Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಗೂ ಬಗೆಹರಿದ ರಿಚಾ ಚಡ್ಡಾ ಮತ್ತು ಪಾಯಲ್ ಘೋಷ್ ವಿವಾದ
ನಟಿ ಪಾಯಲ್ ಘೋಷ್ ವಿರುದ್ಧ ನಟಿ ರಿಚಾ ಚಡ್ಡಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್ ಕೊನೆಗೂ ಇತ್ಯರ್ಥವಾಗಿದೆ. ರಿಚಾ ಚಡ್ಡಾ ಅವರಿಗೆ ನ್ಯಾಯಾಧೀಶರ ಮುಂದೆ ಪಾಯಲ್ ಘೋಷ್ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಹೀಗಾಗಿ, ನಟಿ ರಿಚಾ ಚಡ್ಡಾ ಮತ್ತು ಪಾಯಲ್ ಘೋಷ್ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದೇವೆ ಎಂದು ವಕೀಲರು ಬಾಂಬೆ ಹೈ ಕೋರ್ಟ್ಗೆ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ: ತನ್ನ ಹೆಸರನ್ನು ಎಳೆದು ತಂದ ಪಾಯಲ್ ವಿರುದ್ಧ ರಿಚಾ ಗರಂ
''ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮೀಟು ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್, ಆಧಾರರಹಿತವಾಗಿ ನನ್ನ ಹೆಸರು ಎಳೆದು ತಂದಿದ್ದಾರೆ, ನನ್ನ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದಾರೆ, ಅದು ಸುಳ್ಳು ಮತ್ತು ಅವಹೇಳನಕಾರಿ'' ಎಂದು ರಿಚಾ ಚಡ್ಡಾ 1.1 ಕೋಟಿ ಮಾನನಷ್ಟ ಪರಿಹಾರ ಕೊಡಿಸಬೇಕೆಂದು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ್ದ ಬಾಂಬೆ ಹೈ ಕೋರ್ಟ್ ಎರಡು ದಿನಗಳಲ್ಲಿ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿತ್ತು. ಬುಧವಾರ ಕೋರ್ಟ್ಗೆ ಹಾಜರಾದ ಘೋಷ್ ಪರ ವಕೀಲ್ ನಿತೀಣ್ ಸತ್ಪೂಟ್ ''ರಿಚಾ ವಿರುದ್ಧ ಹೇಳಿಕೆಯನ್ನು ಪಾಯಲ್ ಹಿಂಪಡೆದುಕೊಂಡಿದ್ದಾರೆ. ಬೇಷರತ್ ಕ್ಷಮೆಯಾಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ರಿಚಾ ಪರ ವಕೀಲ ವೀರೇಂದ್ರ ತುಲ್ಜಾಪರ್ಕರ್ ಸಹ ಅದನ್ನು ಒಪ್ಪಿಕೊಂಡರು. ಇಬ್ಬರು ವಕೀಲರು ನೀಡಿದ ಹೇಳಿಕೆ ಬಳಿಕ ನ್ಯಾಯಾಧೀಶ ಎ ಕೆ ಮೆನನ್ ಸಹ ಪ್ರಕರಣ ಬಗೆಹರಿದಿದೆ ಎಂದು ಘೋಷಿಸಿದರು.