Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾ ನಂಟು: ಡ್ರಗ್ ಮಾರಾಟದಲ್ಲಿ ರಿಯಾ ಭಾಗಿ?
ಸುಶಾಂತ್ ಸಾವು ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಲೇ ಇದೆ. ದಿನಗಳೆದಂತೆ ಪ್ರಕರಣದ ನಿಗೂಢತೆ ಹೆಚ್ಚಾಗುತ್ತಲೇ ಇದೆ.
Recommended Video
ಹೊಸ ವರದಿಗಳ ಪ್ರಕಾರ ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾದ ಸಂಪರ್ಕ ಸಹ ಕಾರಣವಿರಬಹುದು ಎನ್ನಲಾಗುತ್ತಿದೆ. ಅನುಮಾನಕ್ಕೆ ಕಾರಣವಾದ ಕೆಲವು ಅಂಶಗಳು ಸಹ ಬೆಳಕಿಗೆ ಬಂದಿವೆ.
ಕೇವಲ ಅರ್ಧ ಸಂಭಾವನೆ ಪಡೆದು 'ದಿಲ್ ಬೆಚರಾ' ಚಿತ್ರ ಮಾಡಿದ್ದರು ಸುಶಾಂತ್ ಸಿಂಗ್, ಏಕೆ?
ಮಾಜಿ ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ಸುಬ್ರಹ್ಮಣಿಯನ್ ಸ್ವಾಮಿ ಅವರು ಈ ಅನುಮಾನವೊಂದನ್ನು ಹೊರಹಾಕಿದ್ದು, 'ದುಬೈನ ಮಾದಕ ವಸ್ತು ಮಾರಾಟಗಾರ ಆಯುಷ್ ಖಾನ್ ಅನ್ನು ಸುಶಾಂತ್ ಸಿಂಗ್ ಭೇಟಿಯಾದ ದಿನವೇ ಸುಶಾಂತ್ ಸಾವಾಗಿದೆ ಇದಕ್ಕೆ ಏನು ಕಾರಣ?' ಎಂದು ಪ್ರಶ್ನೆ ಮಾಡಿದ್ದಾರೆ. ಹಿರಿಯ ನ್ಯಾಯವಾದಿಯೂ ಆಗಿರುವ ಅವರ ಅನುಮಾನವನ್ನು ಸುಮ್ಮನೇ ನಿರ್ಲಕ್ಷಿಸಲು ಸಾಧ್ಯವಿಲ್ಲ.
ಮಾದಕ ವಸ್ತು ಬಳಸುತ್ತಿದ್ದರೇ ರಿಯಾ?
ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಗೆ ಮಾದಕ ವಸ್ತು ಮಾಫಿಯಾ ಜೊತೆಗೆ ಸಂಪರ್ಕವಿತ್ತು ಎನ್ನಲಾಗಿದೆ. ರಿಯಾ 'ಮಾದಕ ವಸ್ತು ಬಳಸುತ್ತಿದ್ದರು ಹಾಗೂ ಮಾದಕ ವಸ್ತು ವ್ಯವಹಾರ ಮಾಡುತ್ತಿದ್ದರು' ಎಂದು ಕೆಲವು ಮಾಧ್ಯಮಗಳು ಹೇಳಿವೆ. ಇದರ ಸತ್ಯಾಸತ್ಯತೆ ಸಿಬಿಐ ನವರೇ ಹೇಳಬೇಕಿದೆ.
ಮಾದಕ ವಸ್ತುವಿನ ಬಳಕೆ ಮತ್ತು ವ್ಯಾಪಾರ?
ರಿಯಾ ಮಾದಕ ವಸ್ತುವಿನ ಬಳಕೆ ಹಾಗೂ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನವು ಅವರ ವಾಟ್ಸ್ಆಪ್ ಚಾಟ್ನಿಂದಲೇ ಗೊತ್ತಾಗಿದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯವು ರಿಯಾ ಅವರ ವಾಟ್ಸ್ಆಪ್ ಚಾಟ್ ಅನ್ನು ಪಡೆದು ತನಿಖೆ ನಡೆಸಿದೆ. ಸಿಬಿಐ ಹಾಗೂ ಮಾದಕ ವಸ್ತು ನಿಯಂತ್ರಣ ಇಲಾಖೆ ಜೊತೆಗೂ ಇದನ್ನು ಹಂಚಿಕೊಂಡಿದೆ.
ಸುಶಾಂತ್ ಗೆಳೆಯ ಸಂದೀಪ್ನನ್ನು ಬಂಧಿಸಲು ಒತ್ತಾಯ
ಸುಬ್ರಹ್ಮಣಿಯನ್ ಸ್ವಾಮಿ ಅವರು ಸುಶಾಂತ್ ಸಿಂಗ್ ಪ್ರಕರಣದ ಮೇಲೆ ವಿಶೇಷ ಆಸಕ್ತಿ ವಹಿಸಿದ್ದು, ಸುಶಾಂತ್ ಸಿಂಗ್ ಗೆಳೆಯ ಸಂದೀಪ್ ಸಿಂಗ್ ಅನ್ನು ಸಹ ಬಂಧಿಸಬೇಕು ಹಾಗೂ ಆತ ಎಷ್ಟು ಬಾರಿ ದುಬೈಗೆ ಭೇಟಿ ನೀಡಿದ್ದ ಎಂಬ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸಂದೀಪ್ ನೇ ಸುಶಾಂತ್ಗೆ ಮಾದಕ ವಸ್ತು ತಂದುಕೊಡುತ್ತಿದ್ದ ಎಂದು ಆರೋಪಿಸಲಾಗುತ್ತಿದೆ.
ಸಿಬಿಐ ತನಿಖೆ ನಡೆಸುತ್ತಿದೆ
ಈ ನಡುವೆ ಸಿಬಿಐ ಸುಶಾಂತ್ ಸಿಂಗ್ ಮುಂಬೈ ನಿವಾಸದ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ಸುಶಾಂತ್ ಕುಟುಂಬ ಸದಸ್ಯರನ್ನೂ ಸಹ ವಿಚಾರಣೆ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಸಿಬಿಐ ತಂಡ ಭೇಟಿ ಮಾಡಿದ್ದು, ಸುಶಾಂತ್ ಪ್ರಕರಣ ಕುರಿತಂತೆ ಅವರಿಂದಲೂ ಮಾಹಿತಿ ಕ್ರೂಡೀಕರಣ ಮಾಡಿದ್ದಾರೆ.