Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆತ್ತಲೆ ತಿರುಗುವುದು ತಪ್ಪು ಎನ್ನುವುದಾದರೆ ನಾಗಾ ಸಾಧುಗಳನ್ನು ಬಂಧಿಸಿ: ಪೂಜಾ ಬೇಡಿ
ಗೋವಾ ಬೀಚ್ನಲ್ಲಿ ನಟ ಮಿಲಿಂದ್ ಸೊಮನ್ ಬೆತ್ತಲಾಗಿ ಓಡಿದ್ದರು. ಆ ಚಿತ್ರವನ್ನು ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿದ್ದರು. ಮಿಲಿಂದ್ ಅವರ ಬೆತ್ತಲೆ ಓಟ ಗೋವಾ ಪೊಲೀಸರ ಕಣ್ಣು ಕೆಂಪಗೆ ಮಾಡಿದ್ದು, ಮಿಲಿಂದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆದರೆ ನಟ ಮಿಲಿಂದ್ ಸೊಮನ್ ಬೆಂಬಲಕ್ಕೆ ಬಂದಿರುವ ನಟಿ ಪೂಜಾ ಬೇಡಿ, ಮಿಲಿಂದ್ ಸೊಮನ್ ಮಾಡಿದ್ದು ತಪ್ಪಲ್ಲ ಎಂದಿದ್ದಾರೆ.
ಮಿಲಿಂದ್ ಸೊಮನ್ ಹಂಚಿಕೊಂಡಿರುವ ಚಿತ್ರದಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಚಿತ್ರವನ್ನು ನೋಡುವವರ ಮೆದುಳಲ್ಲಿ ಸಮಸ್ಯೆ ಇದೆ. ಹಾಗಾಗಿ ಚಿತ್ರವೂ ಸಮಸ್ಯೆಯಾಗಿ, ಅಶ್ಲೀಲವಾಗಿ, ಅಸಹವ್ಯವಾಗಿ ಕಾಣುತ್ತಿದೆ ಎಂದಿದ್ದಾರೆ ಪೂಜಾ ಬೇಡಿ.
ಮಿಲಿಂದ್ ಸೋಮನ್ ಬೆತ್ತಲೆ ಓಡಿದ್ದು ತಪ್ಪಲ್ಲ: ಪೂಜಾ ಬೇಡಿ
ಮಿಲಿಂದ್ ಸೊಮನ್ ನಗ್ನವಾಗಿ ಬೀಚ್ನಲ್ಲಿ ಓಡಿದ್ದು ತಪ್ಪಲ್ಲ ಎಂದಿರುವ ಪೂಜಾ ಬೇಡಿ, 'ಆತ ಸುಂದರಾಗಿರುವುದು, ನಟನಾಗಿರುವುದು, ಫಿಟ್ನೆಸ್ನಲ್ಲಿ ಯುವಜನರಿಗೆ ಮಾದರಿಯಾಗಿರುವುದರಿಂದ ಆತ ಇಂದು ಸಮಸ್ಯೆ ಎದುರಿಸಬೇಕಾಗಿ ಬಂದಿದೆ' ಎಂದಿದ್ದಾರೆ ಪೂಜಾ.
ಮೊದಲು ನಾಗಾ ಸಾಧುಗಳನ್ನು ಬಂಧಿಸಿ
ಬೆತ್ತಲಾಗುವುದು ಅಪರಾಧ ಎನ್ನುವುದಾದರೆ, ಬೆತ್ತಲೆ ತಿರುಗುವ ನಾಗಾ ಸಾಧುಗಳನ್ನು ಮೊದಲು ಬಂಧಿಸಿ. ದೇಹದ ಮೇಲೆ ಬೂದಿ ಹಚ್ಚಿಕೊಂಡ ತಕ್ಷಣ ಬೆತ್ತಲೆಯನ್ನು ಸಹಿಸಿಕೊಳ್ಳಲಾಗುತ್ತದೆ ಎಂದರ್ಥವಲ್ಲ' ಎಂದಿದ್ದಾರೆ ಪೂಜಾ ಬೇಡಿ.
ಪೂಜಾ ಬೇಡಿ ಹೇಳಿಕೆಗೆ ಪರ-ವಿರೋಧ ಚರ್ಚೆ
ಪೂಜಾ ಬೇಡಿ ಟ್ವಿಟ್ಟರ್ ಹೇಳಿಕೆಗೆ ಹಲವರು ಪರ-ವಿರೋಧ ಹೇಳಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಾಗಾ ಸಾಧುಗಳನ್ನು ಮಿಲಿಂದ್ ಸೊಮನ್ ಜೊತೆಗೆ ಹೋಲಿಸುವುದು ಸರಿಯಲ್ಲ. ನಾಗಾ ಸಾಧುಗಳು ಹೇಗೆ ಆಗುತ್ತಾರೆ ಎಂದು ತಿಳಿದು ಮಾತನಾಡಿ ಎಂದು ಒಬ್ಬಾತ ಆಕ್ರೋಶ ಹೊರಹಾಕಿದ್ದಾನೆ.
Recommended Video
ಪೂಜಾ ಹೇಳಿಕೆಗೆ ಬೆಂಬಲವೂ ವ್ಯಕ್ತವಾಗಿದೆ
ಪೂಜಾ ಹೇಳಿಕೆಗೆ ಪರವಾಗಿ ಬಂದಿರುವ ಒಂದು ಕಮೆಂಟ್ನಲ್ಲಿ, ' ಧರ್ಮದ ಹೆಸರಲ್ಲಿ ಬೆತ್ತಲೆ ತಿರುಗುವುದು, ಹಿಂಸಾತ್ಮಕ ಪ್ರವೃತ್ತಿ ಪ್ರದರ್ಶಿಸುವುದು, ಗಾಂಜಾ ಸೇದುವುದು ಇವುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.