ರಿ: ರಿಯಾ ತಂದೆಯ ಆಕ್ರೋಶ