Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ನಲ್ಲಿ ಯಾರು ನನಗೆ ಅವಕಾಶ ನೀಡಿಲ್ಲ: ಸತ್ಯ ಬಹಿರಂಗ ಪಡಿಸಿದ ಆಸ್ಕರ್ ವಿಜೇತ
ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಸುಶಾಂತ್ ಸಿಂಗ್ ನಿಧನದ ಬಳಿಕ ಬಾಲಿವುಡ್ ನ ಕರಾಳ ಮುಖ ಬಹಿರಂಗವಾಗಿದೆ. ಬಾಲಿವುಡ್ ನಲ್ಲಿ ನಡೆಯುತ್ತಿರುವ ಒಳರಾಜಕೀಯಿಂದ ಬಾಲಿವುಡ್ ತನ್ನ ಘನತೆಯನ್ನು ಕಳೆದುಕೊಂಡಿದೆ. ಚಿತ್ರರಂಗದಲ್ಲಿ ನೋವು, ಅವಮಾನ ಎದುರಿಸಿದ ಬಗ್ಗೆ ಈಗಾಗಲೆ ಅನೇಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಬಾಲಿವುಡ್ ತೊರೆದಿದ್ದಾರೆ.
Recommended Video
ಇದೀಗ ಖ್ಯಾತ ಸೌಂಡ್ ಡಿಸೈನರ್, ಆಸ್ಕರ್ ವಿಜೇತ ರೆಸೂಲ್ ಪೂಕುಟ್ಟಿ ಬಾಲಿವುಡ್ ನ ಗುಂಪು ರಾಜಕೀಯದ ಬಗ್ಗೆ ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರಹಮಾನ್ ತನ್ನ ವಿರುದ್ಧ ಒಂದು ಗ್ಯಾಂಗ್ ಕೆಲಸ ಮಾಡುತ್ತಿದೆ, ಆದ್ದರಿಂದ ಒಳ್ಳೆಯ ಸಿನಿಮಾಗಳು ಕೈತಪ್ಪುತ್ತಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೆ ರೆಸೂಲ್ ಪೂಕುಟ್ಟಿ ಬಾಲಿವುಡ್ ನಲ್ಲಾದ ಅವಮಾನದ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...
ಬಾಲಿವುಡ್ನಲ್ಲಿ ತಮ್ಮ ವಿರುದ್ಧ ಒಂದು ಗ್ಯಾಂಗ್ ಇದೆ: ಎ.ಆರ್. ರೆಹಮಾನ್ ಹೇಳಿದ ಸ್ಫೋಟಕ ಸಂಗತಿ
ರೆಸೂಲ್ ಪೂಕುಟ್ಟಿ ಬೇಸರ
ಈಗ ರೆಸುಲ್ ಪೂಕುಟ್ಟಿ ಸಹ ಬಾಲಿವುಡ್ ನಲ್ಲಿ ನಡೆಯುತ್ತಿರುವ ರಾಜಕೀಯ ಪಿತೂರಿಗಳ ಬಗ್ಗೆ ಮಾತನಾಡಿದ್ದಾರೆ. "ಹಿಂದಿ ಸಿನಿಮಾರಂಗದಲ್ಲಿ ಯಾರು ನನಗೆ ಕೆಲಸ ನೀಡಿದ ಕಾರಣ ನಾನು ಕುಸಿದುಹೋಗಿದ್ದೇನೆ. ಆಸ್ಕರ್ ಪ್ರಶಸ್ತಿ ಪಡೆದ ನಂತರ ಪ್ರಾದೇಶಿಕ ಸಿನಿಮಾಗಳು ನನ್ನನ್ನು ಬಿಗಿಯಾಗಿ ಹಿಡಿದುಕೊಂಡವು. ನೀವು ನಮಗೆ ಅಗತ್ಯವಿಲ್ಲ ಎಂದು ಅನೇಕ ಪ್ರೊಡಕ್ಷನ್ ಸಂಸ್ಥೆಗಳು ಮುಖಕ್ಕೆ ಹೊಡೆದ ಹಾಗೆ ಹೇಳಿದವು. ಆದರೂ ನಾನು ಸಿನಿಮಾರಂಗವನ್ನು ಪ್ರೀತಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಯಾರನ್ನು ದೂಷಿಸಲು ಇಷ್ಟಪಡುವುದಿಲ್ಲ
'ಅಪ್ರಸಿದ್ದ ಆಸ್ಕರ್ ಶಾಪ'ವನ್ನು ಎದುರಿಸುತ್ತಿದ್ದ ಪರಿಣಾಮ ನನ್ನನ್ನು ತಿರಸ್ಕರಿಸಿದ ಬಗ್ಗೆ ಯಾರನ್ನು ದೂಷಿಸಲು ಬಯಸುವುದಿಲ್ಲ. ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದವರು ತಮ್ಮ ವೃತ್ತಿ ಜೀವನದಲ್ಲಿ ಒಂದು ಸ್ಲೈಡ್ ಅನ್ನು ನೊಡುತ್ತಾರೆ. ಎಂದು ಹೇಳಿದ್ದಾರೆ. ಇಡೀ ನೆಪೋಟಿಸಂ ಚರ್ಚೆ ನಡೆಯುತ್ತಿರುವ ದಿಕ್ಕನ್ನು ನಾನು ಇಷ್ಟಪಡುವುದಿಲ್ಲ. ಹಾಗಾಗಿ ಶಾಂತಿಯಿಂದ ಇದ್ದೀನಿ. ಅವರ ಚಿತ್ರಗಳಲ್ಲಿ ನನ್ನನ್ನು ಕರೆದೊಯ್ಯದ ಕಾರಣ ನಾನು ಯಾರನ್ನು ದೂಷಿಸುವುದಿಲ್ಲ." ಎಂದು ರೆಸೂಲ್ ಪೂಕುಟ್ಟಿ ಬರೆದುಕೊಂಡಿದ್ದಾರೆ.
ನನಗೂ ಆ ಅನುಭವ ಆಗಿದೆ: ನೋವಿನ ಸಂಗತಿ ಹಂಚಿಕೊಂಡ ರಘು ದೀಕ್ಷಿತ್
'ಸ್ಲಮ್ ಡಾಗ್ ಮಿಲಿಯನೇರ್' ಗೆ ಸೌಂಡ್ ಡಿಸೈನ್
ರಸೂಲ್ ಪೂಕುಟ್ಟಿ 2008ರಲ್ಲಿ ಬಂದ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕೆ ರೆಸೂಲ್ ಸೌಂಡ್ ಡಿಸೈನಿಂಗ್ ಮಾಡಿದ್ದಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ಲಮ್ ಡಾಗ್ ಮಿಲಿಯನೇರ್ ಆಸ್ಕರ್ ಪ್ರಶಸ್ತಿಯ 10 ವಿಭಾಗಗಳಲ್ಲಿ ಮಾನನಿರ್ದೇಶನಗೊಂಡಿತ್ತು. 8 ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.
ಕನ್ನಡ ಸಿನಿಮಾಗೂ ಕೆಲಸ ಮಾಡಿದ್ದಾರೆ ರೆಸೂಲ್
ರಸುಲ್ ಪೂಕುಟ್ಟಿ ಹಿಂದಿ ಇಂಗ್ಲೀಷ್ ಮಾತ್ರವಲ್ಲದೆ ಮಲಯಾಳಂ ಮತ್ತು ತಮಿಳು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದಾರೆ. ವಿಶೇಷ ಅಂದರೆ ಕನ್ನಡದ ಒಂದು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದಾರೆ. ಕನ್ನಡ ನಿರುತ್ತರ ಸಿನಿಮಾದಲ್ಲಿ ರೆಸೂಲ್ ಪೂಕುಟ್ಟಿ ಕೆಲಸ ಮಾಡಿದ್ದಾರೆ.